ಆ್ಯಪ್ನಗರ

ಗಂಭೀರ್‌ ಪ್ರಕಾರ ಟೀಮ್‌ ಇಂಡಿಯಾದ ಬೆಸ್ಟ್‌ ಕ್ಯಾಪ್ಟನ್‌ ನಮ್ಮ ಕನ್ನಡಿಗ!

ಟೀಮ್‌ ಇಂಡಿಯಾ ನಾಯಕ ಯಾರು ಎಂಬ ಪ್ರಶ್ನೆಗೆ ಬಹುತೇಕ ಎಲ್ಲರ ಉತ್ತರ ಬೆಂಗಾಲ್‌ ದಾದಾ ಸೌರವ್‌ ಗಂಗೂಲಿ ಅಥವಾ ರಾಂಚಿ ದಾದಾ ಮಹೇಂದ್ರ ಸಿಂಗ್ ಧೋನಿ ಎಂಬುದೇ ಆಗಿತ್ತು. ಆದರೆ ಗೌತಮ್‌ ಗಂಭೀರ್‌ ಪ್ರಕಾರ ಇವರಿಬ್ಬರೂ ಅಲ್ಲ.

Vijaya Karnataka Web 9 Dec 2018, 9:00 pm
ಹೊಸದಿಲ್ಲಿ: ಇತ್ತೀಚೆಗಷ್ಟೇ ಎಲ್ಲ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಗೌತಮ್ ಗಂಭೀರ್‌ ಮತ್ತೊಂದು ಮಾಹಿತಿ ಬಹಿರಂಗಪಡಿಸಿದ್ದಾರೆ.
Vijaya Karnataka Web ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌


ಗಂಭೀರ್ ಪ್ರಕಾರ ಟೀಮ್‌ ಇಂಡಿಯಾದ ಅತ್ಯುತ್ತಮ ನಾಯಕ ಯಾರು ಗೊತ್ತೆ? ಅವರು ನಮ್ಮ ಕನ್ನಡಿಗರೇ.

ಪ್ರತಿಯೊಬ್ಬ ಕ್ರಿಕೆಟರ್‌ಗೆ ಕೇಳುವ ಪ್ರಶ್ನೆ ಒಂದೇ. ನಿಮ್ಮ ಫೇವರೀಟ್‌ ನಾಯಕ ಎನ್ನುವುದಾಗಿರುತ್ತದೆ.

ಬಹುತೇಕ ಎಲ್ಲರ ಉತ್ತರ ಬೆಂಗಾಲ್‌ ದಾದಾ ಸೌರವ್‌ ಗಂಗೂಲಿ ಅಥವಾ ರಾಂಚಿ ದಾದಾ ಮಹೇಂದ್ರ ಸಿಂಗ್ ಧೋನಿ ಎಂಬುದೇ ಆಗಿತ್ತು.

ಆದರೆ ಗೌತಮ್‌ ಗಂಭೀರ್‌ ಪ್ರಕಾರ ಇವರಿಬ್ಬರೂ ಅಲ್ಲ.

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಗೌತಮ್‌ ಗಂಭೀರ್‌ ಟೀಮ್‌ ಇಂಡಿಯಾವನ್ನು ಇದುವರೆಗೆ ಅತ್ಯುತ್ತಮವಾಗಿ ಮುನ್ನಡೆಸಿದ್ದು ಅನಿಲ್‌ ಕುಂಬ್ಳೆ ಎಂದು ಬಹಿರಂಗಪಡಿಸಿದ್ದಾರೆ.

ತಂಡದ ನಾಯಕ ಯಾರು ಬೇಕಾದರೂ ಆಗಬಹುದು, ಆದರೆ ತಂಡವನ್ನು ಮುಂದೆ ನಿಂತು ಕರೆದುಕೊಂಡು ಹೋಗುವುದು, ಎಲ್ಲರ ಗೌರವ ಸಂಪಾದಿಸುವುದು ಸೇರಿದಂತೆ ಎಲ್ಲ ನಾಯಕತ್ವ ಗುಣಗಳನ್ನು ಹೊಂದಿರಬೇಕಾಗುತ್ತದೆ. ಈ ಎಲ್ಲ ಗುಣಗಳು ಅನಿಲ್ ಭಾಯ್‌ ಅವರಲ್ಲಿತ್ತು. ಅನಿಲ್ ಕುಂಬ್ಳೆ ಗ್ರೇಟ್‌ ಕ್ಯಾಪ್ಟನ್‌ ಎಂದು ಗಂಭೀರ್‌ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌