ಆ್ಯಪ್ನಗರ

ಭಾರತಕ್ಕೆ ಮತ್ತೊಂದು ಗಾಯದ ಬರೆ, ಕಿವೀಸ್‌ ಪ್ರವಾಸದಿಂದ ಸಂಪೂರ್ಣವಾಗಿ ಹೊರಬಿದ್ದ ಇಶಾಂತ್‌!

ಟಿ20, ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ ಸರಣಿಗಳ ಸಲುವಾಗಿ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದು, ತನ್ನ ಅಭಿಯಾನ ಆರಂಭಿಸುವುದಕ್ಕೂ ಮೊದಲೇ ಬ್ಯಾಕ್‌ ಟು ಬ್ಯಾಕ್‌ ಗಾಯದ ಸಮಸ್ಯೆ ಎದುರಿಸಿದೆ.

Vijaya Karnataka Web 21 Jan 2020, 6:10 pm
ಹೊಸದಿಲ್ಲಿ: ಬಹು ಮಾದರಿಯ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಸಲುವಾಗಿ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದು, ತನ್ನ ಕಿವೀಸ್‌ ಅಭಿಯಾನ ಆರಂಭಕ್ಕೂ ಮೊದಲೇ ಒಂದರ ಹಿಂದೆ ಒಂದರಂತೆ ಗಾಯದ ಸಮಸ್ಯೆಗಳ ಹೊಡೆತ ಅನುಭವಿಸಿದೆ.
Vijaya Karnataka Web ishant sharma 2020


ಕಿವೀಸ್‌ ಪ್ರವಾಸದಲ್ಲಿ ಭಾರತ ತಂಡ ಮೊದಲು 5 ಪಂದ್ಯಗಳ ಟಿ20, ನಂತರ 3 ಪಂದ್ಯಗಳ ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್‌ ಸರಣಿಗಳಲ್ಲಿ ಪೈಪೋಟಿ ನಡೆಸಲಿದೆ. ಮೊದಲಿಗೆ ಸೀಮಿತ ಓವರ್‌ಗಳ ಸರಣಿಗೆ ಶಿಖರ್‌ ಧವನ್‌ ಭುಜದ ಗಾಯದ ಸಮಸ್ಯೆ ಕಾರಣ ಹೊರಗುಳಿಯುವಂತಾದರೆ, ಇದೀಗ ಪಾದದ ಗಾಯಕ್ಕೆ ತುತ್ತಾಗಿರುವ ಇಶಾಂತ್‌ ಶರ್ಮಾ ಟೆಸ್ಟ್‌ ಸರಣಿಗೆ ಅಲಭ್ಯರಾಗಿರುವುದು ಪ್ರವಾಸಿ ಭಾರತಕ್ಕೆ ಭಾರಿ ಹೊಡೆತವನ್ನೇ ನೀಡಿದೆ.

ರಣಜಿ ಟ್ರೋಫಿಯಲ್ಲಿ ದಿಲ್ಲಿ ತಂಡದ ಪರ ಆಡುತ್ತಿದ್ದ ಇಶಾಂತ್‌, ವಿದರ್ಭ ವಿರುದ್ಧದ ಹಣಾಹಣಿಯಲ್ಲಿ ಸೋಮವಾರ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಗಾಯದ ಸಮಸ್ಯೆಯಿಂದ ಚೇತರಿಸಲು 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದ್ದು, ಫೆ.21ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗುವ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದ ಶರ್ಮಾ ಹೊರಬಿದ್ದಿದ್ದಾರೆ.

ಕಿರಿಯರ ವಿಶ್ವಕಪ್‌: 41ಕ್ಕೆ ಜಪಾನ್‌ ಆಲ್‌ಔಟ್‌, ಯಂಗ್‌ ಇಂಡಿಯಾಗೆ 10 ವಿಕೆಟ್‌ ಜಯ!

"ಇಶಾಂತ್‌ ಅವರ ಎಂಆರ್‌ಐ ಸ್ಕ್ಯಾನ್‌ ವರದಿ ಬಂದಿದ್ದು, ಪಾದದಲ್ಲಿನ ಮಾಂಸಖಂಡದಲ್ಲಿ ಹರಿತ ಕಂಡುಬಂದಿದೆ. ಹೀಗಾಗಿ ವೈದ್ಯರು ಅವರಿಗೆ ಚೇತರಿಸಲು 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದು ಪ್ರವಾಸಿ ಭಾರತ ತಂಡಕ್ಕೆ ಭಾರತಿ ಹಿನ್ನಡೆ ತಂದೊಡ್ಡಿದೆ," ಎಂದು ದಿಲ್ಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಿಹಾರ ಹೇಳಿದ್ದಾರೆ.

ಕೊಹ್ಲಿ vs ಸ್ಮಿತ್‌: ಇಬ್ಬರಲ್ಲಿ ಯಾರು ಬೆಸ್ಟ್ ಬ್ಯಾಟ್ಸ್‌ಮನ್‌ ಎಂಬುದಕ್ಕೆ ಅಂಕಿಅಂಶಗಳ ಉತ್ತರ!

"ಅದೃಷ್ಟವಶಾತ್‌ ಯಾವುದೇ ರೀತಿಯ ಮೂಳೆ ಮುರಿತ ಸಂಭವಿಸಿಲ್ಲ. ಆದರೆ, ಪಾದದ ಭಾಗದಲ್ಲಿ ಮಾಂಸಖಂಡ ಕೊಂಚ ಹರಿದಿದೆ. ಅವರಿಗೆ ನಡೆಯಲು ಸಾಧ್ಯವಾಗುತ್ತಿದ್ದಂತೆಯೇ, ಪುನರ್‌ ವಸತಿ ಸಲುವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ತೆರಳಲಿದ್ದಾರೆ," ಎಂದು ಹೇಳಿದ್ದಾರೆ.

'ಹಿಂದೂಸ್ತಾನ್‌ ಕೊ ಧೋನಿ ಕಾ ರೀಪ್ಲೇಸ್ಮೆಂಟ್‌ ಮಿಲ್‌ ಗಯಾ': ಅಖ್ತರ್‌ ಅಚ್ಚರಿಯ ಹೇಳಿಕೆ!

ಆದರೆ, ಇಶಾಂತ್‌ ಶರ್ಮಾ ಅವರ ಗಾಯದ ಸಮಸ್ಯೆ ಕುರಿತಾಗಿ ಬಿಸಿಸಿಐ ಈವರೆಗೆ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ದಿಲ್ಲಿ ತಂಡದ ಮತ್ತೊಬ್ಬ ಉದಯೋನ್ಮುಖ ಬೌಲರ್‌ ನವದೀಪ್‌ ಸೈನಿ ಅವರನ್ನು ಇಶಾಂತ್‌ ಸ್ಥಾನದಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌