ಆ್ಯಪ್ನಗರ

ಲಾರ್ಡ್ಸ್‌ನಲ್ಲಿ ಸಿಬ್ಬಂದಿಗೆ ನೆರವಾದ ಜೂನಿಯರ್ ತೆಂಡೂಲ್ಕರ್

ಇತ್ತೀಚೆಗೆ ಶ್ರೀಲಂಕಾದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧದ 19 ವಯೋಮಿತಿ ಯೂತ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದಂದಿನಿಂದ ಒಂದಲ್ಲ ಒಂದು ಕಾರಣಗಳಿಗಾಗಿ ಕ್ರೀಡಾಪುಟಗಳಲ್ಲಿ ಸುದ್ದಿಯಾಗುತ್ತಲೇ ಇರುವ ಅರ್ಜುನ್‌ ತೆಂಡೂಲ್ಕರ್‌ ಇದೀಗ ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ ಸುದ್ದಿಗೆ ಗ್ರಾಸವೊದಗಿಸಿದ್ದಾರೆ.

Vijaya Karnataka 11 Aug 2018, 10:46 am
ಬೆಂಗಳೂರು: ಇತ್ತೀಚೆಗೆ ಶ್ರೀಲಂಕಾದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧದ 19 ವಯೋಮಿತಿ ಯೂತ್‌ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದಂದಿನಿಂದ ಒಂದಲ್ಲ ಒಂದು ಕಾರಣಗಳಿಗಾಗಿ ಕ್ರೀಡಾಪುಟಗಳಲ್ಲಿ ಸುದ್ದಿಯಾಗುತ್ತಲೇ ಇರುವ ಅರ್ಜುನ್‌ ತೆಂಡೂಲ್ಕರ್‌ ಇದೀಗ ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ ಸುದ್ದಿಗೆ ಗ್ರಾಸವೊದಗಿಸಿದ್ದಾರೆ.
Vijaya Karnataka Web arjun tendulkar


ಆತಿಥೇಯ ಇಂಗ್ಲೆಂಡ್‌ ಮತ್ತು ವಿರಾಟ್‌ ಕೊಹ್ಲಿ ಪಡೆ ನಡುವೆ ಲಾರ್ಡ್ಸ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದ ನಡುವೆ ಶುಕ್ರವಾರ ಮಳೆ ಸುರಿಯುತ್ತಿದ್ದಾಗ ಮೈದಾನದ ಸಿಬ್ಬಂದಿ ಜತೆ ಕೈಜೋಡಿಸಿ ಗಮನ ಸೆಳೆದಿದ್ದಾರೆ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌. ಅವರ ಈ ‘ಸಾಹಸ’ವನ್ನು ಲಾರ್ಡ್ಸ್ ಕ್ರಿಕೆಟ್‌ ಮೈದಾನದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ. ಮೈದಾನ ಸಿಬ್ಬಂದಿಗೆ ಅರ್ಜುನ್‌ ನೆರವಾಗುತ್ತಿರುವುದನ್ನು ಟೀಂ ಇಂಡಿಯಾ ಕೋಚ್‌ ರವಿ ಶಾಸ್ತ್ರಿ, ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಎಲ್ಲರೂ ವೀಕ್ಷಿಸಿದ್ದಾರೆ.

ಅಂದಹಾಗೆ, ಸಚಿನ್‌ ತೆಂಡೂಲ್ಕರ್‌ ಪುತ್ರ ಎಂಸಿಸಿ ಉದಯೋನ್ಮುಖ ಕ್ರಿಕೆಟಿಗರ ಜತೆ ತರಬೇತಿ ನಡೆಸುವುದಕ್ಕಾಗಿ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದಾರೆ.


ಅರ್ಜುನ್‌ಗೆ ರಿಯಲ್‌ ಟೆಸ್ಟ್

ಶ್ರೀಲಂಕಾ ವಿರುದ್ಧದ ಯೂತ್‌ ಟೆಸ್ಟ್‌ ಸರಣಿಯನ್ನು ಭಾರತ 2-0 ಅಂತರದಿಂದ ಜಯಿಸಿತ್ತು. ಸಚಿನ್‌ ತೆಂಡೂಲ್ಕರ್‌ ಪುತ್ರನ ಪಾಲಿಗೆ ಅದು ಮೊದಲ ಅಂತಾರಾಷ್ಟ್ರೀಯ ಸರಣಿಯಾಗಿತ್ತು. ಅರ್ಜುನ್‌ ತೆಂಡೂಲ್ಕರ್‌ ಅವರು ತಂದೆಯಂತೆ ಬರೇ ಬ್ಯಾಟ್ಸ್‌ಮನ್‌ ಅಲ್ಲ, ಉತ್ತಮ ಆಲ್‌ರೌಂಡರ್‌. ಮೊದಲ ಟೆಸ್ಟ್‌ನಲ್ಲಿ 65 ರನ್‌ ವೆಚ್ಚದಲ್ಲಿ 2 ವಿಕೆಟ್‌ ಉರುಳಿಸಿದ್ದ ಅರ್ಜುನ್‌ (ಬ್ಯಾಟಿಂಗ್‌ನಲ್ಲಿ ಸೊನ್ನೆ), 2ನೇ ಪಂದ್ಯದಲ್ಲಿ 72 ರನ್‌ ವೆಚ್ಚದಲ್ಲಿ 1 ವಿಕೆಟ್‌ ಉರುಳಿಸುವುದರ ಜತೆಗೆ 14 ರನ್‌ ಕೂಡ ಬಾರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌