ಆ್ಯಪ್ನಗರ

ಟಿ20 ತಂಡಕ್ಕೆ ಆಶಿಶ್‌ ನೆಹ್ರಾ ಪುನರಾಗಮನ

ಅಶ್ವಿನ್‌, ಜಡೇಜಾ ಮತ್ತೆ ಕಡೆಗಣನೆ | ದಿನೇಶ್‌ ಕಾರ್ತಿಕ್‌ಗೆ ಅವಕಾಶ ವಿಕ ಸುದ್ದಿಲೋಕ ಬೆಂಗಳೂರು ಪ್ರವಾಸಿ ಆಸ್ಪ್ರೇಲಿಯಾ ವಿರುದ್ಧ ಅ...

ವಿಕ ಸುದ್ದಿಲೋಕ 3 Oct 2017, 4:00 am

ಅಶ್ವಿನ್‌, ಜಡೇಜಾ ಮತ್ತೆ ಕಡೆಗಣನೆ | ದಿನೇಶ್‌ ಕಾರ್ತಿಕ್‌ಗೆ ಅವಕಾಶ

ಬೆಂಗಳೂರು: ಪ್ರವಾಸಿ ಆಸ್ಪ್ರೇಲಿಯಾ ವಿರುದ್ಧ ಅ.7ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 38 ವರ್ಷದ ಅನುಭವಿ ವೇಗಿ ಆಶಿಶ್‌ ನೆಹ್ರಾ 8 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

2017ರ ಫೆ.1ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧದ ನಡೆದ ಟಿ20 ಪಂದ್ಯದಲ್ಲಿ ಆಡಿದ ನಂತರ, ಗಾಯದ ಕಾರಣ ಆಶಿಶ್‌ ನೆಹ್ರಾ ತಂಡದಿಂದ ಹೊರಗುಳಿದಿದ್ದರು. ಆದರೆ 38ನೇ ವರ್ಷದಲ್ಲಿ ಮತ್ತೊಮ್ಮೆ ತಂಡಕ್ಕೆ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಶಿಶ್‌ ನೆಹ್ರಾ ಆಯ್ಕೆ ಹಲವರ ಹುಬ್ಬೇರಿಸುವಂತೆ ಮಾಡಿದ್ದರೂ, ಟಿ20 ಕ್ರಿಕೆಟ್‌ನಲ್ಲಿ ನೆಹ್ರಾ ಈಗಲೂ ತಮ್ಮ ಖದರ್‌ ಉಳಿಸಿಕೊಂಡಿದ್ದಾರೆ. ಅಲ್ಲದೆ ಅವರ ಅಪಾರ ಅನುಭವ ಡ್ರೆಸಿಂಗ್‌ ರೂಂನಲ್ಲಿ ಯುವ ಬೌಲರ್‌ಗಳಿಗೆ ನೆರವಾಗಲಿದೆ.

ಮತ್ತೊಂದೆಡೆ ಅಮೋಘ ಫಾರ್ಮ್‌ನಲ್ಲಿರುವ ತಮಿಳುನಾಡಿನ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌, ದಿಲ್ಲಿಯ ಯುವ ಸ್ಟಂಪರ್‌ ರಿಷಭ್‌ ಪಂತ್‌ ಅವರ ಸ್ಪರ್ಧೆಯನ್ನು ಹಿಮ್ಮೆಟ್ಟಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಸ್ಪ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದು, ಅಜಿಂಕ್ಯ ರಹಾನೆ ಸ್ಥಾನ ಕಳೆದುಕೊಂಡಿದ್ದಾರೆ. ಆಸೀಸ್‌ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ರಹಾನೆ ಸತತ ನಾಲ್ಕು ಅರ್ಧಶತಕಗಳೊಂದಿಗೆ ಮಿಂಚಿದ್ದರು. ಏಕದಿನ ತಂಡದಲ್ಲಿದ್ದ ವೇಗಿಗಳಾದ ಮೊಹಮ್ಮದ್‌ ಶಮಿ ಮತ್ತು ಉಮೇಶ್‌ ಯಾದವ್‌ಗೂ ಟಿ20 ಸಂತದಲ್ಲಿ ಸ್ಥಾನ ನೀಡಲಾಗಿಲ್ಲ.

ಅಶ್ವಿನ್‌, ಜಡೇಜಾಗಿಲ್ಲ ಅವಕಾಶ

ಅನುಭವಿ ಆಲ್‌ರೌಂಡರ್‌ಗಳಾದ ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಅವರಿಗೆ ಟಿ20 ತಂಡದಲ್ಲೂ ಸ್ಥಾನ ನಿರಾಕರಿಸಲಾಗಿದೆ. ಆಸೀಸ್‌ ವಿರುದ್ಧದ ಏಕದಿನ ಸರಣಿಗೆ ಪ್ರಕಟಿಸಲಾಗಿದ್ದ ತಂಡದಿಂದಲೂ ಅಶ್ವಿನ್‌ ಮತ್ತು ಜಡೇಜಾ ಅವರನ್ನು ಹೊರಗಿಡಲಾಗಿತ್ತು. ಯುವ ಸ್ಪಿನ್ನರ್‌ಗಳಾದ ಕುಲ್‌ದೀಪ್‌ ಯಾದವ್‌, ಯುಜ್ವೇಂದ್ರ ಚಹಾಲ್‌ ಮತ್ತು ಅಕ್ಷ ರ್‌ ಪಟೇಲ್‌ ಉತ್ತಮ ಪ್ರದರ್ಶನ ತೋರುತ್ತಿರುವುದರಿಂದ ಅಶ್ವಿನ್‌ ಹಾಗೂ ಜಡೇಜಾ ಅವರಿಗೆ ಸ್ಥಾನ ನಿರಾಕರಿಸಲಾಗಿದೆ.

Vijaya Karnataka Web ashish nehra comeback to india t20 squad vs australia
ಟಿ20 ತಂಡಕ್ಕೆ ಆಶಿಶ್‌ ನೆಹ್ರಾ ಪುನರಾಗಮನ

ಭಾರತ ತಂಡ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ಮನೀಶ್‌ ಪಾಂಡೆ, ಕೇದಾರ್‌ ಜಾಧವ್‌, ಎಂ.ಎಸ್‌ ಧೋನಿ(ವಿಕೆಟ್‌ ಕೀಪರ್‌), ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ಕುಲ್‌ದೀಪ್‌ ಯಾದವ್‌, ಯುಜ್ವೇಂದ್ರ ಚಹಾಲ್‌, ಅಕ್ಷ ರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌, ಆಶಿಶ್‌ ನೆಹ್ರಾ.

ಟಿ20 ಸರಣಿಯ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಅ.7 ಮೊದಲ ಟಿ20 ರಾಂಚಿ

ಅ.10 ಮೂರನೇ ಟಿ20 ಗುವಾಹಟಿ

ಅ.13 ನಾಲ್ಕನೇ ಟಿ20 ಹೈದರಾಬಾದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌