ಆ್ಯಪ್ನಗರ

'ಕೆ.ಎಲ್‌ ರಾಹುಲ್‌ ದೊಡ್ಡ ಮ್ಯಾಚ್‌ ವಿನ್ನರ್‌' : ಕನ್ನಡಿಗನಿಗೆ ಸಲಾಂ ಎಂದ ಸ್ಕಾಟ್ ಸ್ಟೈರಿಸ್!

Scott Styris on KL Rahul comeback: ಮುಂಬರುವ ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡಕ್ಕೆ ಮರಳಿದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್ ಅವರನ್ನು ನ್ಯೂಜಿಲೆಂಡ್‌ ಮಾಜಿ ಆಲ್‌ರೌಂಡರ್ ಸ್ಕಾಟ್‌ ಸ್ಟೈರಿಸ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ತಂಡದ ಅತ್ಯಂತ ಮೌಲ್ಯಯುತ ಆಟಗಾರ; ಈ ಕಾರಣದಿಂದಲೇ ತಂಡಕ್ಕೆ ಸುಲಭವಾಗಿ ಮರಳಲಿದ್ದಾರೆ ಎಂದು ಹೇಳಿದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಏಷ್ಯಾ ಕಪ್‌ ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.

Authored byರಮೇಶ ಕೋಟೆ | Vijaya Karnataka Web 10 Aug 2022, 3:14 pm

ಹೈಲೈಟ್ಸ್‌:

  • ಆಗಸ್ಟ್‌ 27 ರಿಂದ ಆರಂಭವಾಗಲಿರುವ 2022ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ.
  • ಕೆ.ಎಲ್‌ ರಾಹುಲ್‌ ಭಾರತ ತಂಡದ ಅತ್ಯಂತ ಮೌಲ್ಯಯುತ ಆಟಗಾರ: ಸ್ಟೈರಿಸ್‌
  • ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕೆ.ಎಲ್ ರಾಹುಲ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web KL Rahul-Scott styris
ಕೆ.ಎಲ್‌ ರಾಹುಲ್‌-ಸ್ಕಾಟ್‌ ಸ್ಟೈರಿಸ್‌ (ಚಿತ್ರ: ಕೆ.ಎಲ್‌ ರಾಹುಲ್ ಟ್ವಿಟರ್‌, ಸ್ಟೈರಿಸ್ ಟ್ವಿಟರ್‌)
ಹೊಸದಿಲ್ಲಿ: ಭಾರತ ತಂಡಕ್ಕೆ ಕೆ.ಎಲ್‌ ರಾಹುಲ್‌ ಅತ್ಯಂತ ಮೌಲ್ಯಯುತ ಆಟಗಾರ. ಈ ಕಾರಣದಿಂದಲೇ 2022ರ ಏಷ್ಯಾ ಕಪ್‌ ಟೂರ್ನಿಗೆ ಇಶಾನ್‌ ಕಿಶನ್‌ ಅವರ ಬದಲು ಬಲಗೈ ಬ್ಯಾಟ್ಸ್‌ಮನ್‌ಗೆ ಅವಕಾಶ ಕಲ್ಪಿಸಲಾಗಿದೆ ಎಂದು ನ್ಯೂಜಿಲೆಂಡ್‌ ಮಾಜಿ ಆಲ್‌ರೌಂಡರ್‌ ಸ್ಕಾಟ್‌ ಸ್ಟೈರಿಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುಎಇ ಆತಿಥ್ಯದಲ್ಲಿ ಆಗಸ್ಟ್ 27 ರಿಂದ ಆರಂಭವಾಗುವ 2022ರ ಏಷ್ಯಾ ಕಪ್‌ ಟೂರ್ನಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು(ಬಿಸಿಸಿಐ) ಸೋಮವಾರ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತ್ತು. ನಿರೀಕ್ಷೆಯಂತೆ ನಾಯಕ ರೋಹಿತ್‌ ಶರ್ಮಾಗೆ ಮತ್ತೊರ್ವ ಆರಂಭಿಕನನ್ನಾಗಿ ಕೆ.ಎಲ್‌ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಏಷ್ಯಾ ಕಪ್‌ ಭಾರತ ತಂಡದಿಂದ ಇಶಾನ್‌ ಕಿಶನ್‌ ಅವರನ್ನು ಏಕೆ ಕೈ ಬಿಡಲಾಯಿತು ಹಾಗೂ ಇವರ ಸ್ಥಾನಕ್ಕೆ ಕೆ.ಎಲ್‌ ರಾಹುಲ್‌ ಲಗ್ಗೆ ಇಟ್ಟಿದ್ದಾರೆಯೇ ಎಂದು ಸ್ಪೋರ್ಟ್ಸ್‌18ನ 'ಸ್ಪೋರ್ಟ್ಸ್‌ ಓವರ್‌ ದಿ ಟಾಪ್‌' ಶೋನಲ್ಲಿ ಸ್ಕಾಟ್‌ ಸ್ಟೈರಿಸ್‌ಗೆ ಕೇಳಲಾಯಿತು.
ಫಾರ್ಮ್‌ಗೆ ಮರಳಲು ಕೆ.ಎಲ್‌ ರಾಹುಲ್‌ಗೆ ಕಠಿಣತೆ ಎದುರಾಗಬಹುದೆಂದ ಸ್ಕಾಟ್‌ ಸ್ಟೈರಿಸ್‌!
"ಇದು ಒಳ್ಳೆಯ ಪ್ರಶ್ನೆ. ಇದಕ್ಕೆ ಕೆಎಲ್‌ ರಾಹುಲ್ ಸರಳ ಉತ್ತರ. ಬಹುಶಃ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿರುತ್ತವೆ. ಆದರೆ, ಈ ಎಲ್ಲಾ ಪ್ರಶ್ನೆಗಳಿಗೂ ಸರಳ ಉತ್ತರ ಎಂದರೆ, ಕೆ.ಎಲ್‌ ರಾಹುಲ್. ಟೀಮ್ ಮ್ಯಾನೇಜ್‌ಮೆಂಟ್‌ ಹಾಗೂ ಸೆಲೆಕ್ಟರ್‌ಗಳಿಗೆ ಭಾರತ ತಂಡದಲ್ಲಿ ರಾಹುಲ್‌ ಎಷ್ಟು ಮೌಲ್ಯಯುತ ಆಟಗಾರ ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ," ಎಂದು ಹೇಳಿದರು.

ಕರ್ನಾಟಕ ಮೂಲದ ಆಟಗಾರ ಎಷ್ಟೊಂದು ಮೌಲ್ಯಯುತವಾಗಿದ್ದಾರೆಂಬುದಕ್ಕೆ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿರುವುದೇ ಸಾಕ್ಷಿ ಎಂದು ಕಿವೀಸ್‌ ಮಾಜಿ ಆಲ್‌ರೌಂಡ್‌ ಹೇಳಿದರು.

"ಕೆ.ಎಲ್‌ ರಾಹುಲ್‌ ತಂಡಕ್ಕೆ ಮರಳುವ ಜೊತೆಗೆ ಅವರಿಗೆ ಉಪ ನಾಯಕನ ಜವಾಬ್ದಾರಿಯನ್ನು ವಹಿಸಲಾಗಿದೆ. ಹಾಗಾಗಿ, ಭಾರತ ತಂಡದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಮುಂಚೂಣಿ ಆಟಗಾರ. ಕೆ.ಎಲ್‌ ರಾಹುಲ್‌ ಮರಳಿರುವುದು ಟೀಮ್‌ ಇಂಡಿಯಾ ಪಾಲಿಗೆ ಅದ್ಭುತ ಸಂಗತಿ. ಏಕೆಂದರೆ ಅವರು ದೊಡ್ಡ ಮ್ಯಾಚ್‌ ವಿನ್ನರ್‌," ಎಂದು ಅವರು ಗುಣಗಾನ ಮಾಡಿದ್ದಾರೆ.
India asia cup squad: ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ; ಬುಮ್ರಾ, ಹರ್ಷಲ್ ಔಟ್‌!
"ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಇಶಾನ್‌ ಕಿಶನ್‌ ಅನ್‌ ಲಕ್ಕಿ. ಅವರು ಎಡಗೈ ಬ್ಯಾಟ್ಸ್‌ಮನ್ ಆಗಿರುವುದರಿಂದ ತಂಡದಲ್ಲಿ ಇರಬೇಕಾಗಿತ್ತು ಎಂದು ಭಾವಿಸುತ್ತೇನೆ. ಬರೀ ಬಲಗೈ ಬ್ಯಾಟ್ಸ್‌ಮನ್‌ಗಳೇ ಇರುವ ಕಾರಣ ಇಶಾನ್‌ ಕಿಶನ್‌ಗೆ ಸಾಧ್ಯವಾದರೆ ತಂಡದಲ್ಲಿ ಅವಕಾಶ ಮಾಡಿಕೊಡಬೇಕು. ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡಕ್ಕೆ ಆಯ್ಕೆಯಾಗದೇ ಇರುವುದಕ್ಕೆ ಅವರಿಗೆ ನಿಜಕ್ಕೂ ಬೇಸರವಾಗಿರುತ್ತದೆ," ಎಂದು ಸ್ಕಾಟ್‌ ಸ್ಟೈರಿಸ್‌ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಮೊದಲ ಎದುರಾಳಿ ಪಾಕಿಸ್ತಾನ:
2022ರ ಏಷ್ಯಾ ಕಪ್‌ ಟೂರ್ನಿಯು ಆಗಸ್ಟ್‌ 27ರಂದೇ ಅಧಿಕೃತವಾಗಿ ಆರಂಭವಾಗಲಿದೆ. ಆದರೆ, ಆಗಸ್ಟ್‌ 28 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಟೂರ್ನಿಯ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌