ಆ್ಯಪ್ನಗರ

ಲಾಸ್ಟ್ ಬಾಲ್‌ನಲ್ಲಿ ಭಾರತ ಫಿನಿಶ್; ಇತಿಹಾಸ ನಿರ್ಮಿಸಿದ ಬಾಂಗ್ಲಾ ಮಹಿಳೆಯರಿಗೆ ಏಷ್ಯಾ ಕಪ್

ರೋಚಕ ಫೈನಲ್ ಮುಖಾಮುಖಿಯ ಕೊನೆಯ ಎಸೆತದಲ್ಲಿ ಭಾರತ ವಿರುದ್ಧ ವಿನ್ನಿಂಗ್ ರನ್ ಬಾರಿಸಿರುವ ಬಾಂಗ್ಲಾದೇಶ ಮಹಿಳೆಯರು ಮೊತ್ತ ಮೊದಲ ಬಾರಿಗೆ ಏಷ್ಯಾ ಕಪ್ ಟ್ವೆಂಟಿ-20 ಟೂರ್ನಮೆಂಟ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

Vijaya Karnataka Web 10 Jun 2018, 2:16 pm
ಕೌಲಾಲಂಪುರ: ರೋಚಕ ಫೈನಲ್ ಮುಖಾಮುಖಿಯ ಕೊನೆಯ ಎಸೆತದಲ್ಲಿ ಭಾರತ ವಿರುದ್ಧ ವಿನ್ನಿಂಗ್ ರನ್ ಬಾರಿಸಿರುವ ಬಾಂಗ್ಲಾದೇಶ ಮಹಿಳೆಯರು ಮೊತ್ತ ಮೊದಲ ಬಾರಿಗೆ ಏಷ್ಯಾ ಕಪ್ ಟ್ವೆಂಟಿ-20 ಟೂರ್ನಮೆಂಟ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.
Vijaya Karnataka Web harmanpreet-kaur-12


ಇದರೊಂದಿಗೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಸಮಯೋಚಿತ ಅರ್ಧಶತಕ (56) ಹಾಗೂ ಪೂನಂ ಯಾದವ್ (9ಕ್ಕೆ 4 ವಿಕೆಟ್) ಅವರ ಹೋರಾಟವು ವ್ಯರ್ಥವೆನಿಸಿದೆ.

113 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾಕ್ಕೆ ನಿಗರ್ ಸುಲ್ತಾನಾ (27) ಹಾಗೂ ರುಮಾನಾ ಅಹ್ಮದ್ (23) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಮೂರು ವಿಕೆಟುಗಳ ಅಂತರದ ರೋಚಕ ಗೆಲುವು ದಾಖಲಿಸಿತು.

ಕೊನೆಯ ಓವರ್‌ನಲ್ಲಿ ತಂಡದ ಗೆಲುವಿಗೆ 9 ರನ್‌ಗಳ ಅವಶ್ಯಕತೆಯಿತ್ತು. ಆದರೆ ನಾಯಕಿ ಹರ್ಮನ್‌ಪ್ರೀತ್ ಎಸೆದ ಕೊನೆಯ ಓವರ್‌ನ ಅಂತಿಮ ಎಸೆತದಲ್ಲಿ ಎರಡು ರನ್ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು.

ಬಾಂಗ್ಲಾ ಓಟಕ್ಕೆ ಕಡಿವಾಣ ಹಾಕಿದ ಪೂನಂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ ಒಂಬತ್ತು ರನ್ ಮಾತ್ರ ಬಿಟ್ಟು ಕೊಟ್ಟು ನಾಲ್ಕು ವಿಕೆಟುಗಳನ್ನು ಕಬಳಿಸಿ ಮಿಂಚಿದರು.

ವೇಗಿ ಶಿಖಾ ಪಾಂಡೆ ಗಾಯಗೊಂಡಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಈ ಮೂಲಕ ಏಳನೇ ಏಷ್ಯಾ ಕಪ್ ಕಿರೀಟಕ್ಕೆ ಧಕ್ಕೆಯುಂಟಾಗಿದೆ. ಅತ್ತ ಭಾರತ ಹೊರತಾಗಿ ಏಷ್ಯಾ ಕಪ್ ಗೆದ್ದ ಮೊದಲ ತಂಡವೆಂಬ ಗೌರವಕ್ಕೆ ಬಾಂಗ್ಲಾ ವನಿತೆಯರು ಪಾತ್ರವಾಗಿದ್ದಾರೆ.

ಈ ಮೊದಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಬಾರಿಸಿರುವ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡವು, ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 112 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು.

ನಾಯಕಿ ಹರ್ಮನ್‌ಪ್ರೀತ್ ಹೊರತಾಗಿ ಇತರೆ ಯಾವ ಬ್ಯಾಟ್ಸ್‌ವುಮನ್‌ಗಳಿಂದ ಸೂಕ್ತ ಬೆಂಬಲ ಸಿಗಲೇ ಇಲ್ಲ. ಏಕಾಂಕಿ ಹೋರಾಟ ನೀಡಿದ ಹರ್ಮನ್‌ಪ್ರೀತ್ 42 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿದರು.

ಕನ್ನಡತಿ ವೇದಾ ಕೃಷ್ಣಮೂರ್ತಿ (11) ಜತೆ ಐದನೇ ವಿಕೆಟ್‌ಗೆ 30 ರನ್ ಹಾಗೂ ಅಂತಿಮ ಹಂತದಲ್ಲಿ ಜೂಲನ್ ಗೋಸ್ವಾಮಿ (10) ಜತೆ 33 ರನ್‌ಗಳ ಅಮೂಲ್ಯ ಜತೆಯಾಟದಲ್ಲಿ ಹರ್ಮನ್‌ಪ್ರೀತ್ ಭಾಗಿಯಾಗಿದ್ದರು. ಈ ಮೂಲಕ ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದ್ದರು. ಇನ್ನುಳಿದಂತೆ ಮಿಥಾಲಿ ರಾಜ್ (11), ಸ್ಮೃತಿ ಮಂಧಾನಾ (7), ದೀಪ್ತಿ ಶರ್ಮಾ (4), ಅನುಜಾ ಪಾಟೀಲ್ (3), ತನಿಯ ಭಾಟಿಯಾ (3), ಶಿಖಾ ಪಾಂಡೆ (1) ವೈಫಲ್ಯ ಅನುಭವಿಸಿದರು.

ಬಾಂಗ್ಲಾ ಪರ ಖದೀಜಾ ತುಲ್ ಕುಬ್ರಾ ಹಾಗೂ ರುಮಾನಾ ಅಹ್ಮದ್ ತಲಾ ಎರಡು ವಿಕೆಟುಗಳನ್ನು ಕಬಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌