ಆ್ಯಪ್ನಗರ

ಪಾಕ್‌ ಟೆಸ್ಟ್‌ ತಂಡದ ಕ್ಯಾಪ್ಟನ್‌ ಪಟ್ಟ ಸರ್ಫರಾಜ್‌ ಅಹ್ಮದ್‌ ಕೈ ತಪ್ಪೋದು ಗ್ಯಾರಂಟಿ!

ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನಾಕ್‌ಔಟ್‌ ಹಂತಕ್ಕೇರಲು ವಿಫಲವಾದ ದಿನದಿಂದಲೇ ನಾಯಕತ್ವದ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಇದೀಗ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿನ ವೈಟ್‌ವಾಷ್‌ ಸೋಲಿನ ಬಳಿಕ ಕ್ಯಾಪ್ಟನ್ಸಿಯಿಂದ ಸರ್ಫರಾಜ್‌ ಅಹ್ಮದ್‌ ಅವರನ್ನು ಕಿತ್ತೊಗೆಯುವ ಎಲ್ಲಾ ಪ್ರಯತ್ನಗಳು ನಡೆದಿವೆ.

Vijaya Karnataka Web 17 Oct 2019, 4:48 pm
ಲಾಹೋರ್‌: ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಪಾಕಿಸ್ತಾನ ತಂಡ ವೈಟ್‌ವಾಷ್‌ ಸೋಲಿನ ಮುಖಭಂಗ ಅನುಭವಿಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆಯ ಕೂಗು ಭಾರಿ ಸದ್ದು ಮಾಡುತ್ತಿದ್ದು, ಪಾಕಿಸ್ತಾನದ ಸಂಸತ್ತಿನಲ್ಲೀ ಸರ್ಫರಾಜ್‌ ಅಹ್ಮದ್‌ ಅವರನ್ನು ನಾಯಕತ್ವದಿಂದ ಕೆಳಗಿಸುವ ಕುರಿತಾಗಿ ಚರ್ಚೆಯಾಗಿದೆ.
Vijaya Karnataka Web Sarfraz Ahmed test 2019


ಇತ್ತೀಚಿನ ವರದಿಗಳ ಪ್ರಕಾರ ಅನುಭವಿ ಬ್ಯಾಟ್ಸ್‌ಮನ್‌ ಅಝರ್‌ ಅಲಿಗೆ ಪಾಕ್‌ ಟೆಸ್ಟ್‌ ತಂಡದ ನಾಯಕತ್ವ ಲಭ್ಯವಾಗುವ ಸಾಧ್ಯತೆ ಹೆಚ್ಚಿದ್ದು, ವಿಕೆಟ್‌ಕೀಪರ್‌ ಮೊಹಮ್ಮದ್ ರಿಝ್ವಾನ್‌ ಉಪನಾಯಕನ ಜವಾಬ್ದಾರಿ ನಿಭಾಯಿಸುವುದು ಬಹುತೇಕ ಖಾತ್ರಿಯಾಗಿದೆ. ಇದರೊಂದಿಗೆ ಸರ್ಫರಾಜ್‌ ಟೆಸ್ಟ್‌ ತಂಡದ ನಾಯಕತ್ವ ಕಳೆದುಕೊಳ್ಳೋದು ಖಚಿತವಾಗಿದೆ.

ಬಿಸಿಸಿಐ ದಾದಾಗಿರಿ ಬಗ್ಗೆ ಕಾಮೆಂಟ್‌ ಮಾಡಿದ ಶೊಯೇಬ್ ಅಖ್ತರ್‌!

ಪಾಕಿಸ್ತಾನದ ತಂಡದ ಮುಖ್ಯ ಕೋಚ್‌ ಮತ್ತು ಆಯ್ಕೆದಾರ ಆಗಿರುವ ಮಿಸ್ಬಾ ಉಲ್‌ ಹಕ್‌ ಅವರಿಗೆ ನಾಯಕನಾಗಿ ಸರ್ಫರಾಜ್‌ ಅವರ ಪ್ರದರ್ಶನ ತೃಪ್ತಿ ನೀಡಿಲ್ಲ. ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ಮುಖ್ಯ ನಿರ್ವಾಹಕ ಅಧಿಕಾರಿ (ಸಿಇಒ) ವಾಸಿಂ ಖಾನ್‌ ಅವರಿಗೆ ವರದಿ ಮಾಡಿದ್ದಾರೆ.

ಮೂಲಗಳು ಹೇಳಿರುವಂತೆ ಸರ್ಫರಾಜ್‌ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕನಾಗಿ ಮುಂದುವರಿಯಬಾರದು ಎಂದು ಮಿಸ್ಬಾ ಉಲ್‌ ಹಕ್‌ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಗೂ ಮುನ್ನ ಯಾವುದೇ ರೀತಿಯ ನಾಯಕತ್ವದ ಗೊಂದಲಕ್ಕೆ ಸಿಲುಕಲು ಪಿಸಿಬಿಗೆ ಮನಸಿಲ್ಲ. ಈ ಮಧ್ಯೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕನ ಸ್ಥಾನಕ್ಕೆ ಮೊದಮ್ಮದ್‌ ಹಫೀಜ್‌ ಅವರ ಹೆಸರು ಮುಂಚೂಣಿಯಲ್ಲಿದೆ.

ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಫ್ಲೆಕ್ಸ್‌ ಹಿಗ್ಗಾಮುಗ್ಗ ಥಳಿಸಿ ಹೊಡೆದು ಹಾಕಿದ ಅಭಿಮಾನಿ

ಇನ್ನು ವರದಿಗಳ ಪ್ರಕಾರ ಪಿಸಿಬಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಯುವ ಆಟಗಾರನಿಗೆ ನಾಯಕತ್ವ ನೀಡಿ ಪ್ರಯೋಗ ನಡೆಸುವ ಇಂಗಿತ ಹೊಂದಿದೆ. ಒಂದು ವೇಳೆ ಪಾಕಿಸ್ತಾನ ತಂಡ ವೈಫಲ್ಯ ಅನುಭವಿಸಿದರೂ, ತಂಡ ಬದಲಾವಣೆಯ ಹಂತದಲ್ಲಿದೆ ಎಂಬ ಸಬೂಬು ನೀಡಲು ಸಾಧ್ಯವಾಗುತ್ತದೆ ಎಂಬುದು ಪಿಸಿಬಿ ಲೆಕ್ಕಾಚಾರವಾಗಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಸೀಮಿತ ಓವರ್‌ಗಳಲ್ಲಿ ಹ್ಯಾರಿಸ್‌ ಸೊಹೇಲ್‌ ಮತ್ತು ಟೆಸ್ಟ್‌ ತಂಡದಲ್ಲಿ ಬಾಬರ್‌ ಆಝಮ್‌ ಪಾಕಿಸ್ತಾನ ತಂಡಗಳನ್ನು ಮುನ್ನಡೆಸಬೇಕು ಎಂದು ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಸಲಹೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌