ಆ್ಯಪ್ನಗರ

ಲಂಕಾ ವಿರುದ್ಧದ ವೈಟ್‌ ವಾಷ್‌ ಸೋಲಿನ ಬಳಿಕ ಮಿಸ್ಬಾ ಉಲ್‌ ಹಕ್‌ ಹೇಳಿದ್ದೇನು ಗೊತ್ತಾ?

ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ತಂಡವಾಗಿರುವ ಪಾಕಿಸ್ತಾನ, ತನ್ನದೇ ತವರಿನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ 0-3 ಅಂತರದ ವೈಷ್‌ವಾಷ್‌ ಸೋಲಿನ ಮುಖಭಂಗ ಅನುಭವಿಸಿದೆ.

Vijaya Karnataka Web 10 Oct 2019, 7:27 pm
ಲಾಹೋರ್‌: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ ತಂಡ 0-3 ಅಂತರದ ವೈಟ್‌ವಾಷ್‌ ಸೋಲಿನ ಮುಖಭಂಗಕ್ಕೆ ತುತ್ತಾಗಿದೆ. ಈ ಆಘಾತಕಾರಿ ಸೋಲಿನ ಕುರಿತಾಗಿ ಮಾತನಾಡಿರುವ ಪಾಕ್‌ ತಂಡದ ನೂತನ ಮುಖ್ಯ ಕೋಚ್‌ ಮತ್ತು ಆಯ್ಕೆದಾರ ಮಿಸ್ಬಾ ಉಲ್‌ ಹಕ್‌ ಅಚ್ಚರಿಗೆ ಒಳಗಾಗಿರುವುದಾಗಿ ಹೇಳಿದ್ದಾರೆ.
Vijaya Karnataka Web misbha ul haque pakistan coach


ಟಿ20 ಸರಣಿಗೂ ಮುನ್ನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 2-0 ಅಂತರದ ಜಯ ದಾಖಲಿಸಿದ್ದ ಪಾಕಿಸ್ತಾನ ತಂಡ, ಸ್ಟಾರ್‌ ಆಟಗಾರ ಕೊರೆತೆ ಅನುಭವಿಸಿದ್ದ ಶ್ರೀಲಂಕಾ ಎದುರು ಚುಟಕು ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವುದನ್ನು ಎದುರು ನೋಡುತ್ತಿತ್ತು. ಆದರೆ, ಅಚ್ಚರಿಯ ಪ್ರದರ್ಶನ ನೀಡಿದ ಲಂಕಾದ ಯುವ ಪಡೆ ವಿಶ್ವದ ನಂ.1 ಟಿ20 ತಂಡಕ್ಕೆ ಆಘಾತ ನೀಡಿ ಸರಣಿ ವೈಟ್‌ವಾಷ್‌ ಮಾಡಿತು.

ವಿರಾಟ್‌ ಕೊಹ್ಲಿ ಪಾಕಿಸ್ತಾನದಲ್ಲಿ ಆಡಬೇಕಂತೆ!

"ಎಲ್ಲಾ ವಿಭಾಗಗಳಲ್ಲೂ ಎದುರಾಳಿ ನಮ್ಮೆದುರು ಪ್ರಾಬಲ್ಯ ಮೆರೆದು ಜಯ ದಾಖಲಿಸಿದೆ. ಕಲಿಕೆಗೆ ನಮ್ಮ ತಂಡಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದ್ದು, ಎಲ್ಲ ಪಂದ್ಯಗಳು ಬಹುತೇಕ ಏಕಮುಖವಾಗಿದ್ದವು. ಇಲ್ಲಿ ಹಲವು ಪ್ರಶಸ್ನೆಗಳಿಗೆ ಉತ್ತರ ಕಂಡುಕೊಳ್ಳ ಬೇಕಿದೆ. ನಮ್ಮ ತಂಡ ಕಳಪೆ ಆಟವಾಡಿದೆ. ಖಂಡಿತಾ ಇದು ನನ್ನ ಜವಾಬ್ದಾರಿ. ತಪ್ಪಾಗಿರುವುದಾದರೂ ಎಲ್ಲಿ ಎಂಬುದನ್ನು ಆಲೋಚಿಸುತ್ತಿದ್ದೇನೆ. ಏಕೆಂದರೆ, ಇದೇ ತಂಡ ಇಂದು ನಂ.1 ಸ್ಥಾನಕ್ಕೆ ಕರೆತಂದಿದೆ. ಆದರೀಗ ಇಂಥದ್ದೊಂದು ಸೋಲು ಅಚ್ಚರಿಯುಂಟು ಮಾಡಿದೆ," ಎಂದಿದ್ದಾರೆ.

"ಕಳೆದ 10 ದಿನಗಳಲ್ಲಿ ನಾನು ತಂಡಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ. ಇದರಿಂದ ತಂಡದ ಸಮತೋಲನಕ್ಕೇನು ತೊಂದರೆಯಾಗಿಲ್ಲ. ಇದಕ್ಕೆ ನನ್ನನ್ನು ಹೊಣೆಯನ್ನಾಗಿಸಬಹುದು. ಆದರೆ, ನಾನು ಕೋಚ್‌ ಆಗಿ ಅಧಿಕಾರ ಪಡೆದ ಅಲ್ಪ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ತರಲು ಖಂಡಿತಾ ಸಾಧ್ಯವಿಲ್ಲ," ಎಂದು ಮಿಸ್ಬಾ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ನಾಯಕತ್ವ ಉಳಿಸಿಕೊಂಡ ಸರ್ಫರಾಝ್‌

"ರಣತಂತ್ರ ಸುಲಭ. ಪವರ್‌ ಪ್ಲೇ ಓವರ್‌ಗಳ ಸದ್ಬಳಕೆ. ಅಂತಿಮ ಓವರ್‌ಗಳಲ್ಲಿ ಆಲ್‌ಔಟ್‌ಗೆ ಮುಂದಾಗುವುದು. ಆದರೆ, ಈ ಸರಣಿಯಲ್ಲಿ ನಮ್ಮ ರಣತಂತ್ರವನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದೇವೆ. ಬ್ಯಾಟ್‌, ಬಾಲ್‌ ಮತ್ತು ಫೀಲ್ಡಿಂಗ್‌ನಲ್ಲೂ ಹಿನ್ನಡೆ ಅನುಭವಿಸಿದೆವು," ಎಂದು ವಿವರಿಸಿದ್ದಾರೆ.

ಟಿ20 ಸರಣಿಯ ಮೊದಲ ಪಂದ್ಯದಲ್ಲಿ 64 ರನ್‌ಗಳ ಜಯ ದಾಖಲಿಸಿದ ಶ್ರೀಲಂಕಾ, ಬಳಿಕ 2ನೇ ಪಂದ್ಯದಲ್ಲಿ 35 ರನ್‌ ಮತ್ತು 3ನೇ ಪಂದ್ಯದಲ್ಲಿ 13 ರನ್‌ಗಳ ಜಯ ದಾಖಲಿಸಿ ಸರಣಿ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಶ್ರೀಲಂಕಾ ಭರ್ಜರಿ ಪ್ರದರ್ಶನ ನೀಡಿದ್ದು, 2020ರ ಟಿ20 ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಕಡೆಗೆ ಶ್ರಮಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌