ಆ್ಯಪ್ನಗರ

ಟೀಮ್‌ ಇಂಡಿಯಾ ವಿರದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಪ್ರವಾಸಿ ಬಾಂಗ್ಲಾದೇಶ!

ವಿಶ್ವಕಪ್‌ ವೈಫಲ್ಯದ ಬಳಿಕ ಮತ್ತಷ್ಟು ಹಳ್ಳ ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡ ಸತತ ಸರಣಿಗಳಲ್ಲಿ ಸೋತು ಕಂಗಾಲಾಗಿದೆ. ಇದೀಗ 3 ಪಂದ್ಯಗಳ ಟಿ20 ಮತ್ತು 2 ಪಂದ್ಯಗಳ ಟೆಸ್ಟ್‌ ಸರಣಿ ಸಲುವಾಗಿ ಬಾಂಗ್ಲಾ ಪಡೆ ಭಾರತ ಪ್ರವಾಸ ಕೈಗೊಳ್ಳಳಿದ್ದು, ಮೊದಲಿಗೆ ಟಿ20 ಕ್ರಿಕೆಟ್‌ ತಂಡವನ್ನು ಪ್ರಕಟ ಮಾಡಿದೆ.

Vijaya Karnataka Web 17 Oct 2019, 8:49 pm
ಬೆಂಗಳೂರು: ಆತಿಥೇಯ ಭಾರತ ವಿರುದ್ಧದ 3 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿ ಸಲುವಾಗಿ ಪ್ರವಾಸಿ ಬಾಂಗ್ಲಾದೇಶ ತನ್ನ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದ್ದು, ಅನುಭವಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ತಮಿಮ್‌ ಇಕ್ಬಾಲ್‌ ತಂಡಕ್ಕೆ ಮರಳಿದ್ದಾರೆ ಎಂದು ಕ್ರಿಕ್‌ ಇನ್ಫೋ ವರದಿ ಮಾಡಿದೆ.
Vijaya Karnataka Web Ind vs Ban cricket 2019


ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ವೈಟ್‌ವಾಷ್‌ ಸೋಲಿನ ಆಘಾತಕ್ಕೆ ಒಳಗಾಗಿದ್ದ ಬಾಂಗ್ಲಾದೇಶ ತಂಡ, ಬಳಿಕ ಅಫಘಾನಿಸ್ತಾನ ಮತ್ತು ಜಿಂಬಾಬ್ವೆ ತಂಡಗಳನ್ನು ಒಳಗೊಂಡ ತ್ರಿಕೋನ ಟಿ20 ಕ್ರಿಕೆಟ್‌ ಸರಣಿಯಲ್ಲೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೆ ಅಫನ್‌ ಪಡೆ ಎದುರು ಪ್ರಶಸ್ತಿ ಹಂಚಿಕೊಂಡಿತ್ತು.

'ಕ್ಯಾಪ್ಟನ್‌ ಕೂಲ್‌' ಆಗಿದ್ದು ಹೇಗೆ ಎಂಬುದನ್ನು ವಿವರಿಸಿದ ಎಂಎಸ್‌ ಧೋನಿ!

ಗಾಯದ ಮೇಲೆ ಬರೆ ಎಂಬಂತೆ ತನ್ನದೇ ನೆಲದಲ್ಲಿ ನಡೆದ ಪ್ರವಾಸಿ ಅಫಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲನುಭವಿಸುವ ಮೂಲಕ ಭಾರಿ ನಿರಾಸೆಗೆ ಒಳಗಾಗಿದೆ. ಇದೀಗ ಶಕಿಬ್‌ ಅಲ್‌ ಹಸನ್‌ ಅವರ ಸಾರಥ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಮೊದಲಿಗೆ ನವೆಂಬರ್‌ 3ರಿಂದ 10ರವರೆಗೆ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನಾಡಲಿದೆ. ಈ ಮೂಲಕ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಇತ್ತಂಡಗಳು ಭರದ ಸಿದ್ದತೆ ಕೈಗೊಳ್ಳಲಿವೆ.

ರಾಂಚಿಯಲ್ಲಿ ಶುಭಮನ್ ಗಿಲ್‌ಗೆ ಸಿಗಲಿದೆಯೇ ಟೆಸ್ಟ್ ಡೆಬ್ಯು ಭಾಗ್ಯ?

ಟಿ20 ಕ್ರಿಕೆಟ್‌ ಸರಣಿ ಬಳಿಕ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನ ಭಾಗವಾಗಿ ಭಾರತ ಮತ್ತು ಬಾಂಗ್ಲಾ ತಂಡಗಳು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಕಾದಾಟ ನಡೆಸಲಿವೆ. ಮೊದಲ ಟೆಸ್ಟ್‌ ಪಂದ್ಯ ಇಂದೋರ್‌ನಲ್ಲಿ ನವೆಂಬರ್‌ 14ರಿಂದ 18ರವರೆಗೆ ನಡೆಯಲಿದ್ದು, 2ನೇ ಟೆಸ್ಟ್‌ ನವೆಂಬರ್‌ 22ರಿಂದ 26ರವರೆಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಅಂದಹಾಗೆ ಕೋಲ್ಕತಾದಲ್ಲಿ ನಡೆಯಲಿರುವ ಈ ಟೆಸ್ಟ್‌ ಪಂದ್ಯವನ್ನು ಭಾರತ ಮತ್ತು ಬಾಂಗ್ಲಾದೇಶದ ಪ್ರಧಾನಿಗಳು ವೀಕ್ಷಿಸುವ ಯೋಜನೆ ಮಾಡಲಾಗಿದೆ.

ರಿಷಬ್ ಪಂತ್‌ಗೆ ಟೀಮ್ ಇಂಡಿಯಾ ಬಾಗಿಲು ಮುಚ್ಚಿತೇ?

ಭಾರತ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಗೆ ಬಾಂಗ್ಲಾ ಪ್ರಕಟಿಸಿರುವ ತಂಡ ಹೀಗಿದೆ
ತಮಿಮ್‌ ಇಕ್ಬಾಲ್‌, ಶಾಕಿಬ್‌ ಅಲ್‌ ಹಸನ್‌ (ನಾಯಕ), ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ಮೊಹಮ್ಮದ್‌ ನಯೀಮ್‌, ಮುಷ್ಫಿಕ್‌ ರಹೀಮ್‌, ಮಹ್ಮೂದುಲ್ಲ, ಆಫಿಫ್‌ ಹುಸೇನ್‌, ಮೊಸಾದೆಕ್‌ ಹೊಸೇನ್‌, ಅಮಿನುಲ್‌ ಇಸ್ಲಾಮ್‌, ಅರಾಫತ್‌ ಸನ್ನಿ, ಮೊಹಮ್ಮದ್‌ ಸೈಫುದ್ದೀನ್‌, ಅಲ್‌ ಅಮಿನ್‌ ಹುಸೇನ್‌, ಮುಸ್ತಾಫಿಜುರ್‌ ರೆಹಮಾನ್‌, ಶಫಿಯುಲ್‌ ಇಸ್ಲಾಮ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌