ಆ್ಯಪ್ನಗರ

ನ್ಯೂಜಿಲೆಂಡ್ ಚರ್ಚ್ ದಾಳಿಯಿಂದ ಬಾಂಗ್ಲಾ ಆಟಗಾರರು ಪಾರು; ಪಂದ್ಯ ರದ್ದು

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಾಳಿಯ ವೇಳೆ ಬಾಂಗ್ಲಾದೇಶ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ. ಪ್ರಸ್ತುತ ಬಾಂಗ್ಲಾ ಹಾಗೂ ಕಿವೀಸ್ ನಡುವಣ ತೃತೀಯ ಟೆಸ್ಟ್ ಪಂದ್ಯವನ್ನು ರದ್ದು ಪಡಿಸಲಾಗಿದೆ.

Vijaya Karnataka Web 15 Mar 2019, 11:45 am
ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ಮಸೀದಿಯೊಂದಕ್ಕೆ ಬಂದೂಕುದಾರಿಗಳು ನಡೆಸಿದ ದಾಳಿಯ ವೇಳೆ ಬಾಂಗ್ಲಾದೇಶ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.
Vijaya Karnataka Web bangladesh


ಇದರಿಂದ ಸಂಭವಿಸಬಹುದಾದ ಮಹಾ ದುರಂತವೊಂದು ತಪ್ಪಿದೆ. ಶುಕ್ರವಾರ ನಡೆದ ದಾಳಿಯ ವೇಳೆ ಬಾಂಗ್ಲಾದೇಶ ಬಹುತೇಕ ಕ್ರಿಕೆಟಿಗರು ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು ಎಂದು ಬಾಂಗ್ಲಾ ಕ್ರಿಕೆಟ್ ವಕ್ತಾರ ಜಲಾಲ್ ಯೂನಸ್ ತಿಳಿಸಿದ್ದಾರೆ.

ನಾವೆಲ್ಲರೂ ಸುರಕ್ಷಿತರಾಗಿದ್ದೇವೆ. ಆದರೆ ಮಾನಸಿಕ ಆಘಾತವುಂಟಾಗಿದೆ. ನಾವೆಲ್ಲರೂ ಹೋಟೆಲ್ ಕೊಠಡಿಯಲ್ಲೇ ಉಳಿದುಕೊಳ್ಳಲು ಸೂಚಿಸಲಾಗಿದೆ ಎಂದು ಯೂನಸ್ ತಿಳಿಸಿದ್ದಾರೆ.

ಶೂಟರ್‌ಗಳಿಂದ ತಂಡದೆಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆ. ಬೆಚ್ಚಿ ಬೀಳಿಸುವ ಅನುಭವ. ನಮಗಾಗಿ ಪ್ರಾರ್ಥಿಸಿ ಎಂದು ಕಿವೀಸ್ ಪ್ರವಾಸದಲ್ಲಿರುವ ಹಿರಿಯ ಕ್ರಿಕೆಟಿಗ ತಮೀಮ್ ಇಕ್ಬಾಲ್ ಖಾನ್ ಟ್ವೀಟ್ ಮಾಡಿದ್ದಾರೆ.

ಘಟನೆಯ ಹಿನ್ನಲೆಯಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಪಡಿಸಲಾಗಿದೆ. ಈಗ ನಗರದ್ಯಾಂತ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸರು ಬಿಗು ಭದ್ರತೆಯನ್ನು ಒದಗಿಸುತ್ತಿದ್ದಾರೆ.
ಇತ್ತಂಡಗಳ ಆಟಗಾರರು ಸುರಕ್ಷಿತವಾಗಿದ್ದಾರೆ.
ದಾಳಿ ನಡೆಯುವ ವೇಳೆ ಆಟಗಾರರು ಮಸೀದಿಯ ಒಳಗಿರಲಿಲ್ಲ. ಇದರಿಂದಾಗಿ ಅಪಾಯದಿಂದ ಪಾರುವಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌