ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಕಟ!
ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗಳನ್ನಾಡಿ ಐತಿಹಾಸಿಕ ಜಯ ದಾಖಲಿಸುವುದರೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿರುವ ಬಾಂಗ್ಲಾದೇಶ ತಂಡ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸಿದೆ.
Vijaya Karnataka Web 9 Sep 2021, 4:17 pm
ಹೈಲೈಟ್ಸ್:
- ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಪ್ರಟಕ.
- ಅನುಭವಿ ಆಲ್ರೌಂಡರ್ ಮಹ್ಮೂದುಲ್ಲ ನಾಯಕನ ಸ್ಥಾನದಲ್ಲಿ ಮುಂದುವರಿಕೆ.
- ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಅನುಭವಿ ವೇಗಿ ರುಬೆಲ್ ಹೊಸೇನ್ಗೆ ಸ್ಥಾನ.
ಢಾಕಾ: ಬಾಂಗ್ಲಾದೇಶ ತಂಡದ ಪರ ಹಲವು ನಿರ್ಣಾಯಕ ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಅನುಭವಿ ವೇಗಿ ರುಬೆಲ್ ಹೊಸೇನ್, ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಪ್ರಕಟ ಮಾಡಲಾದ ಬಾಂಗ್ಲಾ ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ. ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಗುರುವಾರ ಐಸಿಸಿ ಟಿ20 ಕ್ರಿಕೆಟ್ ವಿಶ್ದವಕಪ್ ಟೂರ್ನಿ ಸಲುವಾಗಿ ತನ್ನ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದ್ದು, ರುಬೆಲ್ ಹೊಸೇನ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರೂ, ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಅನುಭವಿ ಆಲ್ರೌಂಡರ್ ಮಹ್ಮೂದುಲ್ಲ ಅವರನ್ನು ನಿರೀಕ್ಷೆಯಂತೆ ನಾಯಕನ ಪಟ್ಟದಲ್ಲಿ ಬಿಸಿಬಿ ಮುಂದುವರಿಯುವಂತೆ ಮಾಡಿದೆ. ಅಕ್ಟೋಬರ್ 17ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಟೂರ್ನಿ ಶುರುವಾಗಲಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ, ಎಂಎಸ್ ಧೋನಿ ಮೆಂಟರ್!
ಈ ನಡುವೆ ಟಿ20 ಕ್ರಿಕೆಟ್ ಆಡಲು ಬೇಕಿದ್ದ ಅಗತ್ಯದ ಅಭ್ಯಾಸದ ಕೊರತೆಯ ಕಾರಣ ನೀಡಿ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ತಮಿಮ್ ಇಕ್ಬಾಲ್ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಆಲ್ರೌಂಡರ್ ಸೌಮ್ಯ ಸರ್ಕಾರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಬಾಂಗ್ಲಾ 4-1 ಅಂತರದ ಭರ್ಜರಿ ಜಯ ದಾಖಲಿಸಿತ್ತಾದರೂ, ಆ ಸರಣಿಯಲ್ಲಿ ಸೌಮ್ಯ ಸರ್ಕಾರ್ ಪ್ರದರ್ಶನ ಬಹಳಾ ಕಳಪೆಯದ್ದಾಗಿತ್ತು. ಆದರೂ ಅನುಭವದ ಆಧಾರದ ಮೇರೆಗೆ ಸೌಮ್ಯ ಸರ್ಕಾರ್ಗೆ ವಿಶ್ವಕಪ್ ಟಿಕೆಟ್ ಕೊಡಲಾಗಿದೆ.
ಇತ್ತೀಚೆಗಷ್ಟೇ ಪರಿಣತ ವಿಕೆಟ್ಕೀಪರ್ ಜವಾಬ್ದಾರಿಯನ್ನು ತೊರೆದು ಕೇವಲ ಬ್ಯಾಟ್ಸ್ಮನ್ ಆಗಿ ಆಡಲು ಮುಷ್ಫಿಕರ್ ರಹೀಮ್ ನಿರ್ಧರಿಸಿರುವ ಕಾರಣ ನೂರುಲ್ ಹಸನ್ ವಿಕೆಟ್ ಹಿಂಬದಿಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಈ ನಡುವೆ ರುಬೆಲ್ ಹೊಸೇನ್ ಮತ್ತು ಸ್ಪಿನ್ನರ್ ಅಮಿನುಲ್ ಇಸ್ಲಾಮ್ ಅವರನ್ನು ಕಾಯ್ದಿರಿಸಿದ ಆಟಗಾರರಾಗಿ ತಂಡ ಸೇರಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಣ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ!
ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಗ್ರೂಪ್ ಹಂತದಲ್ಲಿ ಸ್ಪರ್ಧಿಸಿ ಸೂಪರ್ 12 ಹಂತಕ್ಕೆ ಅರ್ಹತೆ ಗಿಟ್ಟಿಸುವ ಪ್ರಯತ್ನ ಮಾಡಲಿರುವ ಬಾಗ್ಲಾದೇಶ ಮೊದಲಿಗೆ ಸ್ಕಾಟ್ಲೆಂಡ್ ಎದುರು ಅಕ್ಟೋಬರ್ 17ರಂದು ಪೈಪೋಟಿ ನಡೆಸಲಿದೆ. ನಂತರ ಪಪುವಾ ನ್ಯೂ ಗಿನಿ ಮತ್ತು ಒಮಾನ್ ತಂಡಗಳ ಸವಾಲು ಎದುರಿಸಲಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಹೀಗಿದೆ
ಮಹ್ಮೂದುಲ್ಲ (ನಾಯಕ), ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕಿಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಆಫಿಫ್ ಹೊಸೇನ್, ನೂರುಲ್ ಹಸನ್, ಮೆಹ್ದಿ ಹಸನ್, ನಸುಮ್ ಅಹ್ಮದ್, ಮುಸ್ತಾಫಿಝುರ್ ರೆಹಮಾನ್, ಶೊರಿಫುಲ್ ಇಸ್ಲಾಮ್, ತಾಸ್ಕಿನ್ ಅಹ್ಮದ್, ಮೊಹಮ್ಮದ್ ಸೈಫುದ್ದೀನ್, ಶಮಿಮ್ ಹೊಸೇನ್.
ಕಾಯ್ದಿರಿಸಿದ ಆಟಗಾರರು: ರುಬೆಲ್ ಹೊಸೇನ್ ಮತ್ತು ಅಮಿನುಲ್ ಇಸ್ಲಾಮ್.
ಇತ್ತೀಚೆಗಷ್ಟೇ ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟ ಅನುಭವಿ ಆಲ್ರೌಂಡರ್ ಮಹ್ಮೂದುಲ್ಲ ಅವರನ್ನು ನಿರೀಕ್ಷೆಯಂತೆ ನಾಯಕನ ಪಟ್ಟದಲ್ಲಿ ಬಿಸಿಬಿ ಮುಂದುವರಿಯುವಂತೆ ಮಾಡಿದೆ. ಅಕ್ಟೋಬರ್ 17ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಟೂರ್ನಿ ಶುರುವಾಗಲಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ, ಎಂಎಸ್ ಧೋನಿ ಮೆಂಟರ್!
ಈ ನಡುವೆ ಟಿ20 ಕ್ರಿಕೆಟ್ ಆಡಲು ಬೇಕಿದ್ದ ಅಗತ್ಯದ ಅಭ್ಯಾಸದ ಕೊರತೆಯ ಕಾರಣ ನೀಡಿ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ತಮಿಮ್ ಇಕ್ಬಾಲ್ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಆಲ್ರೌಂಡರ್ ಸೌಮ್ಯ ಸರ್ಕಾರ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಬಾಂಗ್ಲಾ 4-1 ಅಂತರದ ಭರ್ಜರಿ ಜಯ ದಾಖಲಿಸಿತ್ತಾದರೂ, ಆ ಸರಣಿಯಲ್ಲಿ ಸೌಮ್ಯ ಸರ್ಕಾರ್ ಪ್ರದರ್ಶನ ಬಹಳಾ ಕಳಪೆಯದ್ದಾಗಿತ್ತು. ಆದರೂ ಅನುಭವದ ಆಧಾರದ ಮೇರೆಗೆ ಸೌಮ್ಯ ಸರ್ಕಾರ್ಗೆ ವಿಶ್ವಕಪ್ ಟಿಕೆಟ್ ಕೊಡಲಾಗಿದೆ.
ಇತ್ತೀಚೆಗಷ್ಟೇ ಪರಿಣತ ವಿಕೆಟ್ಕೀಪರ್ ಜವಾಬ್ದಾರಿಯನ್ನು ತೊರೆದು ಕೇವಲ ಬ್ಯಾಟ್ಸ್ಮನ್ ಆಗಿ ಆಡಲು ಮುಷ್ಫಿಕರ್ ರಹೀಮ್ ನಿರ್ಧರಿಸಿರುವ ಕಾರಣ ನೂರುಲ್ ಹಸನ್ ವಿಕೆಟ್ ಹಿಂಬದಿಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಈ ನಡುವೆ ರುಬೆಲ್ ಹೊಸೇನ್ ಮತ್ತು ಸ್ಪಿನ್ನರ್ ಅಮಿನುಲ್ ಇಸ್ಲಾಮ್ ಅವರನ್ನು ಕಾಯ್ದಿರಿಸಿದ ಆಟಗಾರರಾಗಿ ತಂಡ ಸೇರಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಣ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ!
ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ ಗ್ರೂಪ್ ಹಂತದಲ್ಲಿ ಸ್ಪರ್ಧಿಸಿ ಸೂಪರ್ 12 ಹಂತಕ್ಕೆ ಅರ್ಹತೆ ಗಿಟ್ಟಿಸುವ ಪ್ರಯತ್ನ ಮಾಡಲಿರುವ ಬಾಗ್ಲಾದೇಶ ಮೊದಲಿಗೆ ಸ್ಕಾಟ್ಲೆಂಡ್ ಎದುರು ಅಕ್ಟೋಬರ್ 17ರಂದು ಪೈಪೋಟಿ ನಡೆಸಲಿದೆ. ನಂತರ ಪಪುವಾ ನ್ಯೂ ಗಿನಿ ಮತ್ತು ಒಮಾನ್ ತಂಡಗಳ ಸವಾಲು ಎದುರಿಸಲಿದೆ.
ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಹೀಗಿದೆ
ಮಹ್ಮೂದುಲ್ಲ (ನಾಯಕ), ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಶಕಿಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಆಫಿಫ್ ಹೊಸೇನ್, ನೂರುಲ್ ಹಸನ್, ಮೆಹ್ದಿ ಹಸನ್, ನಸುಮ್ ಅಹ್ಮದ್, ಮುಸ್ತಾಫಿಝುರ್ ರೆಹಮಾನ್, ಶೊರಿಫುಲ್ ಇಸ್ಲಾಮ್, ತಾಸ್ಕಿನ್ ಅಹ್ಮದ್, ಮೊಹಮ್ಮದ್ ಸೈಫುದ್ದೀನ್, ಶಮಿಮ್ ಹೊಸೇನ್.
ಕಾಯ್ದಿರಿಸಿದ ಆಟಗಾರರು: ರುಬೆಲ್ ಹೊಸೇನ್ ಮತ್ತು ಅಮಿನುಲ್ ಇಸ್ಲಾಮ್.