ಬರೋಡಾ ವಿರುದ್ಧ 2 ವಿಕೆಟ್ ಸೋಲು|ಕ್ವಾರ್ಟರ್ಫೈನಲ್ ಪ್ರವೇಶ ಅನಿಶ್ಚಿತ
ವಡೋದರಾ: ಅದೃಷ್ಟಲಕ್ಷ್ಮಿ ನಿರಂತರ ಉಯ್ಯಾಲೆಯಾಡಿದ ಜಿದ್ದಾಜಿದ್ದಿನ ಸಮರದಲ್ಲಿ ಕೊನೆಗೂ ಕರ್ನಾಟಕ ತಂಡಕ್ಕೆ ಸೋಲುಂಟಾಯಿತು. ಆದರೆ ಅದು ವೀರರಿಗೆ ಒಪ್ಪುವ ಸೋಲಾಗಿತ್ತು. 2 ವಿಕೆಟ್ಗಳಿಂದ ಪರಾಭವಗೊಳ್ಳುವುದಕ್ಕೂ ಮೊದಲು ಮನೀಶ್ ಪಾಂಡೆ ಬಳಗ ಬರೋಡಾ ತಂಡದ ಬೆವರಿಳಿಸಿತು ಎಂಬುದು ಹೆಮ್ಮೆ ಪಡಬೇಕಾದ ಸಂಗತಿ.
ಇಲ್ಲಿನ ಮೋತಿಬಾಗ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ 2018-19ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೈಟ್ ಎ ಗುಂಪಿನ ಲೀಗ್ ಹಂತದ 8ನೇ ಹಾಗೂ ಕೊನೆಯ ಸುತ್ತಿನ ಹಣಾಹಣಿ ಎರಡೇ ದಿನಗಳಲ್ಲಿ ಮುಕ್ತಾಯಗೊಂಡು ಅಚ್ಚರಿ ಮೂಡಿಸಿತು. ನಾಲ್ಕು ದಿನಗಳ ಪಂದ್ಯ ಎರಡೇ ದಿನಗಳಲ್ಲಿ ಮುಕ್ತಾಯಗೊಳ್ಳುವಂತೆ ಕೆಟ್ಟದಾಗಿ ಪಿಚ್ ನಿರ್ಮಿಸಿದ ಕ್ಯುರೇಟರ್ಗೆ ಈ ಶ್ರೇಯ (!) ಸಂದಾಯವಾಗಬೇಕಿದೆ. ಮೊದಲ ದಿನ 22 ವಿಕೆಟ್ ಉರುಳಿದರೆ, 2ನೇ ದಿನ 16 ವಿಕೆಟ್ ಪತನಗೊಂಡವು.
ಸ್ಪಿನ್ ಮೋಡಿಗೆ ಬಲಿ : 2 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ ಸೋಮವಾರದ ಆಟ ಮುಗಿಸಿದ್ದ ಕರ್ನಾಟಕ ತಂಡ ಮಂಗಳವಾರ ಕ್ರೀಸಿನಲ್ಲಿ ನೆಲೆ ನಿಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದಕ್ಕೆ ಭಾರ್ಗವ್ ಭಟ್ ಮತ್ತು ದೀಪಕ್ ಹೂಡಾ ಆಸ್ಪದ ನೀಡಲಿಲ್ಲ. ಸೋಮವಾರ ಕ್ರೀಸ್ ಕಾಯ್ದುಕೊಂಡಿದ್ದ 3ನೇ ವಿಕೆಟ್ ಜೋಡಿ ಪೈಕಿ ಕರುಣ್ ನಾಯರ್ ಹಿಂದಿನ ದಿನದ ವೈಯಕ್ತಿಕ ಮೊತ್ತ(2)ಕ್ಕೆ ಮತ್ತೆ 10 ರನ್ ಸೇರಿಸುವಷ್ಟರಲ್ಲಿ ಭಾರ್ಗವ್ ಭಟ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೆ.ವಿ.ಸಿದ್ಧಾರ್ಥರನ್ನು ಕೂಡಿಕೊಂಡ ನಾಯಕ ಮನೀಶ್ ಪಾಂಡೆ (50) ಇನಿಂಗ್ಸ್ಗೆ ಸ್ಥಿರತೆ ತಂದುಕೊಡುವ ಹರಸಾಹಸಕ್ಕೆ ಕೈಹಾಕಿದರು. ಸಿದ್ಧಾರ್ಥ-ಪಾಂಡೆ ಜೋಡಿ 4ನೇ ವಿಕೆಟಿಗೆ 67 ರನ್ ಕಲೆಹಾಕಿತು. ಆದರೆ, ಅಷ್ಟರಲ್ಲಿ 64 ರನ್ ಗಳಿಸಿದ್ದ ಸಿದ್ಧಾರ್ಥ್ ಕೂಡ ಭಟ್ಟರ ಗಾರುಡಿಗೆ ಮರುಳಾದರು. ಆ ಬಳಿಕ ಕರ್ನಾಟಕದ ವಿಕೆಟ್ಗಳು ನಿರಂತರವಾಗಿ ಉರುಳುತ್ತಲೇ ಹೋದವು. ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಭಾರ್ಗವ್ ಭಟ್ (116ಕ್ಕೆ 5) ಮತ್ತು ಆಫ್ಸ್ಪಿನ್ನರ್ ದೀಪಕ್ ಹೂಡಾ (31ಕ್ಕೆ 5) ಜೋಡಿ ಕರ್ನಾಟಕದ ಬ್ಯಾಟ್ಸ್ಮನ್ಗಳನ್ನು ಒಬ್ಬರ ಹಿಂದೊಬ್ಬರಂತೆ ಸ್ಪಿನ್ ಖೆಡ್ಡಾದಲ್ಲಿ ಕೆಡವಿಕೊಂಡರು. ಅಂತಿಮವಾಗಿ 220 ರನ್ಗಳಿಗೆ ಕರ್ನಾಟಕದ 2ನೇ ಇನಿಂಗ್ಸ್ಗೆ ತೆರೆಬಿತ್ತು. ಬರೋಡಾಕ್ಕೆ ಕೇವಲ 110 ರನ್ಗಳ ಗೆಲುವಿನ ಗುರಿ ದೊರೆಯಿತು.
ಬೌಲರ್ಗಳ ಸಾಹಸ ವ್ಯರ್ಥ : ಸಾಧಾರಣ ಮೊತ್ತದ ಸವಾಲು ಬೆನ್ನಟ್ಟಿದ ಬರೋಡಾ ತಂಡಕ್ಕೆ ಊಹಿಸಿದಷ್ಟು ಸುಲಭದಲ್ಲಿ ಗೆಲುವು ದಕ್ಕಿಸಿಕೊಳ್ಳಲು ಕರುನಾಡ ಬೌಲರ್ಗಳು ಅವಕಾಶ ಕೊಡಲಿಲ್ಲ. ಯೂಸುಫ್ ಪಠಾಣ್ ಕೇವಲ 30 ಎಸೆತಗಳಲ್ಲಿ 41 ರನ್ ಚಚ್ಚಿದ್ದು ಬಿಟ್ಟರೆ ಉಳಿದವರು ಕರ್ನಾಟಕದ ರೋನಿತ್ ಮೋರೆ (57ಕ್ಕೆ 2), ಪ್ರಸಿದ್ಧ್ ಕೃಷ್ಣ (14ಕ್ಕೆ 3) ಮತ್ತು ಶ್ರೇಯಸ್ ಗೋಪಾಲ್ (12ಕ್ಕೆ 2) ದಾಳಿಗೆ ತರಗೆಲೆಯಾದರು. ಕರ್ನಾಟಕದ ಗೆಲುವಿಗೆ 2 ವಿಕೆಟ್ಗಳಷ್ಟೇ ಬಾಕಿ ಇದ್ದವು. ಆದರೆ, ಅಲ್ಲಿ ಮತ್ತೆ ಭಟ್ ಕರಾಮತ್ತು ತೋರಿಸಿದರು. ಭಟ್ (9*) ಮತ್ತು ಋುಷಿ ಆರೋಥೆ (11*) ಜೋಡಿ ಮುರಿಯದ 9ನೇ ವಿಕೆಟ್ಗೆ 20 ರನ್ ಸೇರಿಸಿ ಕರ್ನಾಟಕದ ಜಯದ ಕನಸು ಭಗ್ನಗೊಳಿಸಿದರು.
ಈ ಪಂದ್ಯ ಸೋತರೂ ಕರ್ನಾಟಕ ತಂಡ ಸದ್ಯ ಎ ಮತ್ತು ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಈ ಗುಂಪಿನಿಂದ ಕೇವಲ 5 ತಂಡಗಳು 8ರ ಘಟ್ಟ ಪ್ರವೇಶಿಸುತ್ತವೆ. ಕರ್ನಾಟಕ ತಂಡದ ಕ್ವಾರ್ಟರ್ಫೈನಲ್ ಪ್ರವೇಶ ಈಗ ಸೌರಾಷ್ಟ್ರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಬಂಗಾಳ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿದೆ.
ವಡೋದರಾ: ಅದೃಷ್ಟಲಕ್ಷ್ಮಿ ನಿರಂತರ ಉಯ್ಯಾಲೆಯಾಡಿದ ಜಿದ್ದಾಜಿದ್ದಿನ ಸಮರದಲ್ಲಿ ಕೊನೆಗೂ ಕರ್ನಾಟಕ ತಂಡಕ್ಕೆ ಸೋಲುಂಟಾಯಿತು. ಆದರೆ ಅದು ವೀರರಿಗೆ ಒಪ್ಪುವ ಸೋಲಾಗಿತ್ತು. 2 ವಿಕೆಟ್ಗಳಿಂದ ಪರಾಭವಗೊಳ್ಳುವುದಕ್ಕೂ ಮೊದಲು ಮನೀಶ್ ಪಾಂಡೆ ಬಳಗ ಬರೋಡಾ ತಂಡದ ಬೆವರಿಳಿಸಿತು ಎಂಬುದು ಹೆಮ್ಮೆ ಪಡಬೇಕಾದ ಸಂಗತಿ.
ಇಲ್ಲಿನ ಮೋತಿಬಾಗ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ 2018-19ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೈಟ್ ಎ ಗುಂಪಿನ ಲೀಗ್ ಹಂತದ 8ನೇ ಹಾಗೂ ಕೊನೆಯ ಸುತ್ತಿನ ಹಣಾಹಣಿ ಎರಡೇ ದಿನಗಳಲ್ಲಿ ಮುಕ್ತಾಯಗೊಂಡು ಅಚ್ಚರಿ ಮೂಡಿಸಿತು. ನಾಲ್ಕು ದಿನಗಳ ಪಂದ್ಯ ಎರಡೇ ದಿನಗಳಲ್ಲಿ ಮುಕ್ತಾಯಗೊಳ್ಳುವಂತೆ ಕೆಟ್ಟದಾಗಿ ಪಿಚ್ ನಿರ್ಮಿಸಿದ ಕ್ಯುರೇಟರ್ಗೆ ಈ ಶ್ರೇಯ (!) ಸಂದಾಯವಾಗಬೇಕಿದೆ. ಮೊದಲ ದಿನ 22 ವಿಕೆಟ್ ಉರುಳಿದರೆ, 2ನೇ ದಿನ 16 ವಿಕೆಟ್ ಪತನಗೊಂಡವು.
ಸ್ಪಿನ್ ಮೋಡಿಗೆ ಬಲಿ : 2 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ ಸೋಮವಾರದ ಆಟ ಮುಗಿಸಿದ್ದ ಕರ್ನಾಟಕ ತಂಡ ಮಂಗಳವಾರ ಕ್ರೀಸಿನಲ್ಲಿ ನೆಲೆ ನಿಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದಕ್ಕೆ ಭಾರ್ಗವ್ ಭಟ್ ಮತ್ತು ದೀಪಕ್ ಹೂಡಾ ಆಸ್ಪದ ನೀಡಲಿಲ್ಲ. ಸೋಮವಾರ ಕ್ರೀಸ್ ಕಾಯ್ದುಕೊಂಡಿದ್ದ 3ನೇ ವಿಕೆಟ್ ಜೋಡಿ ಪೈಕಿ ಕರುಣ್ ನಾಯರ್ ಹಿಂದಿನ ದಿನದ ವೈಯಕ್ತಿಕ ಮೊತ್ತ(2)ಕ್ಕೆ ಮತ್ತೆ 10 ರನ್ ಸೇರಿಸುವಷ್ಟರಲ್ಲಿ ಭಾರ್ಗವ್ ಭಟ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೆ.ವಿ.ಸಿದ್ಧಾರ್ಥರನ್ನು ಕೂಡಿಕೊಂಡ ನಾಯಕ ಮನೀಶ್ ಪಾಂಡೆ (50) ಇನಿಂಗ್ಸ್ಗೆ ಸ್ಥಿರತೆ ತಂದುಕೊಡುವ ಹರಸಾಹಸಕ್ಕೆ ಕೈಹಾಕಿದರು. ಸಿದ್ಧಾರ್ಥ-ಪಾಂಡೆ ಜೋಡಿ 4ನೇ ವಿಕೆಟಿಗೆ 67 ರನ್ ಕಲೆಹಾಕಿತು. ಆದರೆ, ಅಷ್ಟರಲ್ಲಿ 64 ರನ್ ಗಳಿಸಿದ್ದ ಸಿದ್ಧಾರ್ಥ್ ಕೂಡ ಭಟ್ಟರ ಗಾರುಡಿಗೆ ಮರುಳಾದರು. ಆ ಬಳಿಕ ಕರ್ನಾಟಕದ ವಿಕೆಟ್ಗಳು ನಿರಂತರವಾಗಿ ಉರುಳುತ್ತಲೇ ಹೋದವು. ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಭಾರ್ಗವ್ ಭಟ್ (116ಕ್ಕೆ 5) ಮತ್ತು ಆಫ್ಸ್ಪಿನ್ನರ್ ದೀಪಕ್ ಹೂಡಾ (31ಕ್ಕೆ 5) ಜೋಡಿ ಕರ್ನಾಟಕದ ಬ್ಯಾಟ್ಸ್ಮನ್ಗಳನ್ನು ಒಬ್ಬರ ಹಿಂದೊಬ್ಬರಂತೆ ಸ್ಪಿನ್ ಖೆಡ್ಡಾದಲ್ಲಿ ಕೆಡವಿಕೊಂಡರು. ಅಂತಿಮವಾಗಿ 220 ರನ್ಗಳಿಗೆ ಕರ್ನಾಟಕದ 2ನೇ ಇನಿಂಗ್ಸ್ಗೆ ತೆರೆಬಿತ್ತು. ಬರೋಡಾಕ್ಕೆ ಕೇವಲ 110 ರನ್ಗಳ ಗೆಲುವಿನ ಗುರಿ ದೊರೆಯಿತು.
ಬೌಲರ್ಗಳ ಸಾಹಸ ವ್ಯರ್ಥ : ಸಾಧಾರಣ ಮೊತ್ತದ ಸವಾಲು ಬೆನ್ನಟ್ಟಿದ ಬರೋಡಾ ತಂಡಕ್ಕೆ ಊಹಿಸಿದಷ್ಟು ಸುಲಭದಲ್ಲಿ ಗೆಲುವು ದಕ್ಕಿಸಿಕೊಳ್ಳಲು ಕರುನಾಡ ಬೌಲರ್ಗಳು ಅವಕಾಶ ಕೊಡಲಿಲ್ಲ. ಯೂಸುಫ್ ಪಠಾಣ್ ಕೇವಲ 30 ಎಸೆತಗಳಲ್ಲಿ 41 ರನ್ ಚಚ್ಚಿದ್ದು ಬಿಟ್ಟರೆ ಉಳಿದವರು ಕರ್ನಾಟಕದ ರೋನಿತ್ ಮೋರೆ (57ಕ್ಕೆ 2), ಪ್ರಸಿದ್ಧ್ ಕೃಷ್ಣ (14ಕ್ಕೆ 3) ಮತ್ತು ಶ್ರೇಯಸ್ ಗೋಪಾಲ್ (12ಕ್ಕೆ 2) ದಾಳಿಗೆ ತರಗೆಲೆಯಾದರು. ಕರ್ನಾಟಕದ ಗೆಲುವಿಗೆ 2 ವಿಕೆಟ್ಗಳಷ್ಟೇ ಬಾಕಿ ಇದ್ದವು. ಆದರೆ, ಅಲ್ಲಿ ಮತ್ತೆ ಭಟ್ ಕರಾಮತ್ತು ತೋರಿಸಿದರು. ಭಟ್ (9*) ಮತ್ತು ಋುಷಿ ಆರೋಥೆ (11*) ಜೋಡಿ ಮುರಿಯದ 9ನೇ ವಿಕೆಟ್ಗೆ 20 ರನ್ ಸೇರಿಸಿ ಕರ್ನಾಟಕದ ಜಯದ ಕನಸು ಭಗ್ನಗೊಳಿಸಿದರು.
ಈ ಪಂದ್ಯ ಸೋತರೂ ಕರ್ನಾಟಕ ತಂಡ ಸದ್ಯ ಎ ಮತ್ತು ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಈ ಗುಂಪಿನಿಂದ ಕೇವಲ 5 ತಂಡಗಳು 8ರ ಘಟ್ಟ ಪ್ರವೇಶಿಸುತ್ತವೆ. ಕರ್ನಾಟಕ ತಂಡದ ಕ್ವಾರ್ಟರ್ಫೈನಲ್ ಪ್ರವೇಶ ಈಗ ಸೌರಾಷ್ಟ್ರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಬಂಗಾಳ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಿದೆ.