ಆ್ಯಪ್ನಗರ

ರಾಹುಲ್‌, ಪಾಂಡ್ಯ ಜತೆ ಬಿಸಿಸಿಐ ಸಿಇಒ ಚರ್ಚೆ

ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತಾಗಿ ಅಸಭ್ಯವಾಗಿ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿರುವ ಭಾರತ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌ ರಾಹುಲ್‌ ಜತೆಗೆ ಬಿಸಿಸಿಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್‌ ಜೊಹ್ರಿ ಮಂಗಳವಾರ ಚರ್ಚಿಸಿದ್ದಾರೆ.

PTI 16 Jan 2019, 5:00 am
ಹೊಸದಿಲ್ಲಿ : ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತಾಗಿ ಅಸಭ್ಯವಾಗಿ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿರುವ ಭಾರತ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌ ರಾಹುಲ್‌ ಜತೆಗೆ ಬಿಸಿಸಿಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್‌ ಜೊಹ್ರಿ ಮಂಗಳವಾರ ಚರ್ಚಿಸಿದ್ದಾರೆ.
Vijaya Karnataka Web bcci ceo speaks to pandya rahul
ರಾಹುಲ್‌, ಪಾಂಡ್ಯ ಜತೆ ಬಿಸಿಸಿಐ ಸಿಇಒ ಚರ್ಚೆ


ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐನ ಆಡಳಿತಾತ್ಮಕ ಸಮಿತಿ(ಸಿಒಎ)ಯ ಸದಸ್ಯರಾದ ವಿನೋದ್‌ ರಾಯ್‌ ಮತ್ತು ಡಯಾನಾ ಎಡುಲ್ಜಿ ಪ್ರಕರಣ ಸಂಬಂಧ ದ್ವಂದ್ವ ನಿಲುವು ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ, ಬಿಸಿಸಿಐನ ಸಿಇಒ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಈ ಕುರಿತಾಗಿ ರಾಹುಲ್‌ ಮತ್ತು ಪಾಂಡ್ಯ ತಮ್ಮ ಹೇಳಿಕೆಗಳನ್ನು ಜೊಹ್ರಿ ಮುಂದಿಟ್ಟಿದ್ದಾರೆ. ಈಗಾಗಲೇ ತಮ್ಮ ಹೇಳಿಕೆ ಕುರಿತಾಗಿ ಪಶ್ಚಾತಾಪ ಪಟ್ಟಿರುವ ಆಟಗಾರರು ಸೋಮವಾರ ಬೇಷರತ್‌ ಕ್ಷಮೆಯಾಚಿಸಿದ್ದರು.

''ಇಬ್ಬರೊಂದಿಗೂ ಸಿಇಒ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗ ಪಡಿಸಿಲ್ಲ. ಶೋಕಾಸ್‌ ನೋಟಿಸ್‌ಗೆ ನೀಡಿರುವ ಉತ್ತರ ಮತ್ತು ಇದೀಗ ದೂರವಾಣಿ ಮೂಲಕ ಪಡೆಯಲಾದ ಹೇಳಿಕೆಗಳನ್ನು ಪರಿಶೀಲಿಸಿ ಸಿಇಒ ಜೊಹ್ರಿ ಅವರು ಸಿಒಎ ಬಳಿ ಬುಧವಾರ ತಮ್ಮ ವರದಿ ಸಲ್ಲಿಸಲಿದ್ದಾರೆ,'' ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ವರದಿ ಪರಿಶೀಲನೆ ಬಳಿಕವಷ್ಟೇ ಸಿಒಎ ಪ್ರಕರಣದ ಕುರಿತಾಗಿ ಒಂಬುಡ್ಸ್‌ಮನ್‌ ನೇಮಕ ಮಾಡುವುದರ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಬಾಲಿವುಡ್‌ ಸಿನಿಮಾ ನಿರ್ಮಾಪಕ ಕರಣ್‌ ಜೋಹರ್‌ ನಡೆಸಿಕೊಡುವ 'ಕಾಫೀ ವಿತ್‌ ಕರಣ್‌' ಟಾಕ್‌ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಮತ್ತು ಪಾಂಡ್ಯ, ಹಲವು ಮಹಿಳೆಯರೊಂದಿಗೆ ಚಕ್ಕಂದ ಆಡಿರುವ ಸಂಗತಿಯನ್ನು ಬಹಿರಂಗ ಪಡಿಸಿ, ಮಹಿಳೆಯ ವಿಚಾರವಾಗಿ ಅಸಭ್ಯ ಹೇಳಿಕೆಗಳನ್ನೂ ನೀಡಿದ್ದರು. ಈ ವಿಚಾರವಾಗಿ ವ್ಯಾಪಕ ಟೀಕೆಗಳು ಹರಿದುಬಂದ ಬಳಿಕ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ ಇಬ್ಬರ ವಿರುದ್ಧ 2 ಪಂದ್ಯಗಳ ನಿಷೇಧ ಹೇರುವಂತೆ ಶೀಫಾರಸು ಮಾಡಿದ್ದರು, ಆದರೆ ಸಿಒಎ ಸದಸ್ಯೆ ಡಯಾನ ಎಡುಲ್ಜಿ ನಿರ್ಧಾರ ತೆಗೆದುಕೊಳ್ಳಲು ಬಿಸಿಸಿಐನ ಕಾನೂನು ವಿಭಾಗದ ಸಲಹೆ ಕೇಳಿದ್ದರು.

ಇನ್ನು ಪ್ರಕರಣ ಕುರಿತು ಹೆಚ್ಚು ಚರ್ಚಿಸುವ ಬದಲು ಬಹುಬೇಗ ಇತ್ಯರ್ಥ ಮಾಡುವುದು ಒಳಿತು ಎಂದು ಎಚ್ಚರಿಕೆ ನೀಡಿರುವ ವಿನೋದ್‌ ರಾಯ್‌, ಬಿಸಿಸಿಐ ಯುವ ಆಟಗಾರರ ವೃತ್ತಿ ಬದುಕನ್ನು ಅಂತ್ಯಗೊಳಿಸುವ ಕೆಲಸ ಮಾಡಬಾರದು ಎಂದು ಡಯಾನ ಎಡುಲ್ಜಿ ಅವರಿಗೆ ಇ-ಮೇಲ್‌ ಕಳುಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌