ಆ್ಯಪ್ನಗರ

ಭಾರತೀಯ ಕ್ರಿಕೆಟಿಗರಿಗೆ ಪರಿಷ್ಕೃತ ವೇತನ ನೀಡಲು ಸಮ್ಮತಿ

ಕೇಂದ್ರೀಯ ಒಪ್ಪಂದದಲ್ಲಿರುವ ಭಾರತೀಯ ಕ್ರಿಕೆಟಿಗರಿಗೆ ಪರಿಷ್ಕೃತ ವೇತನ ನೀಡಲು ಕೊನೆಗೂ ಬಿಸಿಸಿಐವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಯುನೈಟೆಡ್‌ ಕಿಂಗ್‌ಡಮ್‌ ಪ್ರವಾಸಕ್ಕೂ ಮುನ್ನ ಎದುರಾಗಿದ್ದ ವೇತನ ಕುರಿತು ಅನಿಶ್ಚಿತತೆ ದೂರವಾಗಿದೆ.

Vijaya Karnataka 23 Jun 2018, 10:27 am
ಹೊಸದಿಲ್ಲಿ: ಕೇಂದ್ರೀಯ ಒಪ್ಪಂದದಲ್ಲಿರುವ ಭಾರತೀಯ ಕ್ರಿಕೆಟಿಗರಿಗೆ ಪರಿಷ್ಕೃತ ವೇತನ ನೀಡಲು ಕೊನೆಗೂ ಬಿಸಿಸಿಐವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಯುನೈಟೆಡ್‌ ಕಿಂಗ್‌ಡಮ್‌ ಪ್ರವಾಸಕ್ಕೂ ಮುನ್ನ ಎದುರಾಗಿದ್ದ ವೇತನ ಕುರಿತು ಅನಿಶ್ಚಿತತೆ ದೂರವಾಗಿದೆ.
Vijaya Karnataka Web bcci


ಸುಪ್ರೀಂಕೋರ್ಟ್‌ ನೇಮಿತ ಆಡಳಿತಾತ್ಮಕ ಸಮಿತಿ(ಸಿಒಎ) ಆಟಗಾರರ ಪರಿಷ್ಕೃತ ಒಪ್ಪಂದವನ್ನು ಕಳೆದ ಮಾರ್ಚ್‌ 7ರಂದು ಪ್ರಕಟಿಸಿತ್ತು. ಆದರೆ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಆಟಗಾರರ ಒಪ್ಪಂದಕ್ಕೆ ಸಹಿ ಮಾಡಲು ನಿರಾಕರಿಸಿದ್ದರು. ಅಲ್ಲದೆ ಸಹಿ ಮಾಡಲು ವಿಶೇಷ ಸಾಮಾನ್ಯ ಸಭೆಯ ಅನುಮತಿ ಅಗತ್ಯವಿದೆ ಎಂದಿದ್ದರು. ಆದರೀಗ ಶುಕ್ರವಾರ 28 ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆಟಗಾರರಿಗೆ ವೇತನ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

''ಶುಕ್ರವಾರ ನಡೆದ ಎಸ್‌ಜಿಎಂನಲ್ಲಿ ಸಿಒಎ ಸೂಚಿಸಿರುವ ನಿಯಮಗಳಿಗನುಗುಣವಾಗಿ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಕೋರ್ಟ್‌ ನೇಮಿತ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದರ ಅನುಮಾನಗಳ ನಡುವೆಯೂ ಎಸ್‌ಜಿಎಂನಲ್ಲಿ ಎಲ್ಲಾ ನಿರ್ಣಯಗಳಿಗೆ ಸಾಮಾನ್ಯ ಸಭೆ ಅವಿರೋಧವಾಗಿ ಒಪ್ಪಿಗೆ ಸೂಚಿಸಿದೆ,'' ಎಂದು ಚೌಧರಿ ಹೇಳಿದ್ದಾರೆ.

ಶುಕ್ರವಾರ ತಡರಾತ್ರಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಆಟಗಾರರು ಕೊನೆಗೂ ಪರಿಷ್ಕೃತ ವೇತನ ಪಡೆಯಲಿದ್ದಾರೆ. ಪರಿಷ್ಕೃತ ವೇತನ ಒಪ್ಪಂದದ ಅನ್ವಯ ಎ+ ಆಟಗಾರರು ವಾರ್ಷಿಕ 7 ಕೋಟಿ ರೂ. ಪಡೆದರೆ, ಎ, ಬಿ ಮತ್ತು ಸಿ ವಿಭಾಗದ ಆಟಗಾರರು ಕ್ರಮವಾಗಿ 3, 2 ಮತ್ತು 1 ಕೋಟಿ ರೂ. ಆದಾಯ ಗಳಿಸಲಿದ್ದಾರೆ.

ಮಹಿಳೆಯರು ಸೇರಿದಂತೆ ದೇಶೀಯ ಕ್ರಿಕೆಟಿಗರ ಪರಿಷ್ಕೃತ ವೇತನ ಹೆಚ್ಚಳಕ್ಕೂ ವಿಶೇಷ ಸಾಮಾನ್ಯ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ.

''ಆಟಗಾರರ ಒಪ್ಪಂದಗಳಿಗೆ ಸಹಿ ಮಾಡಲು ಬಿಸಿಸಿಐ ಸಾಮಾನ್ಯ ಸಭೆಯಲ್ಲ ನನಗೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ ದೇಶೀಯ ಪುರುಷ ಮತ್ತು ಮಹಿಳಾ ಆಟಗಾರರ ವೇತನ ಹೆಚ್ಚಳವನ್ನು ಅನುಗುಣವಾಗಿ ಪರಿಗಣಿಸಲಾಗಿದ್ದು, ಇದು ಇತ್ಯರ್ಥವಾದಂತಾಗಿದೆ.' ಎಂದು ಚೌಧರಿ ಹೇಳಿದ್ದಾರೆ.

ಈ ಮಧ್ಯೆ ಸಭೆಯಲ್ಲಿ ಮುಂಬರುವ ದೇಶೀಯ ಆವೃತ್ತಿಯಲ್ಲಿ ಈಶಾನ್ಯ ರಾಜ್ಯ ಮತ್ತು ಬಿಹಾರದ ಹೊಸ ತಂಡಗಳ ಸೇರ್ಪಡೆ ಸೇರಿದಂತೆ ನಿರ್ಧಾರ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌