ರಾಹುಲ್ ದ್ರಾವಿಡ್ ಜತೆಗೆ ರವಿಶಾಸ್ತ್ರಿ ಹೋಲಿಕೆ; ಅಭಿಮಾನಿಗಳಿಂದ ಬಿಸಿಸಿಐಗೆ ತಕ್ಕ ಶಾಸ್ತಿ!
ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಜತೆಗೆ ಈಗಿನ ಕೋಚ್ ರವಿಶಾಸ್ತ್ರಿ ಅವರನ್ನು ಹೋಲಿಕೆ ಮಾಡಿರುವುದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web 21 Sep 2019, 3:01 pm
ಬೆಂಗಳೂರು: ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರದಂದು ನಡೆಯಲಿದೆ.
ಇದರಂತೆ ಟೀಮ್ ಇಂಡಿಯಾವು ಬೆಂಗಳೂರಿಗೆ ಆಗಮಿಸಿದೆ. ಈ ಮಧ್ಯೆ ಶುಕ್ರವಾರ ನಡೆದ ಅಭ್ಯಾಸ ಅವಧಿಯ ವೇಳೆಯಲ್ಲಿ ಭಾರತೀಯ ಕ್ರಿಕೆಟಿಗರ ಜತೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಜತೆಗಿನ ಭೇಟಿ ನಡೆದಿತ್ತು.
ಜೀಪ್ ಗ್ರ್ಯಾಂಡ್ ಚೆರೋಕಿ ಐಷಾರಾಮಿ ಕಾರಿನಲ್ಲಿ ಧೋನಿ-ಸಾಕ್ಷಿ ಪಯಣ..!
ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ಕೋಚ್ ರವಿಶಾಸ್ತ್ರಿ ಚಿತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಮ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
'ಭಾರತೀಯ ಕ್ರಿಕೆಟ್ನ ಇಬ್ಬರು ಶ್ರೇಷ್ಠ ವ್ಯಕ್ತಿಗಳು ಭೇಟಿಯಾದಾಗ' ಎಂಬ ಟ್ಯಾಗ್ ಲೈನ್ನಲ್ಲಿ ಬಿಸಿಸಿಐ ಟ್ವೀಟಿಸಿತ್ತು. ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಯಾವ ಕಾರಣಕ್ಕಾಗಿ ರವಿಶಾಸ್ತ್ರಿ ಅವರಿಗೆ ಶ್ರೇಷ್ಠ ಕ್ರಿಕೆಟಿಗನ ಪಟ್ಟ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಗಳು ವಿವಿಧ ಶೀರ್ಷಿಕೆ ನೀಡುವ ಮೂಲಕ ರವಿಶಾಸ್ತ್ರಿ ಕಾಲೆಳೆದಿದ್ದಾರೆ.
ರಿಷಬ್ ಪಂತ್ ಸ್ಥಾನಕ್ಕೆ ಮತ್ತಷ್ಟು 3 ವಿಕೆಟ್ ಕೀಪರ್ಗಳನ್ನು ಹೆಸರಿಸಿದ ಆಯ್ಕೆ ಸಮಿತಿ
ಭಾರತ ಬಯಸುವ ಕೋಚ್ ಹಾಗೂ ಭಾರತ ಪಡೆದಿರುವ ಕೋಚ್ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ ನಿರೀಕ್ಷೆ ಹಾಗೂ ರಿಯಾಲಿಟಿ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಕೆಲವರು ರಾಹುಲ್ ಗ್ರೇಟ್ ಶಾಸ್ತ್ರಿ ರಿಗ್ರೆಟ್ ಎಂದು ಛೇಡಿಸಿದ್ದಾರೆ.
ರಾಹುಲ್ ದ್ರಾವಿಡ್ ಸೇವೆಯು ಭಾರತೀಯ ಕ್ರಿಕೆಟ್ಗೆ ಅತ್ಯಗತ್ಯವಾಗಿದೆ ಎಂದು ತಡಗೋಡೆಯ ಮೌಲ್ಯವನ್ನು ಅಭಿಮಾನಿಗಳು ಸಾರಿದ್ದಾರೆ. ಅಲ್ಲದೆ ಖಂಡಿತವಾಗಿಯೂ ಟೀಮ್ ಇಂಡಿಯಾ ರಾಹುಲ್ ದ್ರಾವಿಡ್ ಸೇವೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಬಿಸಿಸಿಐ ರಾಹುಲ್ ಹಾಗೂ ದ್ರಾವಿಡ್ ಎಂಬ ಹೆಸರುಗಳ ಇಬ್ಬರು ವಿಭಿನ್ನ ಹೆಸರುಗಳನ್ನು ಪರಿಗಣಿಸಿರುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಒಬ್ಬರೇ ಒಬ್ಬರು ಶ್ರೇಷ್ಠ ವ್ಯಕ್ತಿಯನ್ನು ಕಾಣಲು ಮಾತ್ರ ಸಾಧ್ಯ. ಅವರೇ ರಾಹುಲ್ ದ್ರಾವಿಡ್. ಇನ್ನೊಬ್ಬರು ಕುಡುಕ ಎಂದು ಶಾಸ್ತ್ರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.
ಇದರಂತೆ ಟೀಮ್ ಇಂಡಿಯಾವು ಬೆಂಗಳೂರಿಗೆ ಆಗಮಿಸಿದೆ. ಈ ಮಧ್ಯೆ ಶುಕ್ರವಾರ ನಡೆದ ಅಭ್ಯಾಸ ಅವಧಿಯ ವೇಳೆಯಲ್ಲಿ ಭಾರತೀಯ ಕ್ರಿಕೆಟಿಗರ ಜತೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಜತೆಗಿನ ಭೇಟಿ ನಡೆದಿತ್ತು.
ಜೀಪ್ ಗ್ರ್ಯಾಂಡ್ ಚೆರೋಕಿ ಐಷಾರಾಮಿ ಕಾರಿನಲ್ಲಿ ಧೋನಿ-ಸಾಕ್ಷಿ ಪಯಣ..!
ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹಾಗೂ ಕೋಚ್ ರವಿಶಾಸ್ತ್ರಿ ಚಿತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಮ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
'ಭಾರತೀಯ ಕ್ರಿಕೆಟ್ನ ಇಬ್ಬರು ಶ್ರೇಷ್ಠ ವ್ಯಕ್ತಿಗಳು ಭೇಟಿಯಾದಾಗ' ಎಂಬ ಟ್ಯಾಗ್ ಲೈನ್ನಲ್ಲಿ ಬಿಸಿಸಿಐ ಟ್ವೀಟಿಸಿತ್ತು. ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಯಾವ ಕಾರಣಕ್ಕಾಗಿ ರವಿಶಾಸ್ತ್ರಿ ಅವರಿಗೆ ಶ್ರೇಷ್ಠ ಕ್ರಿಕೆಟಿಗನ ಪಟ್ಟ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಗಳು ವಿವಿಧ ಶೀರ್ಷಿಕೆ ನೀಡುವ ಮೂಲಕ ರವಿಶಾಸ್ತ್ರಿ ಕಾಲೆಳೆದಿದ್ದಾರೆ.
ರಿಷಬ್ ಪಂತ್ ಸ್ಥಾನಕ್ಕೆ ಮತ್ತಷ್ಟು 3 ವಿಕೆಟ್ ಕೀಪರ್ಗಳನ್ನು ಹೆಸರಿಸಿದ ಆಯ್ಕೆ ಸಮಿತಿ
ಭಾರತ ಬಯಸುವ ಕೋಚ್ ಹಾಗೂ ಭಾರತ ಪಡೆದಿರುವ ಕೋಚ್ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ ನಿರೀಕ್ಷೆ ಹಾಗೂ ರಿಯಾಲಿಟಿ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಕೆಲವರು ರಾಹುಲ್ ಗ್ರೇಟ್ ಶಾಸ್ತ್ರಿ ರಿಗ್ರೆಟ್ ಎಂದು ಛೇಡಿಸಿದ್ದಾರೆ.
ರಾಹುಲ್ ದ್ರಾವಿಡ್ ಸೇವೆಯು ಭಾರತೀಯ ಕ್ರಿಕೆಟ್ಗೆ ಅತ್ಯಗತ್ಯವಾಗಿದೆ ಎಂದು ತಡಗೋಡೆಯ ಮೌಲ್ಯವನ್ನು ಅಭಿಮಾನಿಗಳು ಸಾರಿದ್ದಾರೆ. ಅಲ್ಲದೆ ಖಂಡಿತವಾಗಿಯೂ ಟೀಮ್ ಇಂಡಿಯಾ ರಾಹುಲ್ ದ್ರಾವಿಡ್ ಸೇವೆಯನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಬಿಸಿಸಿಐ ರಾಹುಲ್ ಹಾಗೂ ದ್ರಾವಿಡ್ ಎಂಬ ಹೆಸರುಗಳ ಇಬ್ಬರು ವಿಭಿನ್ನ ಹೆಸರುಗಳನ್ನು ಪರಿಗಣಿಸಿರುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಒಬ್ಬರೇ ಒಬ್ಬರು ಶ್ರೇಷ್ಠ ವ್ಯಕ್ತಿಯನ್ನು ಕಾಣಲು ಮಾತ್ರ ಸಾಧ್ಯ. ಅವರೇ ರಾಹುಲ್ ದ್ರಾವಿಡ್. ಇನ್ನೊಬ್ಬರು ಕುಡುಕ ಎಂದು ಶಾಸ್ತ್ರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.