ಹೊಸದಿಲ್ಲಿ: ದೇಶದ ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣ್ ಪ್ರಶಸ್ತಿಗಾಗಿ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಫಾರಸುಗೈದಿದೆ.
ಭಾರತೀಯ ಕ್ರಿಕೆಟ್ಗೆ ಧೋನಿ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ವಿಶ್ವಕಪ್ ವಿಜೇತ ಹೆಸರನ್ನು ನಾಮನಿರ್ದೇಶನ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಬಿಸಿಸಿಐ ಇದನ್ನು ಖಚಿತಪಡಿಸಿದ್ದು, ಮಂಡಳಿ ಸಭೆಯಲ್ಲಿ ಮುಕ್ತಕಂಠವಾಗಿ ಧೋನಿ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.
ಧೋನಿ ನಾಯಕತ್ವದಲ್ಲಿ ಭಾರತ 2007 ಟ್ವೆಂಟಿ-20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಾಧ್ಯವಾಗಿತ್ತು.
ಧೋನಿ 302 ಏಕದಿನಗಳಲ್ಲಾಗಿ 9737 ರನ್ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್ ಗಳಿಸಿದ್ದಾರೆ. ಹಾಗೆಯೇ 78 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್ ಗಳಿಸಿದ್ದಾರೆ.
ಹಾಗೆಯೇ 16 ಅಂತರಾಷ್ಟ್ರೀಯ ಶತಕ (ಟೆಸ್ಟ್ನಲ್ಲಿ 6, ಏಕದಿನದಲ್ಲಿ10) ಮತ್ತು 100 ಅಂತರಾಷ್ಟ್ರೀಯ ಅರ್ಧಶತಗಳನ್ನು ಹೊಂದಿದ್ದಾರೆ.
ವಿಕೆಟ್ ಕೀಪರ್ ಆಗಿ ಧೋನಿ 584 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದರಲ್ಲಿ ಟೆಸ್ಟ್ನಲ್ಲಿ 256 ಏಕದಿನದಲ್ಲಿ 285 ಮತ್ತು ಟ್ವೆಂಟಿ-20ನಲ್ಲಿ 43 ಕ್ಯಾಚ್ಗಳು ಸೇರಿವೆ.
ಅಂದ ಹಾಗೆ ಧೋನಿ ಈಗಾಗಲೇ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮ ಶ್ರೀ ಪ್ರಶಸ್ತಿಗಳಿಂದ ಭಾಜನವಾಗಿದ್ದಾರೆ.
ಹಾಗೊಂದು ವೇಳೆ ಪದ್ಮ ಭೂಷಣ್ ಪ್ರಶಸ್ತಿಗೆ ಧೋನಿ ಅರ್ಹವಾದ್ದಲ್ಲಿ 11ನೇ ಭಾರತೀಯ ಕ್ರಿಕೆಟಿಗನೆನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸುನಿಲ್ ಗಾವಸ್ಕರ್ ಮತ್ತು ರಾಹುಲ್ ದ್ರಾವಿಡ್ ಮುಂತಾದ ಆಟಗಾರರು ಸೇರಿದ್ದಾರೆ.
ಭಾರತೀಯ ಕ್ರಿಕೆಟ್ಗೆ ಧೋನಿ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ವಿಶ್ವಕಪ್ ವಿಜೇತ ಹೆಸರನ್ನು ನಾಮನಿರ್ದೇಶನ ಮಾಡಲು ಬಿಸಿಸಿಐ ನಿರ್ಧರಿಸಿದೆ.
ಬಿಸಿಸಿಐ ಇದನ್ನು ಖಚಿತಪಡಿಸಿದ್ದು, ಮಂಡಳಿ ಸಭೆಯಲ್ಲಿ ಮುಕ್ತಕಂಠವಾಗಿ ಧೋನಿ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.
ಧೋನಿ ನಾಯಕತ್ವದಲ್ಲಿ ಭಾರತ 2007 ಟ್ವೆಂಟಿ-20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಾಧ್ಯವಾಗಿತ್ತು.
ಧೋನಿ 302 ಏಕದಿನಗಳಲ್ಲಾಗಿ 9737 ರನ್ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್ ಗಳಿಸಿದ್ದಾರೆ. ಹಾಗೆಯೇ 78 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್ ಗಳಿಸಿದ್ದಾರೆ.
ಹಾಗೆಯೇ 16 ಅಂತರಾಷ್ಟ್ರೀಯ ಶತಕ (ಟೆಸ್ಟ್ನಲ್ಲಿ 6, ಏಕದಿನದಲ್ಲಿ10) ಮತ್ತು 100 ಅಂತರಾಷ್ಟ್ರೀಯ ಅರ್ಧಶತಗಳನ್ನು ಹೊಂದಿದ್ದಾರೆ.
ವಿಕೆಟ್ ಕೀಪರ್ ಆಗಿ ಧೋನಿ 584 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಇದರಲ್ಲಿ ಟೆಸ್ಟ್ನಲ್ಲಿ 256 ಏಕದಿನದಲ್ಲಿ 285 ಮತ್ತು ಟ್ವೆಂಟಿ-20ನಲ್ಲಿ 43 ಕ್ಯಾಚ್ಗಳು ಸೇರಿವೆ.
ಅಂದ ಹಾಗೆ ಧೋನಿ ಈಗಾಗಲೇ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮ ಶ್ರೀ ಪ್ರಶಸ್ತಿಗಳಿಂದ ಭಾಜನವಾಗಿದ್ದಾರೆ.
ಹಾಗೊಂದು ವೇಳೆ ಪದ್ಮ ಭೂಷಣ್ ಪ್ರಶಸ್ತಿಗೆ ಧೋನಿ ಅರ್ಹವಾದ್ದಲ್ಲಿ 11ನೇ ಭಾರತೀಯ ಕ್ರಿಕೆಟಿಗನೆನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸುನಿಲ್ ಗಾವಸ್ಕರ್ ಮತ್ತು ರಾಹುಲ್ ದ್ರಾವಿಡ್ ಮುಂತಾದ ಆಟಗಾರರು ಸೇರಿದ್ದಾರೆ.