ಆ್ಯಪ್ನಗರ

ಸಚಿನ್‌ ವಿರುದ್ಧದ ಸ್ವಹಿತಾಸಕ್ತಿ ಸಂಘರ್ಷದ ಆರೋಪ ವಜಾ

ಸಿಎಸಿ ಸದಸ್ಯನಾಗಿರುವುದಿಲ್ಲ ಎಂದು ಸಚಿನ್‌ ಸ್ಪಷ್ಟಪಡಿಸಿರುವುದರಿಂದ ಅವರ ವಿರುದ್ಧದ ಸ್ವಹಿತಾಸಕ್ತಿ ಸಂಘರ್ಷದ ಆರೋಪವನ್ನು ವಜಾಗೊಳಿಸಲಾಗಿದೆ ಎಂದು ಬಿಸಿಸಿಐನ ನೀತಿ ಸಂಹಿತೆ ಅಧಿಕಾರಿಯೂ ಆಗಿರುವ ಜೈನ್‌ ಸೋಮವಾರ 2 ಪುಟಗಳ ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

PTI 28 May 2019, 1:08 pm
ಹೊಸದಿಲ್ಲಿ: ಬಿಸಿಸಿಐ ಒಂಬುಡ್ಸ್‌ಮನ್‌ ನ್ಯಾ|ಡಿ.ಕೆ.ಜೈನ್‌ ಸೋಮವಾರ ಸಚಿನ್‌ ತೆಂಡೂಲ್ಕರ್‌ ವಿರುದ್ಧದ ಸ್ವಹಿತಾಸಕ್ತಿ ಸಂಘರ್ಷದ ಆರೋಪವನ್ನು ವಜಾಗೊಳಿಸಿದ್ದಾರೆ. ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ನಿಯಮ ಮತ್ತು ಅಧಿಕಾರವಧಿ ಬಗ್ಗೆ ಬಿಸಿಸಿಐ ಸ್ಪಷ್ಟ ಮಾಹಿತಿ ಒದಗಿಸದ ಹೊರತು ಸಮಿತಿಯ ಭಾಗವಾಗಿರಲು ಸಚಿನ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಜೈನ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Vijaya Karnataka Web Sachin


ಇನ್ನು ಮುಂದೆ ಸಿಎಸಿ ಸದಸ್ಯನಾಗಿರುವುದಿಲ್ಲ ಎಂದು ಸಚಿನ್‌ ಸ್ಪಷ್ಟಪಡಿಸಿರುವುದರಿಂದ ಅವರ ವಿರುದ್ಧದ ಸ್ವಹಿತಾಸಕ್ತಿ ಸಂಘರ್ಷದ ಆರೋಪವನ್ನು ವಜಾಗೊಳಿಸಲಾಗಿದೆ ಎಂದು ಬಿಸಿಸಿಐನ ನೀತಿ ಸಂಹಿತೆ ಅಧಿಕಾರಿಯೂ ಆಗಿರುವ ಜೈನ್‌ ಸೋಮವಾರ 2 ಪುಟಗಳ ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

ವಕೀಲ ಅಮಿತ್‌ ಸಿಬಾಲ್‌ ಮೂಲಕ ಸಚಿನ್‌ ನೀಡಿರುವ ಹೇಳಿಕೆಯೇ ಅವರ ವಿರುದ್ಧದ ಆರೋಪವನ್ನು ವಜಾಗೊಳಿಸಲು ಪ್ರಮುಖ ಸಾಕ್ಷ್ಯಾಧಾರವಾಯಿತು ಎಂದೂ ಜೈನ್‌ ತೀರ್ಪಿನಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್‌ ಸಲಹಾ ಸಮಿತಿ(ಸಿಎಸಿ)ಯ ನಿಯಮ ಹಾಗೂ ಅಧಿಕಾರವಧಿಯ ಬಗ್ಗೆ ಸ್ಪಷ್ಟ ಉಲ್ಲೇಖ ನೀಡದ ಹೊರತು ಸಿಎಸಿಯಲ್ಲಿ ಮುಂದುವರಿಯುವುದಿಲ್ಲ ಎಂದು ತಮ್ಮ ವಕೀಲರ ಮುಖಾಂತರ ಸಚಿನ್‌ ಸ್ಪಷ್ಟಪಡಿಸಿದ್ದಾರೆ.

ಸಚಿನ್‌ ಮುಂಬಯಿ ಇಂಡಿಯನ್ಸ್‌ ಐಪಿಎಲ್‌ ತಂಡದ ಸಲಹೆಗಾರರಾಗಿರುವ ಜತೆಗೆ ಸಿಎಸಿಯ ಸದಸ್ಯರೂ ಆಗಿರುವುದರಿಂದ ಅವರು ಸ್ವಹಿತಾಸಕ್ತಿ ಸಂಘರ್ಷದ ವ್ಯಾಪ್ತಿಗೊಳಪಡುತ್ತಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಸದಸ್ಯ ಸಂಜೀವ್‌ ಗುಪ್ತಾ ಆರೋಪಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌