ಆ್ಯಪ್ನಗರ

ಕೇರಳ ವೇಗಿ ಶ್ರೀಶಾಂತ್ ಮೇಲಿನ ಆಜೀವ ನಿಷೇಧ ಶಿಕ್ಷೆ 7 ವರ್ಷಕ್ಕೆ ಇಳಿಕೆ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ ಕೇರಳ ವೇಗಿ ಎಸ್. ಶ್ರೀಶಾಂತ್ ಮೇಲೆ ವಿಧಿಸಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ ಏಳು ವರ್ಷಗಳಿಗೆ ಇಳಿಕೆಗೊಳಿಸಿದೆ. ಅಂದರೆ ಮುಂದಿನ ವರ್ಷ ಆಗಸ್ಟ್ ತಿಂಗಳ ವರೆಗೆ ನಿಷೇಧವು ಮುಂದುವರಿಯಲಿದೆ.

Vijaya Karnataka Web 20 Aug 2019, 4:16 pm
ಹೊಸದಿಲ್ಲಿ: ಹಲವಾರು ವರ್ಷಗಳ ಕಾನೂನು ಹೋರಾಟದ ಬಳಿಕ ಕೇರಳ ವೇಗಿ ಎಸ್. ಶ್ರೀಶಾಂತ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ ಏಳು ವರ್ಷಗಳಿಗೆ ಇಳಿಕೆಗೊಳಿಸಿದೆ.
Vijaya Karnataka Web s-sreesanth


2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಶ್ರೀಶಾಂತ್ ಸಿಕ್ಕಿ ಬಿದ್ದಿದ್ದರು. ಆದಾದ ಬಳಿಕ ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಒಳಗಾಗಿದ್ದರು.

ಇದರ ವಿರುದ್ಧ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೂ ನ್ಯಾಯಾಲಯ ಶ್ರೀಶಾಂತ್ ಪರ ತೀರ್ಪು ನೀಡಿತ್ತು.

ಇದೀಗ ಸ್ಪಷ್ಟನೆ ನೀಡಿರುವ ಬಿಸಿಸಿಐ ತನಿಖಾಧಿಕಾರಿ ನ್ಯಾಯಮೂರ್ತಿ ಡಿಕೆ ಜೈನ್, ಶ್ರೀಶಾಂತ್ ಮೇಲೆ 2013 ಸೆಪ್ಟೆಂಬರ್ 13ರಿಂದ ಏಳು ವರ್ಷಗಳ ಕಾಲ ಅಂದರೆ 2020 ಆಗಸ್ಟ್ 7ರ ವರೆಗೆ ಶಿಕ್ಷೆಯನ್ನು ವಿಧಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಈ ಅವಧಿಯಲ್ಲಿ ಬಿಸಿಸಿಐ ಪ್ರಾಯೋಜಿತ ಯಾವುದೇ ಕ್ರಿಕೆಟ್‌ನಲ್ಲಿ ಆಡಲು ಶ್ರೀಗೆ ಸಾಧ್ಯವಿಲ್ಲ. ಅಂದರೆ ಮುಂದಿನ ಒಂದು ವರ್ಷ ಕಾಲ ಮತ್ತೆ ಕ್ರಿಕೆಟ್‌ನಿಂದ ದೂರವುಳಿಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌