ಆ್ಯಪ್ನಗರ

ಸಪ್ಟೆಂಬರ್‌ನಲ್ಲಿ ಮಿನಿ ಐಪಿಎಲ್‌: ಬಿಸಿಸಿಐ

ವರ್ಷದ ಪ್ರತಿ ಸಪ್ಟೆಂಬರ್‌ನಲ್ಲಿ ವಿದೇಶದಲ್ಲಿ ಮಿನಿ ಐಪಿಎಲ್‌ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಈ ಟೂರ್ನಿ ಪ್ರಸಕ್ತ ವರ್ಷದಿಂದಲೇ ಆರಂಭವಾಗಲಿದೆ ಎಂದು ಮಂಡಳಿಯ ಅಧ್ಯಕ್ಷ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಏಜೆನ್ಸೀಸ್ 25 Jun 2016, 4:00 am

ಮತ್ತೊಂದು ಚುಟುಕು ಟೂರ್ನಿಗೆ ವಿದೇಶಿ ಆತಿಥ್ಯ | ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ

ಧರ್ಮಶಾಲಾ: ವರ್ಷದ ಪ್ರತಿ ಸಪ್ಟೆಂಬರ್‌ನಲ್ಲಿ ವಿದೇಶದಲ್ಲಿ ಮಿನಿ ಐಪಿಎಲ್‌ ಟೂರ್ನಿ ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಈ ಟೂರ್ನಿ ಪ್ರಸಕ್ತ ವರ್ಷದಿಂದಲೇ ಆರಂಭವಾಗಲಿದೆ ಎಂದು ಮಂಡಳಿಯ ಅಧ್ಯಕ್ಷ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಧರ್ಮಶಾಲಾದಲ್ಲಿ ಶುಕ್ರವಾರ ನಡೆದ ಬಿಸಿಸಿಐನ ಕಾರ್ಯಕಾರಿ ಸಮಿತಿ ಸಭೆ ಬಳಿಕ ಠಾಕೂರ್‌ ಮಿನಿ ಐಪಿಎಲ್‌ ಬಗ್ಗೆ ಮಾಹಿತಿ ನೀಡಿದರು. ''ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಚುಟುಕು ರೂಪಾಂತರವಾಗಿ ಮಿನಿ ಐಪಿಎಲ್‌ ಟೂರ್ನಿಯನ್ನು ಆರಂಭಸಲಿದ್ದೇವೆ. ಪ್ರತಿ ವರ್ಷ ವಿದೇಶದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಐಪಿಎಲ್‌ನ ಎಂಟು ತಂಡಗಳು ಭಾಗವಹಿಸಲಿವೆ. ಐಪಿಎಲ್‌ನಂತೆ ಇಲ್ಲಿ ತವರು ಮತ್ತು ತವರಿನ ಹೊರಗಿನ ಪಂದ್ಯಗಳು ಇರುವುದಿಲ್ಲ. ಪಂದ್ಯಗಳ ಸಂಖ್ಯೆಯಲ್ಲೂ ಇಳಿಮುಖವಾಗಲಿದ್ದು, ಎರಡು ವಾರಗಳ ಅವಧಿಯಲ್ಲಿ ಟೂರ್ನಿಯನ್ನು ಮುಗಿಸುವ ಯೋಜನೆ ಹೊಂದಿದ್ದೇವೆ,'' ಎಂದು ಠಾಕೂರ್‌ ತಿಳಿಸಿದರು.

ಟೂರ್ನಿಯ ವೇಳಾಪಟ್ಟಿ ಮತ್ತು ಟೂರ್ನಿ ಯಾವ ರೀತಿ ನಡೆಯಲಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅನುರಾಗ್‌ ಠಾಕೂರ್‌ ಇದೇ ವೇಳೆ ಹೇಳಿದರು.

ತಟಸ್ಥ ತಾಣಗಳಲ್ಲಿ ರಣಜಿ ಪಂದ್ಯಗಳು

ಪ್ರಸಕ್ತ ಸಾಲಿನಿಂದ ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ತಂಡಗಳು ತವರು ನೆಲದ ಲಾಭ ಪಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ನಡೆಸುವಂತೆ ಸೌರವ್‌ ಗಂಗೂಲಿ ನೇತೃತ್ವದ ತಾಂತ್ರಿಕ ಸಮಿತಿ ಬಿಸಿಸಿಐಗೆ ಶಿಫಾರಸು ಮಾಡಿತ್ತು. ಈ ಶಿಫಾರಸಿಗೆ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

Vijaya Karnataka Web bcci set to start mini indian premier league in september
ಸಪ್ಟೆಂಬರ್‌ನಲ್ಲಿ ಮಿನಿ ಐಪಿಎಲ್‌: ಬಿಸಿಸಿಐ


ಬಿಸಿಸಿಐ ಕಾರ್ಯಕಾರಿ ಸಮಿತಿಯ ಪ್ರಮುಖ ನಿರ್ಧಾರಗಳು

* ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಅನಿಲ್‌ ಕುಂಬ್ಳೆ ನೇಮಕಕ್ಕೆ ಅನುಮೋದನೆ

* ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲು ನಿರ್ಧಾರ

* 19 ರ ವಯೋಮಿತಿಯ ಆಟಗಾರನಿಗೆ ಐಸಿಸಿ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಒಂದು ಬಾರಿ ಮಾತ್ರ ಪ್ರತಿನಿಧಿಸುವ ಅವಕಾಶ

* 19ರ ವಯೋಮಿತಿಯಲ್ಲಿ ಒಬ್ಬ ಆಟಗಾರ 2 ದೇಶೀಯ ಕ್ರಿಕೆಟ್‌ ಋುತುವಿನಲ್ಲಿ ಮಾತ್ರ ಆಡುವ ಅವಕಾಶ

* ಸೈಯದ್‌ ಮುಶ್ತಾಕ್‌ ಅಲಿ ಟೂರ್ನಿಗೆ ಬದಲಾಗಿ ಹೊಸತೊಂದು ಟಿ20 ಲೀಗ್‌ ಆರಂಭಿಸಲು ನಿರ್ಧಾರ. ಇದರಂತೆ ಎಲ್ಲಾ ರಾಜ್ಯ ತಂಡಗಳು ತಮ್ಮ ವಲಯ ವ್ಯಾಪ್ತಿಯಲ್ಲಿ ಅಂತರ್‌ ವಲಯ ಲೀಗ್‌ ಪಂದ್ಯಗಳನ್ನು ಆಡಬೇಕು. ನಂತರ ಐದು ವಲಯಗಳಿಂದ ತಲಾ ಒಂದು ತಂಡವನ್ನು ಆಯ್ಕೆ ಮಾಡಿ ಅಂತರ್‌ ವಲಯ ಲೀಗ್‌ ಪಂದ್ಯಗಳನ್ನು ಆಡಬೇಕು.

* ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಉತ್ತಮ ವೆಬ್‌ಸೈಟ್‌, ಉತ್ತಮ ಫೇಸ್‌ ಬುಕ್‌ ಪೇಜ್‌, ಉತ್ತಮ ಟ್ವಿಟರ್‌ ನಿರ್ವಹಣೆ, ಉತ್ತಮ ಇನ್ಸ್‌ಟಾಗ್ರಾಂ ನಿರ್ವಹಣೆ, ಉತ್ತಮ ಮಾಧ್ಯಮ ಸೌಲಭ್ಯ,ಉತ್ತಮ ಮಾಧ್ಯಮ ನಿರ್ವಹಣೆಯ ವಿಭಾಗಗಳಲ್ಲಿ ಪ್ರತ್ಯೇಕ ವಾರ್ಷಿಕ ಪ್ರಶಸ್ತಿಗಳನ್ನು ನೀಡಲು ನಿರ್ಧಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌