ಆ್ಯಪ್ನಗರ

ಸ್ಮಿತ್ ವಿರುದ್ಧದ ದೂರು ಹಿಂಪಡೆದ ಬಿಸಿಸಿಐ

ವಿವಾದತ್ಮಾಕ ಡಿಶಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಮೋಸದಾಟಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ವಿರುದ್ಧದ ದೂರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂಪಡೆದಿದೆ. ಇದಕ್ಕೂ ಮೊದಲು ಘಟನೆಯಲ್ಲಿ ಭಾಗಿಯಾಗಿದ್ದ ಆಸೀಸ್ ನಾಯಕ ಸ್ಮಿತ್ ಹಾಗೂ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೋಹ್ಲಿ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದೋಷ ಮುಕ್ತಗೊಳಿಸಿತ್ತು.

ಟೈಮ್ಸ್ ಆಫ್ ಇಂಡಿಯಾ 10 Mar 2017, 2:36 pm
ಹೊಸದಿಲ್ಲಿ: ವಿವಾದತ್ಮಾಕ ಡಿಶಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಮೋಸದಾಟಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ವಿರುದ್ಧದ ದೂರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿಂಪಡೆದಿದೆ. ಇದಕ್ಕೂ ಮೊದಲು ಘಟನೆಯಲ್ಲಿ ಭಾಗಿಯಾಗಿದ್ದ ಆಸೀಸ್ ನಾಯಕ ಸ್ಮಿತ್ ಹಾಗೂ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೋಹ್ಲಿ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದೋಷ ಮುಕ್ತಗೊಳಿಸಿತ್ತು.
Vijaya Karnataka Web bcci withdraws complaint against steve smith and peter handscomb
ಸ್ಮಿತ್ ವಿರುದ್ಧದ ದೂರು ಹಿಂಪಡೆದ ಬಿಸಿಸಿಐ


ಉಮೇಶ್ ಯಾದವ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ್ದ ಸ್ಮಿತ್, ತಮ್ಮ ಸಹ ಆಟಗಾರ ಹ್ಯಾಂಡ್ಸ್‌ಕಾಂಬ್ ಜೊತೆ ಸೇರಿ ಡಿಆರ್‌ಎಸ್ ಮೇಲ್ಮನವಿಗಾಗಿ ಡ್ರೆಸ್ಸಿಂಗ್ ರೂಂ ನೆರವನ್ನು ಪಡೆಯಲು ಯತ್ನಿಸಿದ್ದರು. ಇದು ಕೋಹ್ಲಿ ಅವರನ್ನು ಆಕ್ರೋಶಕ್ಕೊಳಪಡಿಸಿತ್ತಲ್ಲದೆ ಅಂಪೈರ್ ಗಮನಕ್ಕೆ ತಂದಿತ್ತರು. ಪಂದ್ಯದ ಬಳಿಕವೂ ಕೋಹ್ಲಿ ಆಸೀಸ್ ನಾಯಕನ ವರ್ತನೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

ತದಾ ಬಳಿಕ ಕೋಹ್ಲಿ ಬೆನ್ನಿಗೆ ನಿಂತಿದ್ದ ಬಿಸಿಸಿಐ ಸ್ಮಿತ್ ಹಾಗೂ ಹ್ಯಾಂಡ್ಸ್‌ಕಾಂಬ್ ವಿರುದ್ದ ಲೆವೆಲ್ 2 ದೂರನ್ನು ದಾಖಲಿಸಿದ್ದರು. ಅತ್ತ ಕ್ರಿಕೆಟ್ ಆಸ್ಟ್ರೇಲಿಯಾ ಕೋಹ್ಲಿ ಆರೋಪವನ್ನು ಖಂಡಿಸಿತ್ತು. ಪರಿಣಾಮ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯೊದಸಿತ್ತು.

ಏತನ್ಮಧ್ಯೆ ಮುಂಬೈನಲ್ಲಿ ಬಿಸಿಸಿಐನ ರಾಹುಲ್ ಜೋಹ್ರಿ ಅವರನ್ನು ಭೇಟಿಯಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯಕಾರಿಣಿ ಜೇಮ್ಸ್ ಸಥರ್‌ಲ್ಯಾಂಡ್ ಮಾತುಕತೆಯ ಮೂಲಕ ವಿವಾದವನ್ನು ಬಗೆ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಇತ್ತಂಡಗಳ ನಾಯಕರು ರಾಂಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭೇಟಿಯಾಗಿ ವಿವಾದವನ್ನು ಸಂಪೂರ್ಣವಾಗಿ ಇತ್ಯರ್ಥಗೊಳಿಸಲಿದ್ದಾರೆ.

ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಆಟದ ಮೇಲೆ ಗಮನವನ್ನು ಕೇಂದ್ರಿಕರಿಸುವ ನಿಟ್ಟಿನಲ್ಲಿ ವಿವಾದವನ್ನು ಕೊನೆಗೊಳಿಸಿದೆ. ಎರಡು ತಂಡದ ಆಟಗಾರರು ಹೆಮ್ಮೆಯಿಂದಲೇ ತಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌