ಆ್ಯಪ್ನಗರ

ಮೊದಲೇ ಆಗಮಿಸಿದ್ದರೆ ಉತ್ತಮ ತಯಾರಿಗೆ ನೆರವಾಗುತ್ತಿತ್ತು: ಶಾಸ್ತ್ರಿ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ 0-2ರ ಅಂತರದಲ್ಲಿ ಕಳೆದುಕೊಂಡಿದೆ.

TIMESOFINDIA.COM 23 Jan 2018, 2:46 pm
ಜೋಹಾನ್ಸ್‌ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ 0-2ರ ಅಂತರದಲ್ಲಿ ಕಳೆದುಕೊಂಡಿದೆ.
Vijaya Karnataka Web being in south africa earlier would have helped prepare better ravi shastri
ಮೊದಲೇ ಆಗಮಿಸಿದ್ದರೆ ಉತ್ತಮ ತಯಾರಿಗೆ ನೆರವಾಗುತ್ತಿತ್ತು: ಶಾಸ್ತ್ರಿ


ಇದೀಗ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆಯಲಿರುವ ಕೊನೆಯ ಪಂದ್ಯ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ.

ಈ ನಡುವೆ ಹೇಳಿಕೆ ಕೊಟ್ಟಿರುವ ಕೋಚ್ ರವಿಶಾಸ್ತ್ರಿ, ದಕ್ಷಿಣ ಆಫ್ರಿಕಾಗೆ 10 ದಿನಗಳಷ್ಟು ಮುಂಚಿತವಾಗಿ ಆಗಮಿಸುತ್ತಿದ್ದರೆ ಉತ್ತಮ ತಯಾರಿ ಮಾಡಲು ನೆರವಾಗುತ್ತಿತ್ತು ಎಂದಿದ್ದಾರೆ.

ಕೇಪ್ ಟೌನ್ ಹಾಗೂ ಸೆಂಚುರಿಯನ್‌ನಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲೂ ತಲಾ 20 ವಿಕೆಟುಗಳನ್ನು ಕಬಳಿಸಿದರೂ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ಹೀನಾಯ ಸೋಲು ಎದುರಿಸುವಂತಾಗಿತ್ತು.

ನಮ್ಮ ಬೌಲರ್‌ಗಳು ಶ್ರೇಷ್ಠ ಕೆಲಸವನ್ನು ನಿರ್ವಹಿಸಿದ್ದಾರೆ. ನಮ್ಮ ಬೌಲರುಗಳಿಂದ ಈ ರೀತಿಯ ಪ್ರದರ್ಶನ ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಪಾಲಿಗೆ ಇದುವೇ ಸರಣಿಯಿಂದ ದೊರಕಿರುವ ಅತಿ ದೊಡ್ಡ ಧನಾತ್ಮಕ ಅಂಶವಾಗಿದೆ ಎಂದರು.

ನಾವು ಐವರು ಬ್ಯಾಟ್ಸ್‌ಮನ್ ಹಾಗೂ ಓರ್ವ ಆಲ್‌ರೌಂಡರ್ ಸಂಯೋಜನೆಯೊಂದಿಗೆ ಆಡುತ್ತಿದ್ದೇವೆ. ಹಾಗಾಗಿ ಅಗ್ರ ಬ್ಯಾಟ್ಸ್‌ಮನ್‌ಗಳ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಸೇರಿಸಿದರು.

ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅವಕಾಶಗಳಿದ್ದರೂ ನಾವದನ್ನು ಬಳಕೆ ಮಾಡಲಿಲ್ಲ. ನಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ಆಡುತ್ತಿದ್ದಲ್ಲಿ ಸ್ಪರ್ಧಾತ್ಮಕ ಟೆಸ್ಟ್ ಪಂದ್ಯವಾಗುತ್ತಿತ್ತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌