ಕೊನೆಗೂ ಬೆಂಗಳೂರಿಗೆ ವರದಾನವಾದ ಮಳೆರಾಯ; ಬಳ್ಳಾರಿ ವಿರುದ್ಧ 1 ರನ್ ಅಂತರದ ರೋಚಕ ಗೆಲುವು!
ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮೊದಲ ಗೆಲುವು ದಾಖಲಿಸಿದೆ. ಬಳ್ಳಾರಿ ಬ್ಲಾಸ್ಟರ್ಸ್ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ ಒಂದು ರನ್ ಅಂತರದ ಥ್ರಿಲ್ಲಿಂಗ್ ಗೆಲುವು ಬಾರಿಸಿದೆ.
Vijaya Karnataka Web 22 Aug 2019, 6:57 pm
ಬೆಂಗಳೂರು: ಕೊನೆಯ ಮಳೆರಾಯನ ಕೃಪೆಯೊಂದಿಗೆ ಕರ್ನಾಟಕ ಪ್ರೀಮಿಯರ್ ಲೀಗ್ ಏಳನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮೊದಲ ಗೆಲುವನ್ನು ದಾಖಲಿಸಿದೆ.
ಮಳೆಯಿಂದಾಗಿ ಮೊದಲ ಮೂರು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ ಬೆಂಗಳೂರು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ವಿಜೆಡಿ ನಿಯಮದನ್ವಯ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗಿಳಿಸಲ್ಪಟ್ಟ ಬೆಂಗಳೂರು ಆರಂಭ ಉತ್ತಮವಾಗಿರಲಿಲ್ಲ. ರೋಹನ್ ಕದಮ್ (22), ಶರತ್ ಬಿಆರ್ (16), ಭರತ್ ಧುರಿ (6) ಹಾಗೂ ನಿಕಿನ್ ಜೋಸ್ (2) ನಿರಾಸೆ ಮೂಡಿಸಿದರು.
11 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದ್ದ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದರಿಂದಾಗಿ ವಿಜೆಡಿ ನಿಯಮದನ್ವಯ ಓವರ್ಗಳ ಸಂಖ್ಯೆ 16ಕ್ಕೆ ಇಳಿಕೆಗೊಳಿಸಲಾಯಿತು. ಅಲ್ಲಿಂದ ಬಳಿಕವೂ ಬೆಂಗಳೂರು ಬ್ಯಾಟಿಂಗ್ ಸುಧಾರಿಸಲಿಲ್ಲ.
ಪರಿಣಾಮ 16 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಬಳ್ಳಾರಿ ಟಸ್ಕರ್ಸ್ಗೆ 99 ರನ್ಗಳನ್ನು ನಿಗದಿಪಡಿಸಲಾಯಿತು. ನಾಯಕ ರೊಂಗ್ಸನ್ ಜೋನಾಥನ್ (14) ಹಾಗೂ ಭರತ್ (16) ರನ್ ಗಳಿಸಿದರು. ಬಳ್ಳಾರಿ ಪರ ಅಬ್ರಾರ್ ಕಾಝಿ 15 ರನ್ನಿಗೆ ಮೂರು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಬಳ್ಳಾರಿಗೆ ಆರಂಭದಲ್ಲೇ ಕಾರ್ತಿಕ್ ಸಿಎ (0) ವಿಕೆಟ್ ನಷ್ಟವಾಯಿತು. ದೇವದತ್ ಪಡಿಕ್ಕಲ್ (7) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದೆಡೆ ಕೇವಲ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದ ಅಭಿಷೇಕ್ ರೆಡ್ಡಿ ರನ್ ಗತಿಗೆ ಆವೇಗ ತುಂಬಿದರು.
ಆದರೆ ನಾಯಕ ಸಿಎಂ ಗೌತಮ್ (7) ಹಾಗೂ ಜೀಶನ್ ಅಲಿನ್ ಸಯೀದ್ (2) ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಪರಿಣಾಮ 8.1 ಓವರ್ಗಳಲ್ಲಿ 55 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಮಳೆ ಮತ್ತೆ ಸುರಿದ ಪರಿಣಾಮ ಪಂದ್ಯವನ್ನು ಮುಂದುವರಿಸಲಾಗಲಿಲ್ಲ. ಇದರಿಂದಾಗಿ ಪಂದ್ಯವನ್ನು ಕೈಬಿಡಬೇಕಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಗೆಲುವಿಗೆ 56 ರನ್ ಗಳಿಸಬೇಕಿತ್ತು. ಇದರಿಂದಾಗಿ ವಿಜೆಡಿ ನಿಯಮದನ್ವಯ ಬೆಂಗಳೂರು ತಂಡವು ಒಂದು ರನ್ ಅಂತರದ ಜಯ ಗಳಿಸಿತ್ತು.
ಇದರೊಂದಿಗೆ ಸತತ ಮೂರು ಗೆಲುವುಗಳನ್ನು ದಾಖಲಿಸಿದ್ದ ಬಳ್ಳಾರಿ ಟಸ್ಕರ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಮಳೆಯಿಂದಾಗಿ ಮೊದಲ ಮೂರು ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ ಬೆಂಗಳೂರು, ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ವಿಜೆಡಿ ನಿಯಮದನ್ವಯ ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗಿಳಿಸಲ್ಪಟ್ಟ ಬೆಂಗಳೂರು ಆರಂಭ ಉತ್ತಮವಾಗಿರಲಿಲ್ಲ. ರೋಹನ್ ಕದಮ್ (22), ಶರತ್ ಬಿಆರ್ (16), ಭರತ್ ಧುರಿ (6) ಹಾಗೂ ನಿಕಿನ್ ಜೋಸ್ (2) ನಿರಾಸೆ ಮೂಡಿಸಿದರು.
11 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದ್ದ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದರಿಂದಾಗಿ ವಿಜೆಡಿ ನಿಯಮದನ್ವಯ ಓವರ್ಗಳ ಸಂಖ್ಯೆ 16ಕ್ಕೆ ಇಳಿಕೆಗೊಳಿಸಲಾಯಿತು. ಅಲ್ಲಿಂದ ಬಳಿಕವೂ ಬೆಂಗಳೂರು ಬ್ಯಾಟಿಂಗ್ ಸುಧಾರಿಸಲಿಲ್ಲ.
ಪರಿಣಾಮ 16 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಬಳ್ಳಾರಿ ಟಸ್ಕರ್ಸ್ಗೆ 99 ರನ್ಗಳನ್ನು ನಿಗದಿಪಡಿಸಲಾಯಿತು. ನಾಯಕ ರೊಂಗ್ಸನ್ ಜೋನಾಥನ್ (14) ಹಾಗೂ ಭರತ್ (16) ರನ್ ಗಳಿಸಿದರು. ಬಳ್ಳಾರಿ ಪರ ಅಬ್ರಾರ್ ಕಾಝಿ 15 ರನ್ನಿಗೆ ಮೂರು ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಬಳ್ಳಾರಿಗೆ ಆರಂಭದಲ್ಲೇ ಕಾರ್ತಿಕ್ ಸಿಎ (0) ವಿಕೆಟ್ ನಷ್ಟವಾಯಿತು. ದೇವದತ್ ಪಡಿಕ್ಕಲ್ (7) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದೆಡೆ ಕೇವಲ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 30 ರನ್ ಗಳಿಸಿದ ಅಭಿಷೇಕ್ ರೆಡ್ಡಿ ರನ್ ಗತಿಗೆ ಆವೇಗ ತುಂಬಿದರು.
ಆದರೆ ನಾಯಕ ಸಿಎಂ ಗೌತಮ್ (7) ಹಾಗೂ ಜೀಶನ್ ಅಲಿನ್ ಸಯೀದ್ (2) ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಪರಿಣಾಮ 8.1 ಓವರ್ಗಳಲ್ಲಿ 55 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಮಳೆ ಮತ್ತೆ ಸುರಿದ ಪರಿಣಾಮ ಪಂದ್ಯವನ್ನು ಮುಂದುವರಿಸಲಾಗಲಿಲ್ಲ. ಇದರಿಂದಾಗಿ ಪಂದ್ಯವನ್ನು ಕೈಬಿಡಬೇಕಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಗೆಲುವಿಗೆ 56 ರನ್ ಗಳಿಸಬೇಕಿತ್ತು. ಇದರಿಂದಾಗಿ ವಿಜೆಡಿ ನಿಯಮದನ್ವಯ ಬೆಂಗಳೂರು ತಂಡವು ಒಂದು ರನ್ ಅಂತರದ ಜಯ ಗಳಿಸಿತ್ತು.
ಇದರೊಂದಿಗೆ ಸತತ ಮೂರು ಗೆಲುವುಗಳನ್ನು ದಾಖಲಿಸಿದ್ದ ಬಳ್ಳಾರಿ ಟಸ್ಕರ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.