ಆ್ಯಪ್ನಗರ

ಸಚಿನ್, ಗಂಗೂಲಿ, ಲಕ್ಷ್ಮಣ್ ಮಾತಿಗೆ ಬೆಲೆ ಇಲ್ಲವೇ ?

ಸಹಾಯಕ ಕೋಚ್ ಆಯ್ಕೆ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಎಲ್ಲೇ ಮೀರಿದಿಯೇ ಎಂದು ಕ್ರಿಕೆಟ್ ನಿರ್ವಾಹಕರ ಸಮಿತಿ (ಸಿಒಎ) ಪ್ರಶ್ನೆ ಮಾಡಿರುವ ಒಂದು ದಿನದ ಬೆನ್ನಲ್ಲೇ ಪ್ರತಿಕ್ರಾ ಪ್ರಕಟಣೆ ಹೊರಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಇಲ್ಲಿಂದ ಮುಂದಕ್ಕೆ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನೊಳಗೊಂಡ ಟೀಮ್ ಇಂಡಿಯಾವು ಬೆಂಬಲ ಸಿಬ್ಬಂದಿಗೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದೆ.

Vijaya Karnataka Web 14 Jul 2017, 5:46 pm
ಮುಂಬೈ: ಸಹಾಯಕ ಕೋಚ್ ಆಯ್ಕೆ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಎಲ್ಲೇ ಮೀರಿದಿಯೇ ಎಂದು ಕ್ರಿಕೆಟ್ ನಿರ್ವಾಹಕರ ಸಮಿತಿ (ಸಿಒಎ) ಪ್ರಶ್ನೆ ಮಾಡಿರುವ ಒಂದು ದಿನದ ಬೆನ್ನಲ್ಲೇ ಪ್ರತಿಕ್ರಾ ಪ್ರಕಟಣೆ ಹೊರಡಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಇಲ್ಲಿಂದ ಮುಂದಕ್ಕೆ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನೊಳಗೊಂಡ ಟೀಮ್ ಇಂಡಿಯಾವು ಬೆಂಬಲ ಸಿಬ್ಬಂದಿಗೆ ಸಂಬಂಧ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದೆ.
Vijaya Karnataka Web big 3 rebuffed ravi shastri gets to pick core staff
ಸಚಿನ್, ಗಂಗೂಲಿ, ಲಕ್ಷ್ಮಣ್ ಮಾತಿಗೆ ಬೆಲೆ ಇಲ್ಲವೇ ?


ಇಲ್ಲಿ ಗಮನಾರ್ಹ ಸಂಗತಿಯೆಂದರೆ ಬಿಸಿಸಿಐ ಹೊರಡಿಸಿರುವ ಪ್ರಕಟಣೆಯಲ್ಲಿ, ಜಹೀರ್ ಖಾನ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಕಗೊಳಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಇದರೊಂದಿಗೆ ಜಹೀರ್ ಹಾಗೂ ರಾಹುಲ್ ಖಾಯಂ ಆಗಿ ತಂಡದ ಜತೆಗಿರಲ್ಲ ಎಂಬುದು ತಿಳಿದು ಬಂದಿದೆ.

ಶಾಸ್ತ್ರಿ ಅವರನ್ನು ಸಂಪರ್ಕಿಸಿದ ಬಳಿಕ ದ್ರಾವಿಡ್ ಅವರನ್ನು ಬ್ಯಾಟಿಂಗ್ ಹಾಗೂ ಜಹೀರ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಇದೀಗ ನಿರ್ದಿಷ್ಟ ಪ್ರವಾಸದಲ್ಲಿ ಟೀಮ್ ಇಂಡಿಯಾದ ಅಗತ್ಯಕ್ಕಾನುಸಾರವಾಗಿ ಮಾರ್ಗದರ್ಶಕ ಜವಾಬ್ದಾರಿಯನ್ನು ವಹಿಸಲಿದ್ದಾರೆ.

ಕೋಚ್ ನೇಮಕಕ್ಕೆ ಮೀರಿ ಕ್ರಿಕೆಟ್ ಸಲಹಾ ಸಮಿತಿಯು ನಿರ್ಧಾರ ತಳೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಸಿಸಿಐಗೆ ನಿರ್ವಾಹಕರ ಸಮಿತಿ ಸೂಚನೆ ನೀಡಿತ್ತು.

ಇದರಿಂದಾಗಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೋಹ್ಲಿ ಜೊತೆಗೆ ಸಂಪೂರ್ಣ ಟೀಮ್ ಇಂಡಿಯಾ ಆಟಗಾರರು ನೂತನ ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಆರ್ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಜೊತೆ ಮುಂದುವರಿಯಲಿದೆ.

ಈ ಹಿಂದೆ ಮಂಗಳವಾರದ ಟ್ವೀಟ್‌ನಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿ ಜೊತೆಗೆ ಜಹೀರ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಇದೀಗ ಎರಡು ದಿನಗಳ ಬಳಿಕ ಹೊರಡಿಸಿರುವ ಪ್ರಕಟಣೆಯಲ್ಲಿ ತಮ್ಮ ನಿರ್ಧಾರದಲ್ಲಿ ಬದಲಾವಣೆ ತಂದಿದ್ದು, ಸಹಾಯಕ ಕೋಚ್‌ಗಳನ್ನು ತಂಡದ ಅಗತ್ಯಕ್ಕಾನುಸಾರವಾಗಿ ನಿರ್ದಿಷ್ಟ ಪ್ರವಾಸಗಳಿಗೆ ಆಯ್ಕೆ ಮಾಡಲಿದೆ ಎಂದಿದೆ.

ಇವೆಲ್ಲದರಿಂದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಮಾಡಿದ ಶಿಫಾರಸುಗಳಿಗೆ ಬೆಲೆ ಇಲ್ಲದಂತಾಗಿದೆ. ಹಾಗೆಯೇ ಸಹಾಯಕ ಕೋಚ್ ನೇಮಕ ಸಂಬಂಧ ಈ ಮೂವರು ಮಹಾನ್ ಆಟಗಾರರ ಸಲಹೆಯನ್ನು ತಿರಸ್ಕರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌