ಆ್ಯಪ್ನಗರ

ಸ್ಮಿತ್‌ ಎಂಬ ಅದ್ಭುತ ನಾಯಕ, ಕಳ್ಳಾಟದ ಖಳನಾಯಕ

ಓರ್ವ ನಾಯಕನಾಗಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವುದರಲ್ಲಿ 28ರ ಹರೆಯದ ಸ್ಮಿತ್ ಯಶ ಕಂಡಿದ್ದಾರೆಯೇ? ಅನೇಕ ವಿವಾದಗಳು ಬೆನ್ನು ಹತ್ತಿರುವ ಸ್ಮಿತ್, ಕ್ರೀಡಾಸ್ಫೂರ್ತಿಯನ್ನು ಮೆರೆಯುವುದರಲ್ಲಿ ವಿಫಲವಾಗಿದ್ದು, ಕಳ್ಳಾಟದ ಖಳನಾಯಕನಾಗಿ ಹೊರಬಂದಿದ್ದಾರೆ.

TIMESOFINDIA.COM 25 Mar 2018, 4:48 pm
ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್‌ನ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಓರ್ವ ಅದ್ಭುತ ಬ್ಯಾಟ್ಸ್‌ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಯಾಕೆ ಸ್ಮಿತ್ ಬ್ಯಾಟಿಂಗ್ ಅನ್ನು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಜತೆ ಹೋಲಿಸಲಾಗುತ್ತಿದೆ.
Vijaya Karnataka Web smith-cameron


ಆದರೆ ಓರ್ವ ನಾಯಕನಾಗಿ ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವುದರಲ್ಲಿ 28ರ ಹರೆಯದ ಸ್ಮಿತ್ ಯಶ ಕಂಡಿದ್ದಾರೆಯೇ? ಅನೇಕ ವಿವಾದಗಳು ಬೆನ್ನು ಹತ್ತಿರುವ ಸ್ಮಿತ್, ಕ್ರೀಡಾಸ್ಫೂರ್ತಿಯನ್ನು ಮೆರೆಯುವುದರಲ್ಲಿ ವಿಫಲವಾಗಿದ್ದು, ಕಳ್ಳಾಟದ ಖಳನಾಯಕನಾಗಿ ಹೊರಬಂದಿದ್ದಾರೆ.

ಇದಕ್ಕೊಂದು ತಾಜಾ ಉದಾಹರಣೆ ಬಾಲ್ ಟ್ಯಾಂಪರಿಂಗ್. ದಕ್ಷಿಣ ಆಫ್ರಿಕಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಕ್ರಿಕೆಟಿಗ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದಾರೆ.

ಬಳಿಕ ಚೆಂಡು ವಿರೂಪಗೊಳಿಸಿರುವ ಮೋಸದಾಟವನ್ನು ಒಪ್ಪಿಕೊಂಡಿರುವ ನಾಯಕ ಸ್ಮಿತ್ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಪದೇ ಪದೇ ತಪ್ಪು ಎಸಗುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮರೆತಿರುವ ಸ್ಮಿತ್ ಸಭ್ಯರ ಆಟಕ್ಕೆ ಕಪ್ಪು ಮಸಿ ಬಳಿದಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2017 ಜನವರಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ತೀರ್ಪು ಪರಾಮರ್ಶೆಗೆ (ಡಿಆರ್‌ಎಸ್) ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಮೀವ್ ಸ್ಮಿತ್ ಡ್ರೆಸ್ಸಿಂಗ್ ಕೊಠಡಿಯ ನೆರವು ಯಾಚಿಸಲು ಪ್ರಯತ್ನಿಸಿರುವುದು ಹೆಚ್ಚಿನ ವಿವಾದವನ್ನುಂಟು ಮಾಡಿತ್ತು.

ಇದರಿಂದಾಗಿ ಸ್ಮಿತ್ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ನೇರ ಜಟಾಪಟಿಗೆ ಕಾರಣವಾಗಿತ್ತು. ಇಲ್ಲೂ ತಪ್ಪೊಪ್ಪಿಕೊಂಡ ಸ್ಮಿತ್ ತಮ್ಮಿಂದಾದ ಮೆರವು ಎಂದು ಹೇಳಿದ್ದರು.

2015ರಲ್ಲಿ ಮೈಕಲ್ ಕ್ಲಾರ್ಕ್ ಅವರಿಂದ ಖಾಯಂ ಟೆಸ್ಟ್ ನಾಯಕತ್ವ ವಹಿಸಿಕೊಂಡಿರುವ ಸ್ಮಿತ್, ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್ ಚರ್ಚ್ ಟೆಸ್ಟ್ ಪಂದ್ಯದ ಬಳಿಕ ಹೇಳಿಕೆ ನೀಡಿರುವ ಸ್ಮಿತ್, ಓರ್ವ ನಾಯಕನಾಗಿ ನಾನು ಸುಧಾರಿಸಿಕೊಳ್ಳಬೇಕಿದೆ. ನಾನು ನನ್ನ ತಪ್ಪಿನಿಂದ ಕಲಿಯುತ್ತಿಕೊಳ್ಳುತ್ತಿರುವುದಾಗಿ ನುಡಿದಿದ್ದರು.

ಓರ್ವ ಲೆಗ್ ಸ್ಪಿನ್ನರ್‌ನಿಂದ ಬ್ಯಾಟ್ಸ್‌ಮನ್ ಆಗಿ ಪರಿವರ್ತನೆಗೊಂಡಿರುವ ಸ್ಮಿತ್ ಬ್ಯಾಟಿಂಗ್ ಸಾಧನೆ ಮೆಚ್ಚಲೇಬೇಕಾದುದು. ಕಳೆದ ವರ್ಷ ಪರ್ತ್ ಟೆಸ್ಟ್‌ನಲ್ಲಂತೂ ಜೀವನಶ್ರೇಷ್ಠ 239 ರನ್ ಬಾರಿಸಿದ್ದರು.

ಆದರೆ ಓರ್ವ ನಾಯಕನಾಗಿ ಮೈದಾನದಲ್ಲಿ ಕ್ರೀಡಾಸ್ಫೂರ್ತಿಯನ್ನು ಮೆರೆಯುವಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌