ಆ್ಯಪ್ನಗರ

ದ. ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ ಗೆದ್ದ ಬಳಿಕ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದಿದು

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ತಂಡವಾಗಿರುವ ಭಾರತ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ 203 ರನ್‌ಗಳ ಭರ್ಜರಿ ಜಯ ದಾಖಲಿಸಿ 1-0 ಅಂತರದ ಸರಣಿ ಮುನ್ನಡೆ ಪಡೆದಿದೆ.

Vijaya Karnataka Web 6 Oct 2019, 4:42 pm
ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಭರ್ಜರಿ ಗೆಲುವಿಗೆ ಕಾರಣರಾದ ರೋಹಿತ್‌ ಶರ್ಮಾ, ಮಯಾಂಕ್‌ ಅಗರ್ವಾಲ್‌ ಮತ್ತು ಬೌಲರ್‌ಗಳ ಪ್ರದರ್ಶನವನ್ನು ನಾಯಕ ವಿರಾಟ್‌ ಕೊಹ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ.
Vijaya Karnataka Web virat kohli test cricket 1st test vs sa


ಪಂದ್ಯದ 5ನೇ ಮತ್ತು ಅಂತಿಮ ದಿನವಾದ ಭಾನುವಾರ ದಕ್ಷಿಣ ಆಫ್ರಿಕಾ ತಂಡವನ್ನು 191 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಭಾರತ ತಂಡ 203 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಮಂದಗತಿಯ ಪಿಚ್‌ನ ಸಂಪೂರ್ಣ ಲಾಭ ಪಡೆದು ಮಿಂಚಿನ ವೇಗದ ದಾಳಿ ಸಂಘಟಿಸಿದ ಬಲಗೈ ವೇಗದ ಬೌಲರ್‌ ಮೊಹಮ್ಮದ್‌ ಶಮಿ, 35ಕ್ಕೆ 5 ವಿಕೆಟ್‌ ಪಡೆಯುವ ಮೂಲಕ ಭಾರತದ ಜಯದ ಹಾದಿಯನ್ನುಯ ಸುಗಮವನ್ನಾಗಿಸಿದರು.

ಸ್ಕೋರ್‌ ಕಾರ್ಡ್‌

"500ಕ್ಕೂ ಹೆಚ್ಚು ರನ್‌ ಗಳಿಸಿದ್ದಾಗ ಪಂದ್ಯದಲ್ಲಿ ಸದಾ ಮೇಲುಗೈ ಹೊಂದಲು ಸಾಧ್ಯವಾಗುತ್ತದೆ. ಎದುರಾಳಿ ತಂಡ ಹೋರಾಟ ಪ್ರದರ್ಶಿಸಿದರೂ ಮುನ್ನಡೆ ನಮ್ಮದಾಗಿತ್ತು. ರೋಹಿತ್‌ ಅದ್ಭುತ ಮತ್ತು ಮಯಾಂಕ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಎರಡನೇ ಇನಿಂಗ್ಸ್‌ನಲ್ಲಿ ಶಮಿ ಪ್ರಮುಖ ವಿಕೆಟ್‌ಟೇಕರ್‌ ಆದರು. ಪ್ರತಿಯೊಬ್ಬರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು," ಎಂದು ಪಂದ್ಯದ ಬಳಿಕ ಮಾತನಾಡಿದ ವಿರಾಟ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಬ್ಯಾಟ್ಸ್‌ಮನ್‌ಗಳಿಗೆ ಅವರ ಕೆಲಸ ಕೊಂಚ ಸುಲಭವಾಗಿತ್ತು. ಆದರೆ ಬಲರ್‌ಗಳಿಗೆ ಇಲ್ಲಿ ಕಠಿಣ ಸವಾಲು ಎದುರಾಗಿತ್ತು. ಆದರೂ ಈ ಹಿಂದಿನ ಎಸ್‌ಜಿ ಬಾಲ್‌ಗಿಂತಲೂ ಈಗಿನ ಬಾಲ್‌ ಹೆಚ್ಚು ಸುಧಾರಣೆ ಕಂಡಿದೆ. 40-45 ಓವರ್‌ಗಳ ಹೊತ್ತಿಗೆ ಚೆಂಡು ಮೆತ್ತಗಾಗಿ ಬಿಡುತ್ತದೆ. 60 ಓವರ್‌ಗಳ ವರೆಗಾದರೂ ಚೆಂಡು ತನ್ನ ಗಡುಸುತನ ಉಳಿಸಿಕೊಳ್ಳಬೇಕು," ಎಂದು ಹೇಳಿದ್ದಾರೆ.

ರೋಹಿತ್‌ ಬ್ಯಾಕ್‌ ಟು ಬ್ಯಾಕ್‌ ಶತಕ ಸಾಧನೆಗೆ ಗೌತಮ್‌ ಗಂಭೀರ್‌ ಪ್ರತಿಕ್ರಿಯೆ ಇದು!

"ಸ್ಪಿನ್ನರ್‌ಗಳೇ ಎಲ್ಲಾ ಮಾಡುತ್ತಾರೆಂಬ ಮನಸ್ಥಿತಿ ಬಂದರೆ ವೇಗದ ಬೌಲರ್‌ಗಳಿಂದ ಪ್ರದರ್ಶನ ಹೊರಬರುವಿದಿಲ್ಲ. ಹೀಗಿರುವಾಗ ಪಂದ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ತಂಡದ ವೇಗಿಗಳಾದ ಇಶಾಂತ್‌, ಶಮಿ, ಜಸ್‌ಪ್ರೀತ್‌ ಮತ್ತು ಉಮೇಶ್‌ ಜವಾಬ್ದಾರಿ ಅರಿತು ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ," ಎಂದು ಬೌಲರ್‌ಗಳ ಪ್ರದರ್ಶನವನ್ನು ಕ್ಯಾಪ್ಟನ್‌ ಕೊಹ್ಲಿ ಕೊಂಡಾಡಿದ್ದಾರೆ.

ಮುರಳೀಧರನ್‌ ವಿಶ್ವ ದಾಖಲೆಯನ್ನು ಸರಿಗಟ್ಟಿದ ರವಿಚಂದ್ರನ್‌ ಅಶ್ವಿನ್‌!

ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದಿದ್ದು, ಸರಣಿಯ ಎರಡನೇ ಪಂದ್ಯ ಅಕ್ಟೋಬರ್‌ 10ರಂದು ಪುಣೆಯಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ವೈಝಾಗ್‌ ಟೆಸ್ಟ್‌ ಜಯದೊಂದಿಗೆ ಭಾರತ ತಂಡ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲ ಪಡಿಸಿಕೊಂಡಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಖಾತೆ ತೆರೆಯದೇ ಉಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌