ಆ್ಯಪ್ನಗರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹಾಸಾಧನೆ; ಪಾಕಿಸ್ತಾನ ಟ್ರೋಲ್ ಮಾಡಿದ ಭಜ್ಜಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹಾ ಸಾಧನೆಯ ಬೆನ್ನಲ್ಲೇ ನೆರೆಯ ಪಾಕಿಸ್ತಾನವನ್ನು ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ದೇಶಗಳು ತಮ್ಮ ಧ್ವಜಗಳ ಮೇಲೆ ಮಾತ್ರ ಚಂದ್ರನನ್ನು ಹೊಂದಿರುವುದಾಗಿ ಟೀಕಿಸಿದ್ದಾರೆ.

Vijaya Karnataka Web 23 Jul 2019, 11:28 am
ಭಾರತೀಯರ ಕೋಟಿ ಕನಸುಗಳನ್ನು ಚಂದ್ರನತ್ತ ಹೊತ್ತೊಯ್ಯುವ ಚಂದ್ರಯಾನ-2 ಸೋಮವಾರ ಯಶಸ್ವಿಯಾಗಿ ಆರಂಭಗೊಂಡಿದ್ದು, ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿದೆ.
Vijaya Karnataka Web chandrayan-2


ಬಾಹುಬಲಿ ನಾಮಾಂಕಿತ, ಬಲಿಷ್ಠ ಜಿಎಸ್‌ಎಲ್‌ವಿ-ಎಂಕೆ3-ಎಂ1 ರಾಕೆಟ್‌ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ನಭೋಮಂಡಲಕ್ಕೆ ಚಿಮ್ಮಿದೆ. ಮೋಡ ಮುಸುಕಿದ ಆಕಾಶಕ್ಕೆ ಬೆಳಕಿನ ಪ್ರಭೆಯೊಂದಿಗೆ ಆರ್ಭಟಿಸುತ್ತ ನೆಗೆದ ರಾಕೆಟ್‌ ತನ್ನ ಮೊದಲ ಹಂತದ ಕೆಲಸವನ್ನು ಪೂರೈಸುತ್ತಿದ್ದಂತೆಯೇ ಇಡೀ ದೇಶ ಅಕ್ಷರಶಃ ಎದ್ದು ನಿಂತು ಇಸ್ರೊದ ಮಹಾಸಾಧನೆಗೆ ಸೆಲ್ಯೂಟ್‌ ಹೊಡೆಯಿತು. ಇನ್ನು 48 ದಿನಗಳ ಬಳಿಕ ಅಂದರೆ ಸೆ.6ರಿಂದ 8ರ ನಡುವೆ ವ್ಯೋಮ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲಿದೆ.

ಏತನ್ಮಧ್ಯೆ ಚಂದ್ರಯಾನ 2 ಯಶಸ್ಸಿನ ಬೆನ್ನಲ್ಲೇ ನೆರೆಯ ಪಾಕಿಸ್ತಾನವನ್ನು ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲವು ದೇಶಗಳು ತಮ್ಮ ಧ್ವಜಗಳ ಮೇಲೆ ಚಂದ್ರನನ್ನು ಹೊಂದಿವೆ. ಆದರೆ ಕೆಲವು ದೇಶಗಳು ಚಂದ್ರನ ಮೇಲ್ಮೆಯಲ್ಲಿ ತನ್ನ ಧ್ವಜವನ್ನು ಹೊಂದಿವೆ ಎಂದು ಭಾರತದ ಮಹಾ ಸಾಧನೆಯನ್ನು ಕೊಂಡಾಡಿದ್ದಾರೆ.

ಪಾಕಿಸ್ತಾನ ಧ್ವಜವನ್ನು ಟ್ಯಾಗ್ ಮಾಡುತ್ತಾ ಹರ್ಭಜನ್ ಮಾಡಿರುವ ಟ್ರೋಲ್‌ಗೆ ವ್ಯಾಪಕ ಶಭಾಷ್‌ಗಿರಿ ಪಡೆದಿದೆ. ಅಲ್ಲದೆ ಅಭಿಮಾನಿಗಳ ಬೆಂಬಲ ವ್ಯಕ್ತವಾಗಿದೆ.

ಚಂದ್ರಯಾನ 2 ಯಶಸ್ಸಿಗೆ ಭಾರತೀಯ ಇತರೆ ಕ್ರಿಕೆಟಿಗರ ಪ್ರತಿಕ್ರಿಯೆ ಇಂತಿದೆ:

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌