ಆ್ಯಪ್ನಗರ

ಶಾಸ್ತ್ರಿ-ಕೊಹ್ಲಿ ಬದಲಾವಣೆಯಿಂದ ತಂಡದ ಸಂಯೋಜನೆಗೆ ಧಕ್ಕೆ?

ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಯಿಂದ ರವಿಶಾಸ್ತ್ರಿ ಅವರನ್ನು ಬದಲಾಯಿಸಬಾರದೆಂಬ ಅಭಿಪ್ರಾಯ ಮಂಡಳಿಯಿಂದಲೇ ಕೇಳಿ ಬಂದಿದೆ. ಇದು ಶಾಸ್ತ್ರಿ ಹಾಗೂ ಕೊಹ್ಲಿ ನಡುವಣ ಹೊಂದಾಣಿಕೆಗೆ ಧಕ್ಕೆಯನ್ನುಂಟು ಮಾಡಲಿದೆ ಎಂಬುದು ತಿಳಿದು ಬಂದಿದೆ.

Vijaya Karnataka Web 25 Jul 2019, 4:58 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಆಡಳಿತಾತ್ಮಕ ಸಮಿತಿಯು (ಸಿಒಎ) ಟೀಮ್ ಇಂಡಿಯಾದ ನೂತನ ಪ್ರಧಾನ ಕೋಚ್ ಹಾಗೂ ಸಹಾಯಕ ತರಬೇತುದಾರರ ಹುಡುಕಾಟದಲ್ಲಿದೆ.

ಈ ನಡುವೆ ಕೆಲವು ಬಿಸಿಸಿಐ ಅಧಿಕಾರಿಗಳು ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಪರ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಕೋಚ್ ಬದಲಾವಣೆ ಉಚಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ 2020 ಟ್ವೆಂಟಿ-20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ ಗಮದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಬೆಂಬಲಿಸುವ ನಿಟ್ಟಿನಲ್ಲಿ ಈ ಪರಿವರ್ತನಾ ಕಾಲಘಟ್ಟದ್ದಲ್ಲಿ ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ಅವರೇ ಕೊಚ್ ಹಾಗೂ ನಾಯಕರಾಗಿ ಮುಂದುವರಿಯಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.

ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ಒಬ್ಬರನ್ನೊಬ್ಬರು ಅತಿ ಹೆಚ್ಚು ನೆಚ್ಚಿಕೊಂಡಿದ್ದು, ಪರಿಪೂರಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಕಾಂಬಿನೇಷನ್ ಬದಲಾಯಿಸುವುದು ಮಾರಕವಾಗಿ ಪರಿಣಮಿಸಲಿದೆ ಎಂಬ ಅಭಿಮತ ಕೇಳಿಬಂದಿದೆ.

ನಿರಂತರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದಿರುವ ಅಧಿಕಾರಿಗಳು ಕೋಚ್ ಬದಲಾವಣೆಯು ಡ್ರೆಸ್ಸಿಂಗ್ ಕೋಣೆಯಲ್ಲಿ ಈಗಿನ ಸಮೀಕರಣಕ್ಕೆ ಧಕ್ಕೆಯನ್ನುಂಟು ಮಾಡಲಿದೆ. ಹಾಗೆಯೇ ಆಟಗಾರರು ಹೊಸ ಕೋಚ್ ಅಡಿಯಲ್ಲಿ ಮೊದಲಿನಿಂದಲೇ ಹೊಂದಿಕೊಳ್ಳಬೇಕಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈಗಿನ ಹಂತದಲ್ಲಿ ಕೋಚ್ ಬದಲಾವಣೆಯಾದರೆ ಮುಂದಿನ ಐದು ವರ್ಷಗಳ ಕಾರ್ಯತಂತ್ರ ಹಾಗೂ ಯೋಜನೆಗಳು ಬದಲಾಗುತ್ತದೆ. ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉಚಿತವಲ್ಲ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌