ಆ್ಯಪ್ನಗರ

ಕಾಂಪ್ಲಿಮೆಂಟರಿ ಪಾಸ್‌ ವಿವಾದ : 2 ಮತ್ತು 4ನೇ ಪಂದ್ಯ ಸ್ಥಳಾಂತರ?

ಕಾಂಪ್ಲಿಮೆಂಟರಿ ಪಾಸ್‌ ವಿಷಯದಲ್ಲಿ ಬಿಸಿಸಿಐನ ಹೊಸ ನೀತಿ ಇದೀಗ ಆತಿಥೇಯ ಕ್ರಿಕೆಟ್‌ ಸಂಸ್ಥೆಗಳಿಗೆ ಮಾರಕವಾಗಿ ಪರಿಣಮಿಸಿದ್ದು, ಪಂದ್ಯಗಳನ್ನು ಆಯೋಜಿಸುವುದಕ್ಕೇ ಮೀನಮೇಷ ಎಣಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Karnataka 4 Oct 2018, 9:25 am
ಹೊಸದಿಲ್ಲಿ: ಕಾಂಪ್ಲಿಮೆಂಟರಿ ಪಾಸ್‌ ವಿಷಯದಲ್ಲಿ ಬಿಸಿಸಿಐನ ಹೊಸ ನೀತಿ ಇದೀಗ ಆತಿಥೇಯ ಕ್ರಿಕೆಟ್‌ ಸಂಸ್ಥೆಗಳಿಗೆ ಮಾರಕವಾಗಿ ಪರಿಣಮಿಸಿದ್ದು, ಪಂದ್ಯಗಳನ್ನು ಆಯೋಜಿಸುವುದಕ್ಕೇ ಮೀನಮೇಷ ಎಣಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web BCCI


ಕಡಿಮೆ ಪ್ರಮಾಣದಲ್ಲಿ ಕಾಂಪ್ಲಿಮೆಂಟರಿ ಪಾಸ್‌ ಸಿಗಲಿರುವ ಹಿನ್ನೆಲೆಯಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆ ಬಂದಿರುವುದರಿಂದ ಆತಿಥೇಯ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ 2ನೇ ಏಕದಿನ ಪಂದ್ಯ ಇಂದೋರ್‌ನಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿದೆ. ಈ ಬಗ್ಗೆ ಬುಧವಾರ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿಯೂ ಆಗಿದೆ.

''ಭಾರತ ಮತ್ತು ವಿಂಡೀಸ್‌ ನಡುವಣ 2ನೇ ಪೇಟಿಎಂ ಏಕದಿನ ಪಂದ್ಯವನ್ನು ವಿಶಾಖಪಟ್ಟಣದ ವೈ.ಎಸ್‌.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಡಿಸಲಾಗುವುದು,'' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪಂದ್ಯ ಅಕ್ಟೋಬರ್‌ 24ರಂದು ನಡೆಯಲಿದೆ.

ಬಿಸಿಸಿಐ ಹೊಸ ಸಂವಿಧಾನ ಏನು ಹೇಳುತ್ತದೆ?

ಮಂಡಳಿಯ ಹೊಸ ಸಂವಿಧಾನದ ಪ್ರಕಾರ, ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ‌ದಲ್ಲಿ ಶೇ.90ರಷ್ಟು ಆಸನಗಳನ್ನು (ಟಿಕೆಟ್‌ಗಳು) ಮಾರಾಟ ಮಾಡಬೇಕು. ಉಳಿದ ಶೇ.10 ಟಿಕೆಟ್‌ಗಳನ್ನಷ್ಟೇ ಆಯಾ ಕ್ರಿಕೆಟ್‌ ಸಂಸ್ಥೆಗಳು ಕಾಂಪ್ಲಿಮೆಂಟರಿ ನೀಡಬಹುದು. ಆದರೆ, ಇದು ತೀರಾ ಕಡಿಮೆ ಎನ್ನುತ್ತಿವೆ ಕ್ರಿಕೆಟ್‌ ಸಂಸ್ಥೆಗಳು.

ಎಂಸಿಎನಿಂದಲೂ ಇದೇ ತೀರ್ಮಾನ?

ಕಾಂಪ್ಲಿಮೆಂಟರಿ ಟಿಕೆಟ್‌ ವಿಷಯದಲ್ಲಿ ಬಿಸಿಸಿಐನ ಹೊಸ ನಿಯಮದ ವಿರುದ್ಧ ಮುಂಬಯಿ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕೂಡ ತಿರುಗಿಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವುದಾಗಿ ಸಂಸ್ಥೆ ತಿಳಿಸಿದೆ. ''ವಾಂಖೆಡೆ ಸ್ಟೇಡಿಯಮ್‌ನ ಆಸನ ಸಾಮರ್ಥ್ಯ‌ 33,000. ಹೊಸ ನಿಯಮದ ಪ್ರಕಾರ, ಎಂಸಿಎಗೆ 3,300 ಕಾಂಪ್ಲಿಮೆಂಟರಿ ಪಾಸ್‌ಗಳಷ್ಟೇ ಸಿಗುತ್ತವೆ. ಅದರಲ್ಲಿ ಶೇ.5ರಷ್ಟು ಟಿಕೆಟ್‌ಗಳನ್ನು ಬಿಸಿಸಿಐಗೆ ನೀಡಬೇಕಿದೆ,'' ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಎಂಸಿಎ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಎಂಸಿಎ ಕೂಡ ಮಧ್ಯ ಪ್ರದೇಶ ಕ್ರಿಕೆಟ್‌ ಸಂಸ್ಥೆಯ ಹಾದಿ ಹಿಡಿದಲ್ಲಿ ಅಕ್ಟೋಬರ್‌ 29ರಂದು ವಾಂಖೆಡೆಯಲ್ಲಿ ನಡೆಯಬೇಕಿರುವ 4ನೇ ಏಕದಿನ ಪಂದ್ಯ ಕೂಡ ಬೇರೆಡೆಗೆ ಸ್ಥಳಾಂತರಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌