ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಹೃದಯ ಸ್ಪರ್ಶಿ ಸಂದೇಶ ರವಾನಿಸಿದ ಹಿಟ್ಮ್ಯಾನ್
ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಹಂಚಿದ್ದಾರೆ.
Vijaya Karnataka Web 16 Mar 2020, 2:23 pm
ಹೈಲೈಟ್ಸ್:
ಕೊರೊನಾ ವೈರಸ್ನಲ್ಲಿ ಬಲಿಯಾದವರಿಗಾಗಿ ಹೃದಯ ಮಿಡಿದ ರೋಹಿತ್ ಶರ್ಮಾ.
ಕೋವಿಡ್ 19 ಸೋಂಕು ಕಂಡುಬಂದ್ದಲ್ಲಿ ತಕ್ಷಣ ವೈದಕೀಯ ಇಲಾಖೆಗೆ ತಿಳಿಸುವಂತೆ ಕರೆ ನೀಡಿದ್ದಾರೆ.
ಎಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಸಹಜ ಸ್ಥಿತಿಗೆ ಮರಳಲು ಸಾಧ್ಯ.
ಹೈಲೈಟ್ಸ್ ಮಾತ್ರವೇ ಓದಲು ಆ್ಯಪ್ ಡೌನ್ಲೋಡ್ ಮಾಡಿಕೋವಿಡ್ 19 ಸೋಂಕು ಕಂಡುಬಂದ್ದಲ್ಲಿ ತಕ್ಷಣ ವೈದಕೀಯ ಇಲಾಖೆಗೆ ತಿಳಿಸುವಂತೆ ಕರೆ ನೀಡಿದ್ದಾರೆ.
ಎಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಸಹಜ ಸ್ಥಿತಿಗೆ ಮರಳಲು ಸಾಧ್ಯ.
ಮುಂಬಯಿ: ಕೊರೊನಾ ವೈರಸ್ ಸೋಂಕು ಪ್ರಕರಣ ದೇಶದ್ಯಾಂತ ಹೆಚ್ಚುತ್ತಲೇ ಇದೆ. ಇದರಿಂದಾಗಿ ಅನೇಕ ಕ್ರೀಡಾಕೂಟಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಬೇಕಾಗಿದ್ದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಭವಿಷ್ಯದಲ್ಲಿ ಆಯೋಜಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ. ಈ ಮಧ್ಯೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ನಾಯಕ ವಿರಾಟ್ ಕೊಹ್ಲಿ ಕರೆ ನೀಡಿದ್ದರು.
ಇದೀಗ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸಹ ಹೃದಯ ಸ್ಪರ್ಶಿ ಸಂದೇಶವನ್ನು ದೇಶದ ಜನತೆಯ ಜೊತೆಗೆ ಹಂಚಿದ್ದಾರೆ. ವಿಡಿಯೋ ಸಂದೇಶ ರವಾನಿಸಿರುವ ರೋಹಿತ್ ಶರ್ಮಾ, ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಸುತ್ತಾ ಕೆಲವೊಂದು ಅಂಶಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಎದುರಿಸಲು ವಿರಾಟ್ ಕೊಹ್ಲಿ ಸಂದೇಶ
"ನಾವೆಲ್ಲರೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದ್ದೇವೆ. ಇಡೀ ಪ್ರಪಂಚವೇ ಸ್ಥಗಿತಗೊಂಡಿರುವುದು ಬೇಸರ ಸಂಗತಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಜನಜೀವನ ಸಹಜ ಸ್ಥಿತಿಗೆ ಮರಳಲು ಸಾಧ್ಯ. ಅದಕ್ಕಾಗಿ ನಾವೇನು ಮಾಡಬೇಕೆಂದರೆ ಸ್ವಲ್ಪ ಸ್ಮಾರ್ಟ್ ಆಗಿರಬೇಕು. ಪ್ರೊ ಆಕ್ಟಿವ್ ಆಗಿರಬೇಕು. ನಮ್ಮ ಸುತ್ತುಮುತ್ತಲಿನ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳಬೇಕು" ಎಂದು ಹೇಳಿದರು.
"ಕೊರೊನಾ ವೈರಸ್ನ ಯಾವುದೇ ಲಕ್ಷ್ಮಣಗಳು ಕಾಣಿಸಿಕೊಂಡರೂ ಹತ್ತಿರದ ವೈದ್ಯಕೀಯ ಅಧಿಕಾರಿಗಳಿಗೆ ತಿಳಿಸಬೇಕು. ಯಾಕೆಂದರೆ ಮಕ್ಕಳೆಲ್ಲ ಶಾಲೆಗೆ ಹೋಗುವುದನ್ನು ನಾವು ಬಯಸುತ್ತೇವೆ. ನಾವೆಲ್ಲರೂ ಮಾಲ್ಗಳಿಗೆ ಹೋಗಲು ಬಯಸುತ್ತೇವೆ. ನಾವೆಲ್ಲರೂ ಥಿಯೇಟರ್ನಲ್ಲಿ ಸಿನೆಮಾ ನೋಡುವುದನ್ನು ಇಷ್ಟಪಡುತ್ತೇವೆ. ಈ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವೈರಸ್ ಬಾಧಿತರ ಚಿಕಿತ್ಸೆ ಮಾಡುತ್ತಿರುವ ವಿಶ್ವದಾದ್ಯಂತದ ವೈದ್ಯರು ಹಾಗೂ ನರ್ಸ್ಗಳ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ" ಎಂದರು.
ಐಪಿಎಲ್ ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ; ಸಾರ್ವಜನಿಕ ಆರೋಗ್ಯಕ್ಕೆ ಮೊದಲ ಆದ್ಯತೆ!
ಅದೇ ಹೊತ್ತಿಗೆ ಕೊರೊನಾ ವೈರಸ್ ಬಲಿಯಾದವರಿಗಾಗಿ ಹಾಗೂ ಅವರ ಕುಟುಂಬದವರಿಗಾಗಿ ರೋಹಿತ್ ಶರ್ಮಾ ಹೃದಯ ಮಿಡಿದರು. ಹಾಗೆಯೇ ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ ಎಂಬ ಸಂದೇಶ ರವಾನಿಸಿದರು.
ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆಗೆ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತಾಯ್ನಾಡಿಗೆ ಮರಳಿದ್ದರು. ತದಾ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿರಲಿಲ್ಲ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಿಟ್ಮ್ಯಾನ್ ಭರ್ಜರಿ ಕಮ್ಬ್ಯಾಕ್ ಎದುರು ನೋಡುತ್ತಿದ್ದಾರೆ.
ಇದೀಗ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸಹ ಹೃದಯ ಸ್ಪರ್ಶಿ ಸಂದೇಶವನ್ನು ದೇಶದ ಜನತೆಯ ಜೊತೆಗೆ ಹಂಚಿದ್ದಾರೆ. ವಿಡಿಯೋ ಸಂದೇಶ ರವಾನಿಸಿರುವ ರೋಹಿತ್ ಶರ್ಮಾ, ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಸುತ್ತಾ ಕೆಲವೊಂದು ಅಂಶಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಎದುರಿಸಲು ವಿರಾಟ್ ಕೊಹ್ಲಿ ಸಂದೇಶ
"ನಾವೆಲ್ಲರೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದ್ದೇವೆ. ಇಡೀ ಪ್ರಪಂಚವೇ ಸ್ಥಗಿತಗೊಂಡಿರುವುದು ಬೇಸರ ಸಂಗತಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಜನಜೀವನ ಸಹಜ ಸ್ಥಿತಿಗೆ ಮರಳಲು ಸಾಧ್ಯ. ಅದಕ್ಕಾಗಿ ನಾವೇನು ಮಾಡಬೇಕೆಂದರೆ ಸ್ವಲ್ಪ ಸ್ಮಾರ್ಟ್ ಆಗಿರಬೇಕು. ಪ್ರೊ ಆಕ್ಟಿವ್ ಆಗಿರಬೇಕು. ನಮ್ಮ ಸುತ್ತುಮುತ್ತಲಿನ ಪ್ರದೇಶಗಳ ಬಗ್ಗೆ ತಿಳಿದುಕೊಳ್ಳಬೇಕು" ಎಂದು ಹೇಳಿದರು.
"ಕೊರೊನಾ ವೈರಸ್ನ ಯಾವುದೇ ಲಕ್ಷ್ಮಣಗಳು ಕಾಣಿಸಿಕೊಂಡರೂ ಹತ್ತಿರದ ವೈದ್ಯಕೀಯ ಅಧಿಕಾರಿಗಳಿಗೆ ತಿಳಿಸಬೇಕು. ಯಾಕೆಂದರೆ ಮಕ್ಕಳೆಲ್ಲ ಶಾಲೆಗೆ ಹೋಗುವುದನ್ನು ನಾವು ಬಯಸುತ್ತೇವೆ. ನಾವೆಲ್ಲರೂ ಮಾಲ್ಗಳಿಗೆ ಹೋಗಲು ಬಯಸುತ್ತೇವೆ. ನಾವೆಲ್ಲರೂ ಥಿಯೇಟರ್ನಲ್ಲಿ ಸಿನೆಮಾ ನೋಡುವುದನ್ನು ಇಷ್ಟಪಡುತ್ತೇವೆ. ಈ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವೈರಸ್ ಬಾಧಿತರ ಚಿಕಿತ್ಸೆ ಮಾಡುತ್ತಿರುವ ವಿಶ್ವದಾದ್ಯಂತದ ವೈದ್ಯರು ಹಾಗೂ ನರ್ಸ್ಗಳ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ" ಎಂದರು.
ಐಪಿಎಲ್ ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ; ಸಾರ್ವಜನಿಕ ಆರೋಗ್ಯಕ್ಕೆ ಮೊದಲ ಆದ್ಯತೆ!
ಅದೇ ಹೊತ್ತಿಗೆ ಕೊರೊನಾ ವೈರಸ್ ಬಲಿಯಾದವರಿಗಾಗಿ ಹಾಗೂ ಅವರ ಕುಟುಂಬದವರಿಗಾಗಿ ರೋಹಿತ್ ಶರ್ಮಾ ಹೃದಯ ಮಿಡಿದರು. ಹಾಗೆಯೇ ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ ಎಂಬ ಸಂದೇಶ ರವಾನಿಸಿದರು.
ಕಳೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆಗೆ ರೋಹಿತ್ ಶರ್ಮಾ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಪರಿಣಾಮ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತಾಯ್ನಾಡಿಗೆ ಮರಳಿದ್ದರು. ತದಾ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿರಲಿಲ್ಲ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಿಟ್ಮ್ಯಾನ್ ಭರ್ಜರಿ ಕಮ್ಬ್ಯಾಕ್ ಎದುರು ನೋಡುತ್ತಿದ್ದಾರೆ.