ಆ್ಯಪ್ನಗರ

ದಿನಗೂಲಿ ಕಾರ್ಮಿಕನ ಮಗ ಈಗ ಐಪಿಎಲ್ ತಾರೆ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಅನೇಕ ಕ್ರಿಕೆಟಿಗರ ಅದೃಷ್ಟವನ್ನೇ ಬದಲಾಯಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುತ್ತಿರುವ ಐಪಿಎಲ್ ಕ್ರಿಕೆಟ್‌ನಲ್ಲಿ ದುಡ್ಡಿನ ಹೊಳೆಯೇ ಹರಿದು ಬರುತ್ತಿದೆ.

ಟೈಮ್ಸ್ ಆಫ್ ಇಂಡಿಯಾ 21 Feb 2017, 3:29 pm
ಹೊಸದಿಲ್ಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಅನೇಕ ಕ್ರಿಕೆಟಿಗರ ಅದೃಷ್ಟವನ್ನೇ ಬದಲಾಯಿಸಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುತ್ತಿರುವ ಐಪಿಎಲ್ ಕ್ರಿಕೆಟ್‌ನಲ್ಲಿ ದುಡ್ಡಿನ ಹೊಳೆಯೇ ಹರಿದು ಬರುತ್ತಿದೆ.
Vijaya Karnataka Web daily wagers son son natarajan from tennis ball star to ipl big bucks
ದಿನಗೂಲಿ ಕಾರ್ಮಿಕನ ಮಗ ಈಗ ಐಪಿಎಲ್ ತಾರೆ


ಇನ್ನಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆಗೈಯಬೇಕಾಗಿರುವ ಉದಯೋನ್ಮುಖ ಆಟಗಾರನೊಬ್ಬನ ಜೀವನ ಚರಿತ್ರೆ ಐಪಿಎಲ್ ಹರಾಜಿನಲ್ಲಿ ಬದಲಾಗಿದೆ. 10 ಲಕ್ಷ ರೂ. ಮೂಲ ಬೆಲೆ ನಿಗದಿಗೊಂಡಿದ್ದ ತಮಿಳುನಾಡಿನ ಈ ಯುವ ಆಟಗಾರನನ್ನು ಬರೋಬ್ಬರಿ 3 ಕೋಟಿ ರೂ. ನೀಡಿ ವಿರೇಂದ್ರ ಸೆಹ್ವಾಗ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಖರೀದಿಸಿತ್ತು. ಇದು ಮೂಲ ಬೆಲೆಗಿಂತಲೂ 30 ಪಟ್ಟು ಜಾಸ್ತಿಯಾಗಿದೆ.

ದಿನಗೂಲಿ ಕಾರ್ಮಿಕನ ಮಗನಾಗಿರುವ ತಂಗರಸು ನಟರಾಜನ್ ಎಂಬವನ ಭವಿಷ್ಯ ಕೆಲವೇ ನಿಮಿಷಗಳಲ್ಲಿ ಬದಲಾಗಿತ್ತು. ತಂಗರಸು ಅಮ್ಮ ಬೀದಿಯ ಬದಿಯಲ್ಲಿ ಸ್ಟಾಲ್ ನಡೆಸುತ್ತಿದ್ದರೆ, ಅಪ್ಪ ರೈಲ್ವೆ ನಿಲ್ದಾಣದಲ್ಲಿ ದಿನಗೂಲಿ ಕೆಲಸವನ್ನು ಮಾಡುತ್ತಿದ್ದಾರೆ.

ತವರೂರಾದ ಸೇಲಂನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ತಂಗರಸು ಚೆನ್ನೈಗೆ ಬಂದು ಆರ್ ಅಶ್ವಿನ್ ಹಾಗೂ ಮುರಳಿ ವಿಜಯ್ ಅವರಂತಹ ಆಟಗಾರರ ಜನಪ್ರಿಯ ಜಾಲಿ ರೋವರ್ಸ್ ಪರ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲಿಂದ ಬಳಿಕ ಇನ್ನು ಒಂದು ಹೆಜ್ಜೆ ಮುಂದಿಟ್ಟಿದ್ದ ನಟರಾಜನ್ ಕಳೆದ ವರ್ಷ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ದಿಂಡಿಗಲ್ ಡ್ರಾಗನ್ಸ್ ಪರ ಆಡಲು ಅವಕಾಶ ಪಡೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟರಾಜನ್, ಇವೆಲ್ಲವೂ ಅವಿಶ್ವಸನೀಯ. ಇಂತಹದೊಂದು ಅವಕಾಶ ಗಿಟ್ಟಿಸಿಕೊಂಡಿರುವುದಕ್ಕೆ ಅತೀವ ಸಂತೋಷಗೊಂಡಿರುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಶ್ವಿನ್, ವಿಜಯ್ ಹಾಗೂ ತಮಿಳುನಾಡು ಬೌಲಿಂಗ್ ಕೋಚ್ ಎಲ್ ಬಾಲಾಜಿ ಅವರಿಗೆ ಕೃತತೆ ಸಲ್ಲಿಸಲು ಬಯಸಿದ್ದಾರೆ. ಇವರೆಲ್ಲರೂ ನನ್ನ ಮೇಲೆ ಇಟ್ಟಿಕೊಂಡಿರುವ ನಂಬಿಕೆಯಿಂದಾಗಿ ರಜಣಿ ಟ್ರೋಫಿಯಲ್ಲೂ ಆಡಲು ಅವಕಾಶ ದೊರಕಿದೆ ಎಂದಿದ್ದಾರೆ.

ತಮಿಳುನಾಡಿನ ಮುಸ್ತಾಫಿಜುರ್ ರಹ್ಮಾನ್ ಎಂದು ಕರೆಯಲ್ಪಡುವ ನಟರಾಜನ್ ಅವರು ತಮ್ಮ ನೆಚ್ಚಿನ ಆಟಗಾರ ಮಿಚ್ಚೆಲ್ ಜಾನ್ಸನ್ ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ ಭೇಟಿಯಾಗುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌