ಆ್ಯಪ್ನಗರ

ಸ್ಟೈನ್‌ಗೆ ಪುನರಾಗಮನ ಕಷ್ಟ: ಹರಭಜನ್

ಕೆರಿಯರ್‌ಗೆ ಮಾರಕವಾಗಿರುವ ಗಾಯದಿಂದ ಮುಕ್ತಿ ಹೊಂದಿದ ಬಳಿಕ ಅಂರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಕಮ್‌ಬ್ಯಾಕ್ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ಬಲಗೈ ವೇಗಿ ಡೇಲ್ ಸ್ಟೈನ್ ಟೀಮ್ ಇಂಡಿಯಾಗೆ ಅಷ್ಟೊಂದು ಸವಾಲಾಗಿ ಕಾಡಲ್ಲ ಎಂದು ಭಾರತದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

TIMESOFINDIA.COM 26 Dec 2017, 3:21 pm
ಹೊಸದಿಲ್ಲಿ: ಕೆರಿಯರ್‌ಗೆ ಮಾರಕವಾಗಿರುವ ಗಾಯದಿಂದ ಮುಕ್ತಿ ಹೊಂದಿದ ಬಳಿಕ ಅಂರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಕಮ್‌ಬ್ಯಾಕ್ ಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ಬಲಗೈ ವೇಗಿ ಡೇಲ್ ಸ್ಟೈನ್ ಟೀಮ್ ಇಂಡಿಯಾಗೆ ಅಷ್ಟೊಂದು ಸವಾಲಾಗಿ ಕಾಡಲ್ಲ ಎಂದು ಭಾರತದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web dale steyn would be challenged by india harbhajan singh
ಸ್ಟೈನ್‌ಗೆ ಪುನರಾಗಮನ ಕಷ್ಟ: ಹರಭಜನ್


ಒಂದು ಕಾಲಘಟ್ಟದಲ್ಲಿ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದ ಭಜ್ಜಿ, ಕಳೆದ ಕೆಲವು ವರ್ಷಗಳಿಂದ ಸ್ಥಾನ ಪಡೆಯುವಲ್ಲಿ ವಿಫಲವಾಗುತ್ತಿದ್ದಾರೆ. ಯುವ ಪ್ರತಿಭಾವಂತ ಸ್ಪಿನ್ನರ್‌ಗಳ ಆಗಮನದಿಂದಾಗಿ ಹರಭಜನ್ ಅವರನ್ನು ಕಡೆಗಣಿಸಲಾಗಿತ್ತು.

ಕಳೆದ 10 ವರ್ಷಗಳಲ್ಲಿ ವಿಶ್ವ ಕಂಡ ಅತ್ಯಂತ ಶ್ರೇಷ್ಠ ವೇಗಿಗಳಲ್ಲಿ ಡೇಲ್ ಸ್ಟೈನ್ ಓರ್ವರಾಗಿದ್ದಾರೆ. ಆದರೂ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ಜಿಂಬಾಬ್ವೆ ವಿರುದ್ದ ನಡೆಯಲಿರುವ ಟೆಸ್ಟ್ ಪಂದ್ಯದಿಂದ ತುಲನೆ ಮಾಡುವುದು ಕಷ್ಟ ಎಂದು ಭಜ್ಜಿ ಸೇರಿಸಿದರು.

ಭಾರತೀಯ ಬ್ಯಾಟಿಂಗ್ ಪಡೆಯನ್ನು ನೋಡಿರಿ. ನಾವು ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಅವರಂತಹ ವಿಶ್ವ ಶ್ರೇಷ್ಠ ಬ್ಯಾಟಿಂಗ್ ಪಡೆಯನ್ನು ಪಡೆದಿದ್ದೇವೆ ಎಂದರು.

ಅದೇ ಹೊತ್ತಿಗೆ ಆರನೇ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಬದಲು ರೋಹಿತ್ ಶರ್ಮಾ ಆಯ್ಕೆ ಮಾಡಬೇಕು ಎಂದು ಹರಭಜನ್ ಅಭಿಪ್ರಾಯಪಟ್ಟರು.

ಅಂತೆಯೇ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಡುವೆ ಓರ್ವ ಸ್ಪಿನ್ನರ್ ಮಾತ್ರ ಆಯ್ಕೆ ಮಾಡುವ ವಿಚಾರ ಎದುರಾದಾಗ, ಅಲ್ಲಿ ಯಾವುದೇ ಸಂದೇಹಗಳಿರಬಾರದು ಎಂದು ಹರಭಜನ್ ಒತ್ತಿ ಹೇಳಿದರು. ಅಶ್ವಿನ್ ಫಿಟ್ ಆಗಿದ್ದಲ್ಲಿ ಅವರೇ ಮೊದಲ ಆಯ್ಕೆಯಾಗುತ್ತಾರೆ. ಅತಿ ವೇಗದಲ್ಲಿ 300 ವಿಕೆಟ್‌ಗಳನ್ನು ಗಳಿಸಿದ ಬಳಿಕವೂ ಆಯ್ಕೆಯಾಗುವುದಿಲ್ಲವೇ? ಎಂದು ಭಜ್ಜಿ ಮರು ಪ್ನಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌