ಆ್ಯಪ್ನಗರ

ಸಚಿನ್‌, ಧೋನಿಗೆ ಕಮ್ಮಿಯೇನಲ್ಲ ಸುರೇಶ್ ರೈನಾ

ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಗುಜರಾತ್ ಲಯನ್ಸ್ ಕೆಟ್ಟ ಪ್ರದರ್ಶನವನ್ನು ನೀಡಿರಬಹುದು. ಆದರೆ ಉತ್ತಮ ಕ್ರೀಡಾಸ್ಪೂರ್ತಿಯನ್ನು ಮೆರೆದಿರುವ ನಾಯಕ ಸುರೇಶ್ ರೈನಾ ಗಮನ ಸೆಳೆದಿದ್ದಾರೆ.

ಏಜೆನ್ಸೀಸ್ 12 May 2017, 5:05 pm
ಹೊಸದಿಲ್ಲಿ: ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಗುಜರಾತ್ ಲಯನ್ಸ್ ಕೆಟ್ಟ ಪ್ರದರ್ಶನವನ್ನು ನೀಡಿರಬಹುದು. ಆದರೆ ಉತ್ತಮ ಕ್ರೀಡಾಸ್ಪೂರ್ತಿಯನ್ನು ಮೆರೆದಿರುವ ನಾಯಕ ಸುರೇಶ್ ರೈನಾ ಗಮನ ಸೆಳೆದಿದ್ದಾರೆ.
Vijaya Karnataka Web despite team india snub this incident proves suresh rainas fandom is no less than sachin or dhoni
ಸಚಿನ್‌, ಧೋನಿಗೆ ಕಮ್ಮಿಯೇನಲ್ಲ ಸುರೇಶ್ ರೈನಾ


ಎದುರಾಳಿ ತಂಡದ ಆಟಗಾರನಾಗಿರುವ ಹೊರತಾಗಿಯೂ ಆಟಗಾರರ ಸಾಧನೆಯನ್ನು ಶ್ಲಾಘಿಸಲು ರೈನಾ ಎಂದೂ ಹಿಂಜರಿಯುತ್ತಿರಲಿಲ್ಲ. ತಮ್ಮ ನೋವಲ್ಲೂ ಇತರರನ್ನು ಹುರಿದುಂಬಿಸುವ ಈ ಸರಳ ಸ್ವಭಾವವು ರೈನಾ ಅವರಿಗೂ ಸಾಕಷ್ಟು ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳಲು ನೆರವಾಗಿದೆ.

ಇದರೊಂದಿಗೆ ಸುರೇಶ್ ರೈನಾ ಕೂಡಾ ಜನಪ್ರಿಯತೆಯಲ್ಲಿ ಕ್ರಿಕಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ.

ಈ ನಡುವೆ ಐಪಿಎಲ್ ಪಂದ್ಯದ ನಡುವೆ ಮೈದಾನಕ್ಕೆ ಓಡೋಡಿ ಬಂದ ರೈನಾ ಅಭಿಮಾನಿಯೋರ್ವ ಮಂಡಿಯೂರಿ ನಿಂತು ಆಟೋಗ್ರಾಫ್ ಕೇಳಿಕೊಂಡಿದ್ದಾರೆ. ಇದರಿಂದ ಸ್ವಲ್ಪ ಹೊತ್ತು ಪಂದ್ಯಕ್ಕೆ ಅಡಚಣೆಯಾಗಿತ್ತು. ಈ ಕೂಡಲೇ ಸ್ಪಂದಿಸಿದ ರೈನಾ ಅಭಿಮಾನಿಯಲ್ಲಿ ಮೈದಾನ ಬಿಟ್ಟು ಹೊರ ಹೋಗುವಂತೆ ವಿನಂತಿಸಿಕೊಂಡಿದ್ದರು.

ಐಪಿಎಲ್ 10ರ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಾಗಿ ರೈನಾ 440 ರನ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಬ್ಯಾಟ್ಸ್‌ಮನ್‌ಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.

ಇದೇ ಮೊದಲ ಬಾರಿಗೆ ಪ್ಲೇ-ಆಫ್ ಮುಖ ಕಾಣದೆ ರೈನಾ ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ. ಐಪಿಎಲ್ ಮೊದಲ 8 ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಿದ್ದ ರೈನಾ, ಕಳೆದ ವರ್ಷ ಗುಜರಾತ್ ಲಯನ್ಸ್ ತಂಡವನ್ನು ಮುನ್ನಡೆಸಿದ್ದರಲ್ಲದೆ ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌