ರಾಂಚಿ: ಹಿಂದೊಮ್ಮೆ ಭಾರತೀಯ ರೈಲ್ವೆಯಲ್ಲಿ ಟಿಕೆಟ್ ತಪಾಸಣಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಉದ್ದನೆಯ ಕೂದಲಿನ ಯುವಕನೊರ್ವ ಬಳಿಕ ಸಾಕಷ್ಟು ಕಠಿಣ ಪರಿಶ್ರಮದ ಬಳಿಕ ಮುಂದೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಪಟ್ಟವನ್ನು ಆಲಂಕರಿಸಿದ್ದರಲ್ಲದೆ ಟ್ವೆಂಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇಡೀ ದೇಶದ ಜನತೆಯ ಹೆಮ್ಮೆಯಾಗಿದ್ದರು.
ನಾವು ಮಾತನಾಡುತ್ತಿರುವುದು ಅದೇ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಏಕದಿನ ಹಾಗೂ ಟ್ವೆಂಟಿ-20 ನಾಯಕತ್ವ ಸ್ಥಾನದಿಂದಲೂ ಕೆಳಗಿಳಿದಿರುವ ಧೋನಿ ಸುದೀರ್ಘವಾದ 13 ವರ್ಷಗಳ ಬಳಿಕವೀಗ ಮತ್ತೆ ರೈಲಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
@msdhoni pic.twitter.com/kXskI2U562 — Captain MS Dhoni (@MSDsuperfan) February 22, 2017 ಕೋಲ್ಕತ್ತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಲಿರುವ ಧೋನಿ ದಕ್ಷಿಣ ಪೂರ್ವ ರೈಲಿನಲ್ಲಿ ಸಂಚರಿಸಿದ್ದಾರೆ. ಇದು ಧೋನಿ ಸಹಜ ಗುಣವನ್ನು ತೋರಿಸುತ್ತಿದೆ. ಕೋಟ್ಯಧಿಪತಿಯಾಗಿರುವ ಧೋನಿಗೆ ರಾಂಚಿಯಿಂದ ನೇರವಾಗಿ ಕೋಲ್ಕತ್ತಾ ವಿಮಾನ ಏರಬಹುತ್ತಿತ್ತು. ಆದರೆ ತಮ್ಮ ತಂಡದ ಸಹ ಆಟಗಾರರ ಜೊತೆಗೆ ಪ್ರಯಾಣಿಸುವ ಮೂಲಕ ಹಿರಿಮೆ ಮೆರೆದಿದ್ದಾರೆ.
18616 ಕ್ರಿಯಾ ಯೋಗ ಎಕ್ಸ್ಪ್ರೆಸ್ನ ಎರಡನೇ ದರ್ಜೆಯ ಎಸಿ ಕೋಚ್ನಲ್ಲಿ ಧೋನಿ ಪ್ರಯಾಣಿಸಿದ್ದಾರೆ. ರಾತ್ರಿ 9.40ರ ಹೊತ್ತಿಗೆ ರೈಲು ಏರಿರುವ ಧೋನಿ ಬೆಳಗಿನ ಜಾವ 6.50ಕ್ಕೆ ಹೌರಾ ರೈಲ್ವೆ ನಿಲ್ದಾಣವನ್ನು ತಲುಪಿದ್ದಾರೆ.
ತಮ್ಮ ಪ್ರಯಾಣದ ಅವಧಿಯಲ್ಲಿ ಧೋನಿ ಅವರು ಹಿಂದೆ ಟಿಕೆಟ್ ತಪಾಸಣಾ ಆಗಿ ದುಡಿಯುತ್ತಿದ್ದ ಖರ್ಗಾಪುರಾ ಫ್ಲ್ಯಾಟ್ಫಾರ್ಮ್ ದಾಟಿಕೊಂಡು ಮುಂದಕ್ಕೆ ಸಾಗಿದ್ದರು. ಅಲ್ಲದೆ ತಮ್ಮ ಈ ಸ್ಮರಣೀಯ ಕ್ಷಣವನ್ನು ಸೆಲ್ಪಿ ತೆಗೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಾವು ಮಾತನಾಡುತ್ತಿರುವುದು ಅದೇ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಏಕದಿನ ಹಾಗೂ ಟ್ವೆಂಟಿ-20 ನಾಯಕತ್ವ ಸ್ಥಾನದಿಂದಲೂ ಕೆಳಗಿಳಿದಿರುವ ಧೋನಿ ಸುದೀರ್ಘವಾದ 13 ವರ್ಷಗಳ ಬಳಿಕವೀಗ ಮತ್ತೆ ರೈಲಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ.
@msdhoni pic.twitter.com/kXskI2U562 — Captain MS Dhoni (@MSDsuperfan) February 22, 2017 ಕೋಲ್ಕತ್ತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಲಿರುವ ಧೋನಿ ದಕ್ಷಿಣ ಪೂರ್ವ ರೈಲಿನಲ್ಲಿ ಸಂಚರಿಸಿದ್ದಾರೆ. ಇದು ಧೋನಿ ಸಹಜ ಗುಣವನ್ನು ತೋರಿಸುತ್ತಿದೆ. ಕೋಟ್ಯಧಿಪತಿಯಾಗಿರುವ ಧೋನಿಗೆ ರಾಂಚಿಯಿಂದ ನೇರವಾಗಿ ಕೋಲ್ಕತ್ತಾ ವಿಮಾನ ಏರಬಹುತ್ತಿತ್ತು. ಆದರೆ ತಮ್ಮ ತಂಡದ ಸಹ ಆಟಗಾರರ ಜೊತೆಗೆ ಪ್ರಯಾಣಿಸುವ ಮೂಲಕ ಹಿರಿಮೆ ಮೆರೆದಿದ್ದಾರೆ.
18616 ಕ್ರಿಯಾ ಯೋಗ ಎಕ್ಸ್ಪ್ರೆಸ್ನ ಎರಡನೇ ದರ್ಜೆಯ ಎಸಿ ಕೋಚ್ನಲ್ಲಿ ಧೋನಿ ಪ್ರಯಾಣಿಸಿದ್ದಾರೆ. ರಾತ್ರಿ 9.40ರ ಹೊತ್ತಿಗೆ ರೈಲು ಏರಿರುವ ಧೋನಿ ಬೆಳಗಿನ ಜಾವ 6.50ಕ್ಕೆ ಹೌರಾ ರೈಲ್ವೆ ನಿಲ್ದಾಣವನ್ನು ತಲುಪಿದ್ದಾರೆ.
ತಮ್ಮ ಪ್ರಯಾಣದ ಅವಧಿಯಲ್ಲಿ ಧೋನಿ ಅವರು ಹಿಂದೆ ಟಿಕೆಟ್ ತಪಾಸಣಾ ಆಗಿ ದುಡಿಯುತ್ತಿದ್ದ ಖರ್ಗಾಪುರಾ ಫ್ಲ್ಯಾಟ್ಫಾರ್ಮ್ ದಾಟಿಕೊಂಡು ಮುಂದಕ್ಕೆ ಸಾಗಿದ್ದರು. ಅಲ್ಲದೆ ತಮ್ಮ ಈ ಸ್ಮರಣೀಯ ಕ್ಷಣವನ್ನು ಸೆಲ್ಪಿ ತೆಗೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.