ಆ್ಯಪ್ನಗರ

ಧೋನಿ ಟಿಪ್ಸ್‌ನಿಂದ ಒತ್ತಡದಲ್ಲಿ ಆಡಲು ನೆರವು: ಪಾಂಡ್ಯ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪೂರ್ವಭಾವಿಯಾಗಿ ನಡೆದ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲೂ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಅಮೋಘ ನಿರ್ವಹಣೆ ನೀಡುವ ಮೂಲಕ ಗೆಲುವು ದಾಖಲಿಸಿದೆ

ಟೈಮ್ಸ್ ಆಫ್ ಇಂಡಿಯಾ 31 May 2017, 3:16 pm
ಹೊಸದಿಲ್ಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪೂರ್ವಭಾವಿಯಾಗಿ ನಡೆದ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲೂ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಅಮೋಘ ನಿರ್ವಹಣೆ ನೀಡುವ ಮೂಲಕ ಗೆಲುವು ದಾಖಲಿಸಿದೆ.
Vijaya Karnataka Web dhonis tips help me in finishing innings hardik pandya
ಧೋನಿ ಟಿಪ್ಸ್‌ನಿಂದ ಒತ್ತಡದಲ್ಲಿ ಆಡಲು ನೆರವು: ಪಾಂಡ್ಯ


ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ತನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಶ್ರೇಷ್ಠ ಸಿದ್ಧತೆಯನ್ನೇ ನಡೆಸಿದೆ. ಈ ನಡುವೆ ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ಕೊನೆಯ ಅಭ್ಯಾಸ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 54 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದ್ದರು. ಈ ಮೂಲಕ ಭಾರತ ತಂಡ 324 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.

ಈ ಬಗ್ಗೆ ಅಭಿಪ್ರಾಯಪಟ್ಟಿಯಿರುವ ಪಾಂಡ್ಯ, ಇನ್ನಿಂಗ್ಸ್ ಕೊನೆಗೊಳಿಸಲು ಮಹೇಂದ್ರ ಸಿಂಗ್ ಧೋನಿ ನೀಡಿರುವ ಅಮೂಲ್ಯ ಸಲಹೆ ನೆರವಾಯಿತು ಎಂದಿದ್ದಾರೆ.

ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತಮ ಮನೋಬಲದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಕಳೆದ ಇಂಗ್ಲೆಂಡ್ ಸರಣಿ ವೇಳೆ ಧೋನಿ ಅಮೂಲ್ಯ ಟಿಪ್ಸ್ ತಮಗೆ ನೀಡಿದ್ದರು ಎಂದು ಪಾಂಡ್ಯ ವಿವರಿಸುತ್ತಾರೆ.

ನನಗೀಗಲೂ ಆ ಘಟನೆಯ ಬಗ್ಗೆ ಜ್ಞಾಪಕವಿದ್ದು, ಪಂದ್ಯವನ್ನು ಹೇಗೆ ಕೊನೆಗೊಳಿಸಬೇಕೆಂದು ನಾನು ಧೋನಿಯಲ್ಲಿ ಕೇಳಿದ್ದೆ. ಆಗ ಅವರು ಸ್ಕೋರ್ ಬೋರ್ಡ್ ನೋಡುವಂತೆ ತಿಳಿಸಿದರು. ಬಳಿಕ ಪರಿಸ್ಥಿತಿಗೆ ತಕ್ಕಂತೆ ಆಟವಾಡುವಂತೆ ಸೂಚಿಸಿದರು. ಈ ರೀತಿಯಾಗಿ ನಮ್ಮ ಮೇಲೆ ಅನಗತ್ಯ ಒತ್ತಡವನ್ನು ಹೇರುವ ಅಗತ್ಯವಿಲ್ಲ. ಯಾಕೆಂದರೆ ತಂಡವನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿರುತ್ತದೆ. ಹಾಗಾಗಿ ನೀವೇನು ವಿಶೇಷವಾದ ಸಾಧನೆಯೇನು ಮಾಡಬೇಕಿಲ್ಲ. ತಂಡಕ್ಕಾಗಿ ಏನು ಮಾಡಬೇಕೆಂಬುದರ ಬಗ್ಗೆ ಗಮನ ಕೇಂದ್ರಿಕರಿಸಿದರೆ ಸಾಕು. ಅದರಂತೆ ಪರಿಸ್ಥಿತಿಗೆ ತಕ್ಕಂತೆ ಆಟವಾಡಬೇಕು. ಇದು ನನಗೆ ನೀಡಿರುವ ಬಹು ದೊಡ್ಡ ಸಲಹೆಯಾಗಿದ್ದು, ಇದರಿಂದ ತುಂಬಾನೇ ಉಪಕಾರವಾಗಿದೆ ಎಂದು ಪಾಂಡ್ಯ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌