ಮೆಲ್ಬೋರ್ನ್: ಇತ್ತೀಚೆಗಷ್ಟೇ ಹಿಂದೂ ಸಂಪ್ರದಾಯ ಬದ್ಧವಾಗಿ ಭಾರತೀಯ ಸಂಜಾತ ಆಸ್ಟ್ರೇಲಿಯಾದ ಯುವತಿ ವಿನಿ ರಾಮನ್ ಅವರೊಟ್ಟಿಗೆ ನಿಶ್ಚತಾರ್ಥ ಮಾಡಿಕೊಂಡ ಆಸೀಸ್ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಮಾನಸಿಕ ಅಸ್ವಸ್ಥತೆ ಕುರಿತಾಗಿ ಮೌನ ಮುರಿದಿದ್ದಾರೆ.
ಕಳೆದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ತಾವು ಮಾನಸಿಕವಾಗಿ ಸಾಕಷ್ಟು ಬಳಲಿದ್ದಾಗಿ ಹೇಳಿಕೊಂಡಿದ್ದಾರೆ. ಶಾನ್ ಮಾರ್ಷ್ ಗಾಯಗೊಂಡ ಬಳಿಕ ಮಾನಸಿಕವಾಗಿ ಸಾಕಷ್ಟು ಗೊಂದಲ ಎದುರಿಸಿದ್ದಾಗಿ ಮ್ಯಾಕ್ಸ್ವೆಲ್ ವಿವರಿಸಿದ್ದಾರೆ.
ವಿಶ್ವಕಪ್ನಲ್ಲಿ ನೀಡಿದ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಬೀಳುವ ಆತಂಕಕ್ಕೊಳಗಾಗಿ ಮಾಸಿಕ ಖಿನ್ನತೆ ಅನುಭವಿಸಿದ್ದ ಬಗ್ಗೆ ಮ್ಯಾಕ್ಸ್ವೆಲ್ ಮಾತನಾಡಿದ್ದು, ಎಲ್ಲಕ್ಕಿಂತಲೂ ಮಿಗಿಲಾಗಿ ಅಭ್ಯಾಸದಲ್ಲಿ ತಮ್ಮ ಕೈ ಮೂಳೆಯನ್ನೂ ಮುರಿದುಕೊಂಡದ್ದು ಆತಂಕ ಹೆಚ್ಚಾಗುವಂತೆ ಮಾಡಿತ್ತು ಎಂದಿದ್ದಾರೆ.
ಉಚಿತವಾಗಿ 50 ಲಕ್ಷ ರೂ. ಬೆಲೆಯ ಅಕ್ಕಿ ವಿತರಣೆಗೆ ಮುಂದಾದ ಗಂಗೂಲಿ
"ಶಾನ್ ಬಹಳ ನೋವಿನಲ್ಲಿದ್ದಾರೆ ಎಂದು ನನಗೆ ಅರ್ಥವಾಯಿತು. (ಮಾರ್ಷ್ ಕೈ ಮೂಳೆಯೂ ಮುರಿದಿತ್ತು). ಅವರ ಜೊತೆಯಲ್ಲಿ ನಾನು ಕೂಡ ಆಸ್ಪತ್ರೆಗೆ ತೆರಳಿದ್ದೆ. ಏಕೆಂದರೆ ಅಭ್ಯಾಸದ ವೇಳೆ ನನ್ನ ಕೈ ಕೂಡ ಮೂಳೆ ಮುರಿತ್ತಕ್ಕೆ ಒಳಗಾಗಿತ್ತು. ಸಮಸ್ಯೆಯ ಗಂಭೀರತೆ ತಿಳಿದು ನನಗೂ ಆತಂಕವಾಗಿತ್ತು. ವಿಶ್ವಕಪ್ನಲ್ಲಿ ಉತ್ತಮ ಆಟವಾಡಲು ಸಾಧ್ಯವಾಗಲಿಲ್ಲ ಎಂದು ನನ್ನ ಮೇಲೆ ನನಗೇ ಕೋಪ ಹೆಚ್ಚಾಗಿತ್ತು. ಬೇರೆಯವರ ಮೇಲೂ ವಿನಾ ಕಾರಣ ಈ ಕೋಪ ಹೊರಹಾಕುತ್ತಿದ್ದೆ. ಅಂತಿಮವಾಗಿ ನನಗೆ ಮಾನಸಿಕವಾಗಿ ಚೇತರಿಸಲು ವಿರಾಮ ಬೇಕೆಂದೆನಿಸಿತು," ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಪಿಎಸ್ಎಲ್ಗಿಂತ ಐಪಿಎಲ್ ಬೆಸ್ಟ್ ಎಂದ ಡೀನ್ ಜೋನ್ಸ್
ವಿಶ್ವಕಪ್ ಬಳಿಕ ಶ್ರೀಲಂಕಾ ವಿರುದ್ಧದ ಸರಣಿ ಮಧ್ಯದಲ್ಲೇ ಮ್ಯಾಕ್ಸ್ವೆಲ್ ಅನಿರ್ಧಿಷ್ಟಾವಧಿಯ ಕಾಲ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಬಿಗ್ ಬ್ಯಾಷ್ ಲೀಗ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದರು. ಇದೀಗ ಮತ್ತೆ ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದಿದ್ದು, ಬಿಡುವಿನ ಸಮಯದಲ್ಲಿ ತಮ್ಮ ಪ್ರೇಯಸಿಯೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
"ನನ್ನ ವಿಶ್ರಾಂತಿ ಬಗ್ಗೆ ತಂಡಕ್ಕೆ ತಿಳಿಸಬೇಕೆಂದಿದ್ದೆ. ಯಾರೊಬ್ಬರಿಗೂ ನನ್ನ ಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಫಿಂಚ್(ನಾಯಕ)ಗೂ ನಾನು ವಿಷಯ ತಿಳಿಸಿರಲಿಲ್ಲ. ಬಳಿಕ ನೇರವಾಗಿ ಫಿಂಚ್ ಬಳಿ ಹೋಗಿ ಕೆಲ ಕಾಲ ಆಟದಿಂದ ದೂರ ಉಳಿಯಬೇಕೆಂದಿದ್ದೇನೆ ಎಂದು ಹೇಳಿದೆ. ಅದಕ್ಕವರು, ಕಠಿಣ ಮತ್ತು ಉತ್ತಮ ನಿರ್ಧಾರ ಎಂದು ಹೇಳಿದರು. ಬಳಿಕ ಎಲ್ಲರೂ ನಿರ್ಗಮಿಸಿದ ಮೇಲೆ ನನಗೆ ಕಣ್ಣೀರು ತಡೆಯಲಾಗದೆ ಬಹಳ ಸಮಯ ಕಣ್ಣೀರಿಟ್ಟಿದ್ದೆ. ವಿಶ್ವಕಪ್ ಬಳಿಕ ನಾನು ಭಾವುಕನಾದದ್ದು ಅದೇ ಮೊದಲು," ಎಂದು ಮ್ಯಾಕ್ಸ್ವೆಲ್ ವಿವರಿಸಿದ್ದಾರೆ.
ಕಳೆದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ತಾವು ಮಾನಸಿಕವಾಗಿ ಸಾಕಷ್ಟು ಬಳಲಿದ್ದಾಗಿ ಹೇಳಿಕೊಂಡಿದ್ದಾರೆ. ಶಾನ್ ಮಾರ್ಷ್ ಗಾಯಗೊಂಡ ಬಳಿಕ ಮಾನಸಿಕವಾಗಿ ಸಾಕಷ್ಟು ಗೊಂದಲ ಎದುರಿಸಿದ್ದಾಗಿ ಮ್ಯಾಕ್ಸ್ವೆಲ್ ವಿವರಿಸಿದ್ದಾರೆ.
ವಿಶ್ವಕಪ್ನಲ್ಲಿ ನೀಡಿದ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಬೀಳುವ ಆತಂಕಕ್ಕೊಳಗಾಗಿ ಮಾಸಿಕ ಖಿನ್ನತೆ ಅನುಭವಿಸಿದ್ದ ಬಗ್ಗೆ ಮ್ಯಾಕ್ಸ್ವೆಲ್ ಮಾತನಾಡಿದ್ದು, ಎಲ್ಲಕ್ಕಿಂತಲೂ ಮಿಗಿಲಾಗಿ ಅಭ್ಯಾಸದಲ್ಲಿ ತಮ್ಮ ಕೈ ಮೂಳೆಯನ್ನೂ ಮುರಿದುಕೊಂಡದ್ದು ಆತಂಕ ಹೆಚ್ಚಾಗುವಂತೆ ಮಾಡಿತ್ತು ಎಂದಿದ್ದಾರೆ.
ಉಚಿತವಾಗಿ 50 ಲಕ್ಷ ರೂ. ಬೆಲೆಯ ಅಕ್ಕಿ ವಿತರಣೆಗೆ ಮುಂದಾದ ಗಂಗೂಲಿ
"ಶಾನ್ ಬಹಳ ನೋವಿನಲ್ಲಿದ್ದಾರೆ ಎಂದು ನನಗೆ ಅರ್ಥವಾಯಿತು. (ಮಾರ್ಷ್ ಕೈ ಮೂಳೆಯೂ ಮುರಿದಿತ್ತು). ಅವರ ಜೊತೆಯಲ್ಲಿ ನಾನು ಕೂಡ ಆಸ್ಪತ್ರೆಗೆ ತೆರಳಿದ್ದೆ. ಏಕೆಂದರೆ ಅಭ್ಯಾಸದ ವೇಳೆ ನನ್ನ ಕೈ ಕೂಡ ಮೂಳೆ ಮುರಿತ್ತಕ್ಕೆ ಒಳಗಾಗಿತ್ತು. ಸಮಸ್ಯೆಯ ಗಂಭೀರತೆ ತಿಳಿದು ನನಗೂ ಆತಂಕವಾಗಿತ್ತು. ವಿಶ್ವಕಪ್ನಲ್ಲಿ ಉತ್ತಮ ಆಟವಾಡಲು ಸಾಧ್ಯವಾಗಲಿಲ್ಲ ಎಂದು ನನ್ನ ಮೇಲೆ ನನಗೇ ಕೋಪ ಹೆಚ್ಚಾಗಿತ್ತು. ಬೇರೆಯವರ ಮೇಲೂ ವಿನಾ ಕಾರಣ ಈ ಕೋಪ ಹೊರಹಾಕುತ್ತಿದ್ದೆ. ಅಂತಿಮವಾಗಿ ನನಗೆ ಮಾನಸಿಕವಾಗಿ ಚೇತರಿಸಲು ವಿರಾಮ ಬೇಕೆಂದೆನಿಸಿತು," ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಪಿಎಸ್ಎಲ್ಗಿಂತ ಐಪಿಎಲ್ ಬೆಸ್ಟ್ ಎಂದ ಡೀನ್ ಜೋನ್ಸ್
ವಿಶ್ವಕಪ್ ಬಳಿಕ ಶ್ರೀಲಂಕಾ ವಿರುದ್ಧದ ಸರಣಿ ಮಧ್ಯದಲ್ಲೇ ಮ್ಯಾಕ್ಸ್ವೆಲ್ ಅನಿರ್ಧಿಷ್ಟಾವಧಿಯ ಕಾಲ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಬಿಗ್ ಬ್ಯಾಷ್ ಲೀಗ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದರು. ಇದೀಗ ಮತ್ತೆ ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದಿದ್ದು, ಬಿಡುವಿನ ಸಮಯದಲ್ಲಿ ತಮ್ಮ ಪ್ರೇಯಸಿಯೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
"ನನ್ನ ವಿಶ್ರಾಂತಿ ಬಗ್ಗೆ ತಂಡಕ್ಕೆ ತಿಳಿಸಬೇಕೆಂದಿದ್ದೆ. ಯಾರೊಬ್ಬರಿಗೂ ನನ್ನ ಸ್ಥಿತಿಯ ಬಗ್ಗೆ ಅರಿವಿರಲಿಲ್ಲ. ಫಿಂಚ್(ನಾಯಕ)ಗೂ ನಾನು ವಿಷಯ ತಿಳಿಸಿರಲಿಲ್ಲ. ಬಳಿಕ ನೇರವಾಗಿ ಫಿಂಚ್ ಬಳಿ ಹೋಗಿ ಕೆಲ ಕಾಲ ಆಟದಿಂದ ದೂರ ಉಳಿಯಬೇಕೆಂದಿದ್ದೇನೆ ಎಂದು ಹೇಳಿದೆ. ಅದಕ್ಕವರು, ಕಠಿಣ ಮತ್ತು ಉತ್ತಮ ನಿರ್ಧಾರ ಎಂದು ಹೇಳಿದರು. ಬಳಿಕ ಎಲ್ಲರೂ ನಿರ್ಗಮಿಸಿದ ಮೇಲೆ ನನಗೆ ಕಣ್ಣೀರು ತಡೆಯಲಾಗದೆ ಬಹಳ ಸಮಯ ಕಣ್ಣೀರಿಟ್ಟಿದ್ದೆ. ವಿಶ್ವಕಪ್ ಬಳಿಕ ನಾನು ಭಾವುಕನಾದದ್ದು ಅದೇ ಮೊದಲು," ಎಂದು ಮ್ಯಾಕ್ಸ್ವೆಲ್ ವಿವರಿಸಿದ್ದಾರೆ.