ಆ್ಯಪ್ನಗರ

ದಿಮುತ್‌ ಕರುಣಾರತ್ನೆಗೆ ಗಂಭೀರ ಗಾಯ

ಆಸ್ಪ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್‌ನಲ್ಲಿ ಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದಿಮುತ್‌ ಕರುಣಾರತ್ನೆಯ ಕುತ್ತಿಗೆಗೆ ಚೆಂಡು ಬಡಿದು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

Agencies 3 Feb 2019, 5:00 am
ಕ್ಯಾನ್‌ಬೆರಾ : ಆಸ್ಪ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್‌ನಲ್ಲಿ ಲಂಕಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದಿಮುತ್‌ ಕರುಣಾರತ್ನೆಯ ಕುತ್ತಿಗೆಗೆ ಚೆಂಡು ಬಡಿದು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
Vijaya Karnataka Web dimuth karunaratne injured
ದಿಮುತ್‌ ಕರುಣಾರತ್ನೆಗೆ ಗಂಭೀರ ಗಾಯ


ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌ ಎಸೆತವೊಂದು ಕರುಣಾರತ್ನೆ ಅವರ ಹೆಲ್ಮೆಟ್‌ ಹಿಂಬದಿಗೆ ರಭಸವಾಗಿ ಬಡಿಯಿತು. ಅವರು ಕುತ್ತಿಗೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದುಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶನಿವಾರ 4 ವಿಕೆಟ್‌ಗಳಿಗೆ 384 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರಿಸಿದ ಆಸೀಸ್‌, 5 ವಿಕೆಟ್‌ ನಷ್ಟಕ್ಕೆ 534 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಶ್ರೀಲಂಕಾ ತಂಡದ ಕರುಣಾರತ್ನೆ ಮತ್ತು ಲಾಹಿರು ತಿರಿಮನ್ನೆ ಆತಿಥೇಯ ಬೌಲರ್‌ಗಳಿಗೆ ಎದೆಯೊಡ್ಡಿ ನಿಂತು ಮೊದಲ ವಿಕೆಟಿಗೆ 82 ರನ್‌ ಕಲೆಹಾಕಿದರು. ಅಷ್ಟರಲ್ಲಿ ಈ ಘಟನೆ ಸಂಭವಿಸಿತು. ದಿನದಾಟದಂತ್ಯಕ್ಕೆ ದ್ವೀಪರಾಷ್ಟ್ರ ತಂಡ 3 ವಿಕೆಟ್‌ ಕಳೆದುಕೊಂಡು 123 ರನ್‌ ಗಳಿಸಿದೆ. ಕುಸಾಲ್‌ ಪೆರೆರಾ (11*) ಮತ್ತು ಧನಂಜಯ ಡಿ' ಸಿಲ್ವಾ (1*) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಆಸ್ಪ್ರೇಲಿಯಾ: ಮೊದಲ ಇನಿಂಗ್ಸ್‌ 534/5 ಡಿಕ್ಲೇರ್ಡ್‌ (ಜೋ ಬರ್ನ್ಸ್‌ 180, ಟ್ರಾವಿಸ್‌ ಹೆಡ್‌ 161, ಕರ್ಟಿಸ್‌ ಪ್ಯಾಟರ್ಸನ್‌ 114*; ವಿಶ್ವ ಫರ್ನಾಂಡೊ 126ಕ್ಕೆ 3). ಶ್ರೀಲಂಕಾ: ಮೊದಲ ಇನಿಂಗ್ಸ್‌ 123/3 (ಕರುಣಾರತ್ನೆ 46 ರಿಟೈರ್ಡ್‌ ಹರ್ಟ್‌, ತಿರಿಮನ್ನೆ 41; ಪ್ಯಾಟ್‌ ಕಮಿನ್ಸ್‌ 23ಕ್ಕೆ 1).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌