ಚೆನ್ನೈ: ಟೀಮ್ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಯಾರು ಸೂಕ್ತ ಆಟಗಾರ ಎಂಬುದು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ ಕೆಳ ಕ್ರಮಾಂಕದಲ್ಲಿ ಆಡಲು ಆರಂಭಿಸಿದ ಬಳಿಕ 4ನೇ ಕ್ರಮಾಂಕದಲ್ಲಿ ಅನೇಕ ಬ್ಯಾಟ್ಸ್ಮನ್ಗಳನ್ನು ಪರೀಕ್ಷೆ ನಡೆಸಿದರೂ ಯಾರಿಗೂ ಸ್ಥಿರವಾದ ಸ್ಥಾನ ದೊರಕಲಿಲ್ಲ.
ಯುವರಾಜ್ ಸಿಂಗ್ ಬಳಿಕ ಕೇದರ್ ಜಾಧವ್ ತದಾ ಬಳಿಕ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಬಳಿಕವೀಗ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿತ್ತು.
ಈ ಪೈಕಿ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಎರಡು ದೊಡ್ಡ ಇನ್ನಿಂಗ್ಸ್ ಕಟ್ಟಿರುವ ಪಾಂಡ್ಯ ಗಮನ ಸೆಳೆದಿದ್ದರು.
ಇದೀಗ ವಿರಾಟ್ ಕೋಹ್ಲಿ ನಂಬಿಕೆ ಗಿಟ್ಟಿಸಿಕೊಳ್ಳುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾಗಿರುವ ತಮಿಳುನಾಡು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ನಾಲ್ಕನೇ ಸ್ಥಾನದಲ್ಲಿ ಆಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಅವರ ಸ್ಥಾನಕ್ಕೆ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಂ.4 ಸ್ಥಾನ ನನ್ನ ಪಾಲಿಗೆ ಶ್ರೇಷ್ಠ ಸ್ಥಾನವಾಗಿರಲಿದೆ. ಅವಕಾಶ ಸಿಕ್ಕರೆ ಉತ್ತಮ ನಿರ್ವಹಣೆ ನೀಡುವ ಭರವಸೆ ನನಗಿದೆ ಎಂದು 32ರ ಹರೆಯದ ಕಾರ್ತಿಕ್ ತಿಳಿಸಿದರು.
ತಂಡದಿಂದ ಕೈಬಿಟ್ಟಾಗ ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ. ನನಗೀಗ ಅವಕಾಶ ದೊರಕಿದೆ ಎಂದು ಕಾರ್ತಿಕ್ ವಿವರಿಸಿದರು.
ಅಂದ ಹಾಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತಲಾ ಮೂರು ಏಕದಿನ ಹಾಗೂ ಟ್ವೆಂಟಿ-20 ಸರಣಿ ನಡೆಯಲಿದೆ.
ಮಹೇಂದ್ರ ಸಿಂಗ್ ಧೋನಿ ಕೆಳ ಕ್ರಮಾಂಕದಲ್ಲಿ ಆಡಲು ಆರಂಭಿಸಿದ ಬಳಿಕ 4ನೇ ಕ್ರಮಾಂಕದಲ್ಲಿ ಅನೇಕ ಬ್ಯಾಟ್ಸ್ಮನ್ಗಳನ್ನು ಪರೀಕ್ಷೆ ನಡೆಸಿದರೂ ಯಾರಿಗೂ ಸ್ಥಿರವಾದ ಸ್ಥಾನ ದೊರಕಲಿಲ್ಲ.
ಯುವರಾಜ್ ಸಿಂಗ್ ಬಳಿಕ ಕೇದರ್ ಜಾಧವ್ ತದಾ ಬಳಿಕ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಬಳಿಕವೀಗ ಹಾರ್ದಿಕ್ ಪಾಂಡ್ಯಗೆ ಅವಕಾಶ ನೀಡಲಾಗಿತ್ತು.
ಈ ಪೈಕಿ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಎರಡು ದೊಡ್ಡ ಇನ್ನಿಂಗ್ಸ್ ಕಟ್ಟಿರುವ ಪಾಂಡ್ಯ ಗಮನ ಸೆಳೆದಿದ್ದರು.
ಇದೀಗ ವಿರಾಟ್ ಕೋಹ್ಲಿ ನಂಬಿಕೆ ಗಿಟ್ಟಿಸಿಕೊಳ್ಳುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾಗಿರುವ ತಮಿಳುನಾಡು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ನಾಲ್ಕನೇ ಸ್ಥಾನದಲ್ಲಿ ಆಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಅವರ ಸ್ಥಾನಕ್ಕೆ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಂ.4 ಸ್ಥಾನ ನನ್ನ ಪಾಲಿಗೆ ಶ್ರೇಷ್ಠ ಸ್ಥಾನವಾಗಿರಲಿದೆ. ಅವಕಾಶ ಸಿಕ್ಕರೆ ಉತ್ತಮ ನಿರ್ವಹಣೆ ನೀಡುವ ಭರವಸೆ ನನಗಿದೆ ಎಂದು 32ರ ಹರೆಯದ ಕಾರ್ತಿಕ್ ತಿಳಿಸಿದರು.
ತಂಡದಿಂದ ಕೈಬಿಟ್ಟಾಗ ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೆ. ನನಗೀಗ ಅವಕಾಶ ದೊರಕಿದೆ ಎಂದು ಕಾರ್ತಿಕ್ ವಿವರಿಸಿದರು.
ಅಂದ ಹಾಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ತಲಾ ಮೂರು ಏಕದಿನ ಹಾಗೂ ಟ್ವೆಂಟಿ-20 ಸರಣಿ ನಡೆಯಲಿದೆ.