ಆ್ಯಪ್ನಗರ

ಸಂತಸದ ಜತೆಗೆ ಭಯವೂ ಇದೆ: ಕಾರ್ತಿಕ್‌

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಕಾಯಂ ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಬದಲು ಭಾರತ ತಂಡಕ್ಕೆ ಆಯ್ಕೆಯಾಗಿರುವ ದಿನೇಶ್‌ ಕಾರ್ತಿಕ್‌ ಅವರನ್ನೀಗ ಎರಡೆರಡು ಭಾವಗಳು ಆವರಿಸಿಕೊಂಡಿವೆ.

Vijaya Karnataka 29 Jul 2018, 11:36 am
ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಕಾಯಂ ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಬದಲು ಭಾರತ ತಂಡಕ್ಕೆ ಆಯ್ಕೆಯಾಗಿರುವ ದಿನೇಶ್‌ ಕಾರ್ತಿಕ್‌ ಅವರನ್ನೀಗ ಎರಡೆರಡು ಭಾವಗಳು ಆವರಿಸಿಕೊಂಡಿವೆ.
Vijaya Karnataka Web dinesh-karthik-04


10 ವರ್ಷಗಳ ಹಿಂದೆ ಇಂಗ್ಲೆಂಡ್‌ ನೆಲದಲ್ಲಿ ಆಂಗ್ಲರ ವಿರುದ್ಧ ಅಬ್ಬರಿಸಿದ್ದ ದಿನೇಶ್‌ ಈಗ ಅದೇ ಎದುರಾಳಿಗಳ ವಿರುದ್ಧ ಮತ್ತೊಮ್ಮೆ 'ವಿಕೆಟ್‌ ಕಾಯುವ' ಕೆಲಸಕ್ಕೆ ನಿಯುಕ್ತಿಗೊಂಡಿದ್ದಾರೆ. ಅನುಭವಿ ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ ಪಾಲಿಗೆ ಅದೊಂದು ವಿಶೇಷ ಅನುಭೂತಿ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಅವರು ಆನಂದತುಂದಿಲರಾಗಿದ್ದಾರೆ.

ಅದೇ ವೇಳೆ, ಅವರನ್ನು ತಳಮಳ ಕೂಡ ಆವರಿಸಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತದ ಉತ್ತಮ ವಿಕೆಟ್‌ಕೀಪರ್‌ ಆಗಿ ಹೆಸರು ಗಳಿಸಿರುವ ವೃದ್ಧಿಮಾನ್‌ ಸಹಾ ಜಾಗವನ್ನು ಅವರು ಸಮರ್ಥವಾಗಿ ತುಂಬಬೇಕಿದೆ. ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ಕಾರ್ತಿಕ್‌ಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಸಹಾ ಭುಜದ ನೋವಿಗೊಳಗಾಗಿರುವುದರಿಂದ ಕಳೆದ ಜೂನ್‌ನಲ್ಲಿ ಅಫಘಾನಿಸ್ತಾನ ವಿರುದ್ಧದ ಸರಣಿಗೆ ಕಾರ್ತಿಕ್‌ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

2007ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ 3 ಪಂದ್ಯಗಳ ಟೆಸ್ಟ್‌ ಸರಣಿ ವೇಳೆ, ಕಾರ್ತಿಕ್‌ ಲಾರ್ಡ್ಸ್ನಲ್ಲಿ 60, ಟ್ರೆಂಟ್‌ಬ್ರಿಜ್‌ನಲ್ಲಿ 77, ಓವಲ್‌ನಲ್ಲಿ 91 ರನ್‌ ದಾಖಲಿಸುವ ಮೂಲಕ ಭಾರತದ 1-0 ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಆಡಿದ್ದವರ ಪೈಕಿ ಈಗ ತಂಡದಲ್ಲಿ ಉಳಿದುಕೊಂಡಿರುವುದು ದಿನೇಶ್‌ ಮಾತ್ರ. ದಿನೇಶ್‌ ಪ್ರಕಾರ, ಇಂಗ್ಲೆಂಡ್‌ ತಂಡವನ್ನು ಇಂಗ್ಲೆಂಡ್‌ನಲ್ಲಿ ಎದುರಿಸುವುದು ಬಲು ಕಷ್ಟ. ಹಾಗಾಗಿ ಅವರೀಗ ದ್ವಂದ್ವ ಭಾವದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌