ಆ್ಯಪ್ನಗರ

ಶ್ರೀಶಾಂತ್‌ ಆರೋಪಕ್ಕೆ ಉತ್ತರಿಸುವುದು ಕೂಡ ಮೂರ್ಖತನ ಎಂದ ದಿನೇಶ್‌ ಕಾರ್ತಿಕ್‌

ಸ್ಪಾಟ್‌ಫಿಕ್ಸಿಂಗ್‌ನಲ್ಲಿ ಸಿಲುಕಿ ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವೇಗದ ಬೌಲರ್‌ ಶ್ರೀಶಾಂತ್‌ ಇದೀಗ ತಾವು ಟೀಮ್‌ ಇಂಡಿಯಾದಿಂದ ಹೊರ ಬೀಳಲು ವಿಕೆಟ್‌ಕೀಪರ್‌ ದಿನೇಶ್‌ ಕಾರ್ತಿಕ್‌ ಕಾರಣ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

Vijaya Karnataka Web 22 Oct 2019, 9:25 pm
ಹೊಸದಿಲ್ಲಿ: ಟೀಮ್‌ ಇಂಡಿಯಾದಿಂದ ಹೊರಬೀಳಲು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಕಾರಣ ಎಂದು ಕೇರಳ ಎಕ್ಸ್‌ಪ್ರೆಸ್‌ ಎಸ್‌ ಶ್ರೀಶಾಂತ್‌ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ದಿನೇಶ್‌ ಕಾರ್ತಿಕ್‌, ಈ ರೀತಿಯ ಆರೋಪಗಳಿಗೆ ಉತ್ತರಿಸುವುದು ಕೂಡ ಮೂರ್ಖತನ ಎಂದು ತಿರುಗೇಟು ನೀಡಿದ್ದಾರೆ.
Vijaya Karnataka Web Dinesh Karthik on sreeshanth 2019


ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 2013ರಲ್ಲಿ ನಡೆದ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಹಿನ್ನೆಲೆಯಲ್ಲಿ ಶಾಂತಕುಮಾರನ್‌ ಶ್ರೀಶಾಂತ್‌ ವಿರುದ್ಧ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಐಪಿಎಲ್‌ ಬೆಟ್ಟಿಂಗ್‌ ಕಳಂಕವು ಐಪಿಎಲ್‌ ಟೂರ್ನಿಗೆ ಇನ್ನಿಲ್ಲದ ಕಳಂಕ ತಂದೊಡ್ಡಿದ್ದ ಹಿನ್ನೆಲಯಲ್ಲಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ವೇಗಿ ಶ್ರೀಶಾಂತ್‌ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿತ್ತು.

ಹಳ್ಳ ಹಿಡಿದಿರೋ ಹರಿಣ ಪಡೆಯ ಸುಧಾರಣೆಗೆ ಸಲಹೆ ನೀಡಿದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್‌ ವಾನ್‌!

ಕೆಲ ತಿಂಗಳ ಹಿಂದಷ್ಟೇ ತಮ್ಮ ವಿರುದ್ಧದ ಆಜೀವ ನಿಷೇಧ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಯಸಸ್ಸು ಕಂಡಿದ್ದ ಶ್ರೀಶಾಂತ್‌, 2020ರ ಸೆಪ್ಟೆಂಬರ್‌ ಬಳಿಕ ನಿಷೇಧದಿಂದ ಮುಕ್ತರಾಗಲಿದ್ದಾರೆ. ಇದೀಗ ಅಚ್ಚರಿಯ ಬೆಳವಣಿಗೆ ಎಂಬಂತೆ ಟೀಮ್‌ ಇಂಡಿಯಾದುಂದ ತಾವು ಹೊರ ಬೀಳಲು ದಿನೇಶ್‌ ಕಾರ್ತಿಕ್‌ ಕಾರಣ ಎಂಬ ಬಾಂಬ್‌ ಸ್ಪೋಟಿಸಿದ್ದಾರೆ.

"ಹೌದು.. ಶ್ರೀಶಾಂತ್‌ ಅವರ ಆರೋಪ ನನ್ನ ಕಿವಿಗೂ ಬಿದ್ದಿದೆ. ಅವರು ಟೀಮ್‌ ಇಂಡಿಯಾದಿಂದ ಹೊರ ಬೀಳಲು ನಾನು ಕಾರಣವಂತೆ. ಈ ರೋತಿಯ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದು ಕೂಡ ಮುರ್ಖತನ," ಎಂದು ಕಾರ್ತಿಕ್‌ ದಿ ಹಿಂದೂ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಟಿ20ಯಲ್ಲಿ ಟೀಮ್‌ ಇಂಡಿಯಾಗೆ ಎದುರಾಗುವ ಕಠಿಣ ಸವಾಲಿನ ಬಗ್ಗೆ ಎಚ್ಚರಿಸಿದ ವಿವಿಎಸ್‌ ಲಕ್ಷ್ಮಣ್‌

2013ರ ಐಪಿಎಲ್‌ ಪಂದ್ಯದ ವೇಳೆ ಸ್ಪಾಟ್‌ ಫಿಕ್ಸರ್‌ಗಳಿಗೆ ಸಿಗ್ನಲ್‌ ನೀಡಲು ಶ್ರೀಶಾಂತ್‌ ಉದ್ದೇಶಪೂರ್ವಕವಾಗಿ ಹ್ಯಾಂಡ್‌ ಟವಲ್‌ ಬಳಕೆ ಮಾಡಿದ್ದರು ಎಂದು ದಿಲ್ಲಿ ಪೊಲೀಸರು ಹಲವು ಸಾಕ್ಷಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಈ ಸಂಬಂದ್ಧ ಶ್ರೀಶಾಂತ್‌ ಒಳಗೊಂಡಂತೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಮೂವರು ಕ್ರಿಕೆಟಿಗರ ತಲೆದಂಡವಾಗಿತ್ತು.

ಬಳಿಕ ಬೆಟ್ಟಿಂಗ್‌ ಪ್ರಕರಣ ಕೂಡ ಬೆಳಕಿಗೆ ಬಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಎರಡು ವರ್ಷ ಕಾಲ ಅಮಾನತುಗೊಂಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌