ಆ್ಯಪ್ನಗರ

ಸಚಿನ್‌-ದ್ರಾವಿಡ್‌ ಎದುರು ವಿರಾಟ್‌-ರೋಹಿತ್‌ ಹೋಲಿಕೆ ಸರಿಯಲ್ಲ ಎಂದ ಪಾಕ್‌ನ ದಿಗ್ಗಜ!

ತಮ್ಮ ವೃತ್ತಿ ಬದುಕಿನ ದಿನಗಳನ್ನು ನೆನೆದಿರುವ ಪಾಕಿಸ್ತಾನದ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಯೂಸುಫ್‌ ಅಂದು ಭಾರತ ತಂಡದಲ್ಲಿ ಸ್ಟಾರ್‌ ಆಟಗಾರರ ದಂಡೇ ಇತ್ತು, ಈಗ ಪರಿಸ್ಥಿತಿ ವಿಭಿನ್ನವಾಗಿದೆ ಎಂದಿದ್ದಾರೆ.

Vijaya Karnataka Web 20 Apr 2020, 6:42 pm
ಕರಾಚಿ: ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್‌ ತಂಡ ಮತ್ತು ಕೋಚ್‌ ಮಿಸ್ಬಾ ಉಲ್‌ ಹಕ್‌ ವಿರುದ್ಧ ಟೀಕಾ ಪ್ರಹಾರ ನಡೆಸಿ ಸಾಕಷ್ಟು ಸುದ್ದಿಯಲ್ಲಿದ್ದ ಪಾಕ್‌ನ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಯೂಸುಫ್‌, ಇದೀಗ ಟೀಮ್‌ ಇಂಡಿಯಾ ಆಟಗಾರರ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Vijaya Karnataka Web Mohammad Yousuf pakistan 2020


ತಮ್ಮ ವೃತ್ತಿ ಬದುಕಿನ ದಿನಗಳಲ್ಲಿ ವಿಶ್ವ ಕ್ರಿಕೆಟ್‌ನ ಅಗ್ರಮಾನ್ಯ ತಂಡಗಳಾದ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡದಲ್ಲಿ ಶ್ರೇಷ್ಠ ಆಟಗಾರರ ದಂಡೇ ಇತ್ತು ಎಂದು ಹೇಳಿರುವ ಯೂಸುಫ್‌, ಇದೇ ವೇಳೆ ಭಾರತ ತಂಡದಲ್ಲಿ ರಾಹುಲ್‌ ದ್ರಾವಿಡ್, ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ಸೌರವ್‌ ಗಂಗೂಲಿ ಮತ್ತು ಯುವರಾಜ್‌ ಸಿಂಗ್‌ ಅವರಂತಹ ದಿಗ್ಗಜರು ಏಕಕಾಲದಲ್ಲಿ ಆಡುತ್ತಿದ್ದರು ಎಂದಿದ್ದಾರೆ.

ಈ ಸಂದರ್ಭಲ್ಲಿ ಭಾರತ ತಂಡದ ಹಾಲಿ ಚಾಂಪಿಯನ್‌ ಆಟಗಾರರಾದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಅವರನ್ನು ಟೀಮ್‌ ಇಂಡಿಯಾದ ಹಿಂದಿನ ದಿಗ್ಗಜರಿಗೆ ಹೋಲಿಕೆ ಮಾಡುವುದು ಕಿಂಚಿತ್ತೂ ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.

2019ರ ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟ್‌, ಪ್ಯಾಡ್ಸ್‌ ಹರಾಜಿಗಿಟ್ಟ ಕೆಎಲ್ ರಾಹುಲ್!

"ಹಿಂದೆಲ್ಲಾ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಕನಿಷ್ಠ 3-4 ವಿಶ್ವ ಶ್ರೇಷ್ಠ ಆಟಗಾರರು ಇರುತ್ತಿದ್ದರು. ಉದಾಹರಣೆಗೆ ಭಾರತ ತಂಡದಲ್ಲಿ ದ್ರಾವಿಡ್, ಸಚಿನ್, ಸೆಹ್ವಾಗ್, ಗಂಗೂಲಿ, ಲಕ್ಷ್ಮಣ್ ಮತ್ತು ಯುವರಾಜ್‌ ನಂತಹ ಸ್ಟಾರ್‌ಗಳು ಒಂದೇ ತಂಡದಲ್ಲಿ ಆಡುತ್ತಿದ್ದರು," ಎಂದಿದ್ದಾರೆ.

"ಆದರೆ ಸಧ್ಯದ ಭಾರತ ತಂಡದಲ್ಲಿ ಪರಿಸ್ಥಿತಿ ಹಾಗಿಲ್ಲ. ಆ ರೀತಿಯ ಬ್ಯಾಟ್ಸ್‌ಮನ್‌ಗಳೂ ಈಗ ಇಲ್ಲ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರನ್ನು ಯಾವುದೇ ಕಾರಣಕ್ಕೂ ಕ್ಲಾಸ್‌ ಆಟಗಾರರಾದ ಸಚಿನ್‌ ಮತ್ತು ದ್ರಾವಿಡ್‌ಗೆ ಹೋಲಿಕೆ ಮಾಡಬಾರದು," ಎಂದು ಪಾಕಿಸ್ತಾನದ ಟೆಲಿವಿಷನ್‌ ಕಾರ್ಯಕ್ರಮವೊಂದರಲ್ಲಿ ಯೂಸುಫ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಧೋನಿ-ಬ್ರಾವೋ ನಡುವೆ ರನ್ನಿಂಗ್‌ ರೇಸ್‌ನಲ್ಲಿ ಗೆಲ್ಲೋರು ಯಾರು? ಡಿಜೆ ಬಳಿ ಇದೆ ಉತ್ತರ!

ಬಾಬರ್‌ ಆಝಮ್ ಬಗ್ಗೆ ಗುಣಗಾನ
ಇನ್ನು ವಿರಾಟ್‌ ಕೊಹ್ಲಿ ಮತ್ತು ಬಾಬರ್‌ ಆಝಮ್‌ ಜೊತೆಗಿನ ಹೋಲಿಕೆ ಕುರಿತಾಗಿ ಮಾತಿಗಿಳಿದ ಯೂಸುಫ್, ಭಾರತೀಯ ಬ್ಯಾಟ್ಸ್‌ಮನ್‌ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಆದರೆ, ಬಾಬರ್‌ ಈಗ ಆಡುತ್ತಿರುವ ರೀತಿಯಲ್ಲೇ ಆಟ ಮುಂದುವರಿಸಿದರೆ ಅವರು ಕೂಡ ವಿಶ್ವ ಶ್ರೇಷ್ಠರಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಆ ಒಂದು ಫೋಟೊದಿಂದ ಜೀವನದ ಅತ್ಯುತ್ತಮ ಕ್ಷಣವನ್ನು ಸ್ಮರಿಸಿದ ಗಂಗೂಲಿ!

"ವಿರಾಟ್‌ ಕೊಹ್ಲಿ ನಂ.1 ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಬಾಬರ್‌ ಇದೇ ರೀತಿ ಅಭಿವೃದ್ಧಿಯಾಗುತ್ತಿದ್ದರೆ ವಿಶ್ವದ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಲಿದ್ದಾರೆ. ಟಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದರಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಶತಕ ಬಾರಿಸಿದ್ದಾರೆ," ಎಂದು ಯೂಸುಫ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌