ಆ್ಯಪ್ನಗರ

ಹಿತಾಸಕ್ತಿ ಸಂಘರ್ಷ; ಮತ್ತಷ್ಟು ಸ್ಪಷ್ಟನೆ ಕೇಳಿದ ದ್ರಾವಿಡ್

ಭಾರತ 'ಎ' ಹಾಗೂ ಅಂಡರ್-19 ಕ್ರಿಕೆಟ್ ತಂಡದ ತರಬೇತುದಾರನಾಗಿರುವ ಮಾಜಿ ಆಟಗಾರ ರಾಹುಲ್ ದ್ರಾವಿಡ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮಾರ್ಗದರ್ಶಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 Jun 2017, 10:36 pm
ಮುಂಬೈ: ಭಾರತ 'ಎ' ಹಾಗೂ ಅಂಡರ್-19 ಕ್ರಿಕೆಟ್ ತಂಡದ ತರಬೇತುದಾರನಾಗಿರುವ ಮಾಜಿ ಆಟಗಾರ ರಾಹುಲ್ ದ್ರಾವಿಡ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಮಾರ್ಗದರ್ಶಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.
Vijaya Karnataka Web dravid calls for bcci clarity on conflict of interest issue
ಹಿತಾಸಕ್ತಿ ಸಂಘರ್ಷ; ಮತ್ತಷ್ಟು ಸ್ಪಷ್ಟನೆ ಕೇಳಿದ ದ್ರಾವಿಡ್


ಹೀಗೆ ರಾಷ್ಟ್ರೀಯ ಹಾಗೂ ವೈಯಕ್ತಿಯ ಹಿತಾಸಕ್ತಿಯ ಸಂರ್ಘರ್ಷದ ಬಗ್ಗೆ ವ್ಯಾಪಕ ಆಕ್ರೋಶ ಎದುರಾಗಿತ್ತು. ಇದರಂತೆ 'ವಾಲ್' ಖ್ಯಾತಿಯ ದ್ರಾವಿಡ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಮತ್ತಷ್ಟು ಸ್ಪಷ್ಟನೆಯನ್ನು ಬಯಸಿದ್ದಾರೆ.

ವರ್ಷದಲ್ಲಿ 10 ತಿಂಗಳು ಭಾರತ ಎ ಹಾಗೂ ಅಂಡರ್-19 ಭಾರತ ತಂಡದ ಕೋಚ್ ಒಪ್ಪಂದ ಹೊಂದಿರುವ ದ್ರಾವಿಡ್ ಉಳಿದೆರಡು ತಿಂಗಳಲ್ಲಿ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಮೆಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ದ್ರಾವಿಡ್ ಅವರಂತೆ ಫೀಲ್ಡಿಂಗ್ ಕೋಚ್ ಆಗಿರುವ ಆರ್. ಶ್ರೀಧರ್, ರಾಷ್ಟ್ರೀಯ ತಂಡ ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಫಿಸಿಯೋ ಮುಖ್ಯಸ್ಥ ಆಂಡ್ರ್ಯೂ ಲಿಪಸ್ ಸಹ ರಾಷ್ಟ್ರೀಯ ಹಾಗೂ ವೈಯಕ್ತಿಕ ಹಿತಾಸಕ್ತಿಯ ಸಂಘರ್ಷವನ್ನು ಎದುರಿಸುತ್ತಿದ್ದಾರೆ.

ಶ್ರೀಧರ್ ಹಾಗೂ ಫರ್ಹಾಟ್ ಕಿಂಗ್ಸ್ ಇಲೆವೆಲ್ ಪಂಜಾಬ್ ಹಾಗೂ ಲಿಪಸ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗಿಯಾಗಿದ್ದಾರೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಆಡಳಿತಗಾರರ ಸಮಿತಿಯ (ಸಿಒಎ) ಮಾಜಿ ಸದಸ್ಯರಾಗಿರುವ ರಾಮಚಂದ್ರ ಗುಹಾ ಈ ಬಗ್ಗೆ ಆರೋಪ ಹೇರಿದ್ದರು.

ಈಗ ಹಿತಾಸಕ್ತಿ ಸಂಘರ್ಷದ ಹಿನ್ನಲೆಯಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿ ಪತ್ರ ಬರೆದಿರುವುದಾಗಿ ದ್ರಾವಿಡ್, ಹಾಗೊಂದು ವೇಳೆ ಒಪ್ಪಂದ ಮಾಡಿದ ಮಧ್ಯಂತರ ಅವಧಿಯಲ್ಲಿ ಬಿಸಿಸಿಐ ತನ್ನ ನಿಮಯ ಬದಲಾಯಿಸಿದರೆ ನನ್ನನ್ನು ದೂಷಿಸುವುದು ಸಮಂಜಸವಲ್ಲ ಎಂದು ವಿವರಿಸಿದ್ದಾರೆ.

ಹಿತಾಸಕ್ತಿ ಘರ್ಷಣೆಗೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ. ಹಾಗಾದ್ದಲ್ಲಿ ಮಾತ್ರ ಉಪಯುಕ್ತ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾವಿರುತ್ತೇವೆ. ಇದರ ಹಿನ್ನಲೆ ಹಾಗೂ ಸರಿಯಾಗಿ ಅರ್ಥಮಾಡಿಕೊಳ್ಳದೇ ಸಾರ್ವಜನಕವಾಗಿ ಇದನ್ನು ಆಡಿದ ರೀತಿಯು ಬೇಸರ ತರಿಸುತ್ತದೆ ಎಂದು ದ್ರಾವಿಡ್ ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌