ಆ್ಯಪ್ನಗರ

ದ್ರಾವಿಡ್‌ಗೆ ‘ಸ್ವಹಿತಾಸಕ್ತಿ ಸಂಘರ್ಷ’ ನೋಟಿಸ್‌

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯ ಕ್ರಿಕೆಟ್‌ ಕಾರ್ಯ ಚಟುವಟಿಕೆಯ ಹಾಲಿ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ಗೆ ಸ್ವಹಿತಾಸಕ್ತಿ ಸಂಘರ್ಷದ ಆರೋಪದಡಿ ಬಿಸಿಸಿಐನ ನೀತಿ ಸಂಹಿತೆ ಅಧಿಕಾರಿ ಡಿ.ಕೆ.ಜೈನ್‌ ನೋಟಿಸ್‌ ಜಾರಿ ಮಾಡಿದ್ದಾರೆ.

PTI 7 Aug 2019, 5:00 am
ಹೊಸದಿಲ್ಲಿ : ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯ ಕ್ರಿಕೆಟ್‌ ಕಾರ್ಯ ಚಟುವಟಿಕೆಯ ಹಾಲಿ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ಗೆ ಸ್ವಹಿತಾಸಕ್ತಿ ಸಂಘರ್ಷದ ಆರೋಪದಡಿ ಬಿಸಿಸಿಐನ ನೀತಿ ಸಂಹಿತೆ ಅಧಿಕಾರಿ ಡಿ.ಕೆ.ಜೈನ್‌ ನೋಟಿಸ್‌ ಜಾರಿ ಮಾಡಿದ್ದಾರೆ.
Vijaya Karnataka Web dravid gets conflict of interest notice from bcci
ದ್ರಾವಿಡ್‌ಗೆ ‘ಸ್ವಹಿತಾಸಕ್ತಿ ಸಂಘರ್ಷ’ ನೋಟಿಸ್‌


ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯ ಸಂಜೀವ್‌ ಗುಪ್ತಾ ಅವರ ದೂರಿನ ಅನ್ವಯ ಬಿಸಿಸಿಐ ಒಂಬುಡ್ಸ್‌ಮನ್‌ ಕೂಡ ಆಗಿರುವ ಡಿ.ಕೆ.ಜೈನ್‌ ಬ್ಯಾಟಿಂಗ್‌ ದಿಗ್ಗಜನಿಗೆ ನೋಟಿಸ್‌ ಕಳುಹಿಸಿದ್ದಾರೆ. ಎನ್‌ಸಿಎ ನಿರ್ದೇಶಕರಾಗಿರುವ ದ್ರಾವಿಡ್‌ ಐಪಿಎಲ್‌ ಫ್ರಾಂಚೈಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕತ್ವದ ಇಂಡಿಯಾ ಸಿಮೆಂಟ್‌ ಗ್ರೂಪ್‌ನಲ್ಲಿ ಉಪಾಧ್ಯಕ್ಷ ಹುದ್ದೆ ಹೊಂದಿದ್ದಾರೆ ಎಂದು ಗುಪ್ತಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

''ಹೌದು. ಸ್ವಹಿತಾಸಕ್ತಿ ಸಂಘರ್ಷ ಸಂಬಂಧ ದೂರು ಸ್ವೀಕರಿಸಿದ ಬಳಿಕ ಕಳೆದ ವಾರ ರಾಹುಲ್‌ ದ್ರಾವಿಡ್‌ಗೆ ನಾನು ನೋಟಿಸ್‌ ನೀಡಿದ್ದೇನೆ. ಆರೋಪ ಕುರಿತು ಉತ್ತರಿಸಲು ದ್ರಾವಿಡ್‌ ಎರಡು ವಾರ ಕಾಲಾವಕಾಶ ಕೋರಿದ್ದಾರೆ,'' ಎಂದು ಜೈನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌