ಆ್ಯಪ್ನಗರ

ಯುದ್ಧ ಭೂಮಿಯಲ್ಲೇ ಮಾತನಾಡೋಣ: ಗಂಭೀರ್ ರೋಷ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಭೀಕರ ದಾಳಿಗೆ 44 ಯೋಧರು ಹುತ್ಮಾತರಾಗಿದ್ದಾರೆ. ಈ ಹೇಯ ಕೃತ್ಯವನ್ನು ಕಟು ಭಾಷೆಯಲ್ಲೇ ಗೌತಮ್ ಗಂಭೀರ್ ಖಂಡಿಸಿದ್ದು, ಯುದ್ಧ ಭೂಮಿಯಲ್ಲೇ ಮಾತನಾಡೋಣ ಎಂದಿದ್ದಾರೆ.

Vijaya Karnataka Web 15 Feb 2019, 10:49 am

ಹೈಲೈಟ್ಸ್‌:

  • ಕಳೆದೆರಡು ದಶಕದಲ್ಲೇ ಅತಿ ಭೀಕರ ಉಗ್ರ ದಾಳಿ.
  • ಸಿಆರ್‌ಪಿಎಫ್ ಪಡೆ ಮೇಲೆ ಆತ್ಮಾಹುತಿ ದಾಳಿ.
  • 44 ಯೋಧರು ಹುತ್ಮಾತರಾಗಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web gambhir-pulwama
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ನಡೆದ ಉಗ್ರರ ದಾಳಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಕಟುವಾಗಿ ಖಂಡಿಸಿದ್ದಾರೆ. ಗುರುವಾರನ ನಡೆದ ಭೀಕರ ದಾಳಿಯಲ್ಲಿ 44 ಯೋಧರು ಹುತ್ಮಾತರಾಗಿದ್ದಾರೆ.
ಟ್ವಿಟರ್‌ನಲ್ಲಿ ಗಂಭೀರ್ ರೋಷ ಹೊರಹೊಮ್ಮಿದೆ. ಅಲ್ಲದೆ ಉಗ್ರರ ದಾಳಿ ವಿಚಾರ ತಿಳಿದ ಬೆನ್ನಲ್ಲೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

"ಹೌದು, ಪ್ರತ್ಯೇಕವಾದಿಗಳ ಜತೆಗೆ ಮಾತನಾಡೋಣ. ಹೌದು ಪಾಕಿಸ್ತಾನ ಜತೆ ಮಾತನಾಡೋಣ. ಆದರೆ ಈ ಬಾರಿ ಮೇಜಿನ ಮೇಲಿನ ಮಾತುಕತೆ ಬೇಡ. ಯುದ್ಧ ಭೂಮಿಯಲ್ಲೇ ನಡೆಯಲಿ. ಸಾಕು ಇನ್ನು ತಾಳಲಾರೆನು" ಎಂದು ಕಟು ಭಾಷೆಯಿಂದಲೇ ಉತ್ತರಿಸಿದ್ದಾರೆ.

ಪಾಕಿಸ್ತಾನ ಪ್ರೇರಿತ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬ್ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದು ಜಮ್ಮು ಕಾಶ್ಮೀರದಲ್ಲಿ ಕಳೆದ ಎರಡು ದಶಕದಲ್ಲೇ ನಡೆದ ಅತಿ ದೊಡ್ಡ ಉಗ್ರ ದಾಳಿಯಾಗಿದೆ.

ಉಗ್ರರ ದಾಳಿಯ ಬೆನ್ನಲ್ಲೇ ದೇಶದ್ಯಾಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅತ್ತ ಭಾರತ ಹಾಗೂ ಪಾಕಿಸ್ತಾನ ನಡುವೆ ಬಿಗುವಾದ ವಾತಾವರಣ ಸೃಷ್ಟಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌