ಆ್ಯಪ್ನಗರ

ದ್ರಾವಿಡ್ ಯಾಕೆ ಕಿರಿಯ ಆಟಗಾರರ ವೈಫಲ್ಯ ಬಯಸುತ್ತಾರೆ?

ಭಾರತ ಜೂನಿಯರ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿರುವ ರಾಹುಲ್ ದ್ರಾವಿಡ್, ಕಿರಿಯ ಮಟ್ಟದಲ್ಲೇ ಆಟಗಾರರ ವೈಫಲ್ಯವನ್ನು ಬಯಸುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಅಗಾಧ ಅನುಭವ ಹೊಂದಿರುವ 'ಗೋಡೆ' ಖ್ಯಾತಿಯ ದ್ರಾವಿಡ್ ಇದಕ್ಕೊಂದು ಕಾರಣವನ್ನು ನೀಡುತ್ತಾರೆ. ಅದೇನೆಂದರೆ ಆಟಗಾರರಿಗೆ ಯಶಸ್ಸಿಗಿಂತಲೂ ವೈಫಲ್ಯ ಅನುಭವಿಸಲು ಇದು ಸೂಕ್ತ ಕಾಲಘಟ್ಟ ಎಂದು ವಿವರಿಸುತ್ತಾರೆ.

ಏಜೆನ್ಸೀಸ್ 3 Feb 2017, 6:22 pm
ಮುಂಬೈ: ಭಾರತ ಜೂನಿಯರ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನಾಗಿರುವ ರಾಹುಲ್ ದ್ರಾವಿಡ್, ಕಿರಿಯ ಮಟ್ಟದಲ್ಲೇ ಆಟಗಾರರ ವೈಫಲ್ಯವನ್ನು ಬಯಸುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಅಗಾಧ ಅನುಭವ ಹೊಂದಿರುವ 'ಗೋಡೆ' ಖ್ಯಾತಿಯ ದ್ರಾವಿಡ್ ಇದಕ್ಕೊಂದು ಕಾರಣವನ್ನು ನೀಡುತ್ತಾರೆ. ಅದೇನೆಂದರೆ ಆಟಗಾರರಿಗೆ ಯಶಸ್ಸಿಗಿಂತಲೂ ವೈಫಲ್ಯ ಅನುಭವಿಸಲು ಇದು ಸೂಕ್ತ ಕಾಲಘಟ್ಟ ಎಂದು ವಿವರಿಸುತ್ತಾರೆ.
Vijaya Karnataka Web failure at junior level teaches important lessons dravid
ದ್ರಾವಿಡ್ ಯಾಕೆ ಕಿರಿಯ ಆಟಗಾರರ ವೈಫಲ್ಯ ಬಯಸುತ್ತಾರೆ?


ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆಯುತ್ತಿರುವ ಕಿರಿಯರ ತಂಡದ ಏಕದಿನ ಸರಣಿಯ ವೇಳೆಯಲ್ಲಿ ಪ್ರತಿಕ್ರಿಯಿಸಿರುವ ದ್ರಾವಿಡ್, ಕಿರಿಯ ವಯಸ್ಸಿನಲ್ಲಿ ವೈಫಲ್ಯ ಅನುಭವಿಸಿದ್ದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಸರಿಯಾದ ದಿಕ್ಕಿನತ್ತ ಮುಂದೆ ಸಾಗಲು ಸಾಧ್ಯ. ನನ್ನ ಪ್ರಕಾರ ಈ ಮಟ್ಟದಲ್ಲಿ ಯಶಸ್ಸು ಹೆಚ್ಚು ಪ್ರತಿಬಿಂಬಿಸಲಾರದು. ವಿಶೇಷವಾಗಿಯೂ ಕಿರಿಯ ವಯಸ್ಸಿನಲ್ಲಿ ಫಲಿತಾಂಶಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಹೆಚ್ಚೆಚ್ಚು ಪಾಠಗಳನ್ನು ಕಲಿಯುವುದರತ್ತ ಗಮನ ಕೇಂದ್ರಿಕರಿಸಬೇಕು. ವೈಫಲ್ಯಗಳು ಮುಖ್ಯ ಪಾಠಗಳನ್ನು ಕಲಿಸಿಕೊಡಲಿದೆ ಎಂದರು.

ದ್ರಾವಿಡ್ ಆಗಮನದೊಂದಿಗೆ ತಂಡದಲ್ಲಿ ಶಾಂತ ವಾತಾವರಣ ಮನೆ ಮಾಡಿದೆ. ಇದರರ್ಥ ಆಟಗಾರರು ಆರಾಮವಾಗಿ ಇದ್ದಾರೆ ಎಂಬುದಲ್ಲ. ದ್ರಾವಿಡ್ ಈಗಾಗಲೇ ಪಿಚ್ ಕ್ಯೂರೇಟರ್ ಸಂಪರ್ಕಿಸಿ ನ್ಯೂಜಿಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ 19 ವರ್ಷದೊಳಗಿನ ವಿಶ್ವಕಪ್ ಗುರಿಯಿಟ್ಟುಕೊಂಡು ಹೆಚ್ಚು ಹಸಿರು ಹುಲ್ಲು ಹಾಸಿದ ಪಿಚ್ ನಿರ್ಮಿಸುವಂತೆ ಕೋರಿದ್ದಾರೆ.

ವೇಗದ ಹಾಗೂ ಬೌನ್ಸಿ ಪಿಚ್‌ನಲ್ಲಿ ಈಗಿನಿಂದಲೇ ವೈಫಲ್ಯ ಅನುಭವಿಸಿದರೆ ಮುಂದೇನು ಮಾಡಬೇಕೆಂಬುದನ್ನು ಆಟಗಾರರು ಕಲಿತುಕೊಳ್ಳಲಿದ್ದಾರೆ ಎಂದು ಕೋಚ್ ದ್ರಾವಿಡ್ ವಿವರಿಸುತ್ತಾರೆ.

ಕಿರಿಯ ಹಾಗೂ ಭಾರತ ಎ ತಂಡಕ್ಕೆ ತರಬೇತಿ ನೀಡುವ ವ್ಯತ್ಯಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು ಯುವ ಕ್ರಿಕೆಟಿಗರನ್ನು ರೂಪಿಸಲು ಹೆಚ್ಚು ಮಾರ್ಗದರ್ಶನ ನೀಡುವ ಅಗತ್ಯವಿದೆ. ಇನ್ನೊಂದೆಡೆ ಎ ತಂಡದ ಆಟಗಾರರು ಆಗಲೇ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಆಯ್ಕೆದಾರರ ಗಮನ ಸೆಳೆಯಲು ಹೆಚ್ಚು ಒತ್ತು ನೀಡುತ್ತಾರೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌