ಆ್ಯಪ್ನಗರ

ಧೋನಿಯನ್ನು ಅಟ್ಟಾಡಿಸಿದ ಅಭಿಮಾನಿ!

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದ ವೇಳೆ ತಮ್ಮ ಆರಾಧ್ಯ ಪುರುಷ ಮಹೇಂದ್ರ ಸಿಂಗ್ ಧೋನಿ ಅವರನ್ನು ಅಭಿಮಾನಿಯೊಬ್ಬರು ಅಟ್ಟಾಡಿಸಿರುವ ಘಟನೆ ನೀಡಿದರು. ಕೊನೆಗೂ ತಮ್ಮ ಅಭಿಮಾನಿಗೆ ಧೋನಿ ಆಶೀರ್ವಾದ ನೀಡಿದರು.

Vijaya Karnataka Web 5 Mar 2019, 8:10 pm
ನಾಗ್ಪುರ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಿಗೆ ಸಮಾನವಾಗಿ ಆರಾಧ್ಯ ಪುರುಷರನ್ನಾಗಿ ಕಾಣುತ್ತಾರೆ. ದೇಶದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಳಿಕ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಅಭಿಮಾನಿಗಳ ಬಳಗವನ್ನು ಕಟ್ಟಿಕೊಂಡಿದ್ದಾರೆ.
Vijaya Karnataka Web dhoni-fan


ಪಂದ್ಯ ನಡೆಯುತ್ತಿರುವಾಗಲೇ ಭದ್ರತಾ ಕೋಟೆಯನ್ನು ಬೇಧಿಸುವ ಅಭಿಮಾನಿಗಳು ಕೂಲ್ ನಾಯಕನ ಕಾಲಿದು ಬಿದ್ದು ಆಶೀರ್ವಾದ ಪಡೆದಿರುವ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ.

ಆದರೆ ಇವೆಲ್ಲದಕ್ಕಿಂತ ವಿಭಿನ್ನವಾಗಿ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ವಿಶೇಷವಾದ ಘಟನೆಯೊಂದು ನಡೆದಿತ್ತು.

ದ್ವಿತೀಯ ಇನ್ನಿಂಗ್ಸ್ ವೇಳೆಯಲ್ಲಿ ಭಾರತೀಯ ಆಟಾಗರರು ಕ್ಷೇತ್ರರಕ್ಷಣೆಗೆಂದು ಮೈದಾನಕ್ಕಿಳಿದ ವೇಳೆಯಲ್ಲಿ ಅಭಿಮಾನಿಯೊಬ್ಬ ತಮ್ಮತ್ತ ಬರುವುದನ್ನು ಗಮನಿಸಿದ ಧೋನಿ ಓಡಲು ಆರಂಭಿಸಿದರು.

ಮೊದಲು ಸಹ ಆಟಗಾರರ ನಡುವೆ ಅವಿತುಕೊಳ್ಳಲು ಪ್ರಯತ್ನಿಸಿದ ಧೋನಿ ಬಳಿಕ ಓಟಕ್ಕಿಳಿದರು. ಇದನ್ನು ಗಮನಿಸಿದ ಅಭಿಮಾನಿಯು ತಮ್ಮ ಆರಾಧ್ಯ ಪುರುಷನನ್ನು ಅಟ್ಟಾಡಿಸಿಯೇ ಬಿಟ್ಟರು.

ಅತ್ತಿತ್ತ ಓಡಾಡಿದ ಧೋನಿ ಕೊನೆಗೂ ತಮ್ಮ ಅಭಿಮಾನಿಗೆ ಆಶೀರ್ವಾದ ನೀಡುವ ಮೂಲಕ ಗಮನ ಸೆಳೆದರು. ಈ ಎಲ್ಲ ಘಟನೆಗಳು ಹೆಚ್ಚಿನ ಕುತೂಹಲವನ್ನುಂಟು ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌