ವೃತ್ತಿಪರ ಕ್ರಿಕೆಟ್ಗೆ ವಿದಾಯ ಹೇಳಿದ ವಿನಯ್ ಕುಮಾರ್!
ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕ ತಂಡದ ಅತ್ಯಂತ ಯಶಸ್ವಿ ನಾಯಕ ಎಂದೇ ಖ್ಯಾತಿ ಪಡೆದಿರುವ ಮಾಜಿ ಬಲಗೈ ವೇಗದ ಬೌಲರ್ ಆರ್ ವಿನಯ್ ಕುಮಾರ್ ವೃತ್ತಿಪರ ಕ್ರಿಕೆಟ್ ಶುಕ್ರವಾರ ವಿದಾಯ ಹೇಳಿದ್ದಾರೆ.
Vijaya Karnataka Web 26 Feb 2021, 4:33 pm
ಹೈಲೈಟ್ಸ್:
- ಟೀಮ್ ಇಂಡಿಯಾ ಪರ ಆಡಿದ್ದ ಕರ್ನಾಟಕದ ಮಾಜಿ ವೇಗದ ಬೌಲರ್.
- ರಣಜಿ ಟ್ರೋಫಿಯಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದ ನಾಯಕ ಎಂಬ ಕೀರ್ತಿ.
- ಇತ್ತೀಚೆಗೆ ಪಾಂಡಿಚರಿ ತಂಡದ ಪರ ಆಡಿದ್ದ ಆರ್ ವಿನಯ್ ಕುಮಾರ್.
- 'ದಾವಣಗೆರೆ ಎಕ್ಸ್ಪ್ರೆಸ್' ಎಂದೇ ಗುರುತಿಸಿಕೊಂಡಿದ್ದ ತಾರೆ.
ಹೊಸದಿಲ್ಲಿ: ಕರ್ನಾಕಟ ರಣಜಿ ತಂಡದ ಮಾಜಿ ನಾಯಕ ಹಾಗೂ ಭಾರತ ತಂಡದ ಮಾಜಿ ವೇಗದ ಬೌಲರ್ ಆರ್ ವಿನಯ್ ಕುಮಾರ್ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮದರ್ಜೆ ಕ್ರಿಕೆಟ್ಗೆ ಶುಕ್ರವಾರ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದ 37 ವರ್ಷದ ಬಲಗೈ ವೇಗಿ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರ ಜೊತೆಗೆ ಟೀಮ್ ಇಂಡಿಯಾದಲ್ಲಿ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದರು.
ತಮ್ಮ ನಿವೃತ್ತಿ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ವಿನಯ್ ಕುಮಾರ್, "ಕ್ರಿಕೆಟ್ ಜೀವನದಲ್ಲಿ ಹಲವು ನಿಲ್ದಾಣಗಳನ್ನು ತಲುಪಿದ ಬಳಿಕ 'ದಾವಣಗೆರೆ ಎಕ್ಸ್ಪ್ರೆಸ್' ಕೊನೆಗೂ ನಿವೃತ್ತಿಯ ನಿಲ್ದಾಣ ತಲುಪಿದೆ. ಈ ಸಂದರ್ಭದಲ್ಲಿ ಭಾವನೆಗಳು ನನ್ನನ್ನು ಆವರಿಸಿದೆ. ನಾನು ಆರ್ ವಿನಯ್ ಕುಮಾರ್, ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ," ಎಂದು ಹೇಳಿಕೊಂಡಿದ್ದಾರೆ.
ಮೊಟೆರಾ ಪಿಚ್ ಕಳಪೆಯೋ ಅಲ್ಲವೋ ಎಂದು ಐಸಿಸಿ ನಿರ್ಧರಿಸಲಿ: ರೂಟ್
"ಈ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಕ್ರೀಡಾಪಟುವಿನ ವೃತ್ತಿಬದುಕಿನಲ್ಲಿ ಈ ಸಮಯ ಬಂದೇ ಬರುತ್ತದೆ. ಅಂದು ನಿವೃತ್ತಿ ಘೋಷಿಸಬೇಕಾಗುತ್ತದೆ," ಎಂದು ವಿನಯ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನನ್ನ ವೃತ್ತಿ ಬದುಕಿನುದ್ದಕ್ಕೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಇಂದು ನನ್ನ ಶೂಗಳಿಗೆ ವಿಶ್ರಾಂತಿ ನೀಡುತ್ತಿದ್ದೇನೆ," ಎಂದು ವಿನಯ್ ಟ್ವೀಟ್ ಮಾಡಿ ತಮ್ಮ ಎರಡು ಪುಟಗಳ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
"ಈ ಅದ್ಭುತ ಆಟದಲ್ಲಿ ದೇಶದ ಪರ ಆಡಿರುವುದು ನನ್ನ ಅದೃಷ್ಟವೇ ಸರಿ. ನನ್ನ ಈ ಪಯಣದಲ್ಲಿ ಹಲವು ಅಮೋಘ ನೆನಪುಗಳಿವೆ. ಇದನ್ನು ನನ್ನ ಜೀವನದುದ್ದಕ್ಕೂ ಸ್ಮರಿಸಲಿದ್ದೇನೆ. ನನ್ನ ಕನಸಿನ ಬೆನ್ನತ್ತಿ ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ. ರಾಜ್ಯದ ತಂಡದ ಪರ ಆಡುವ ಅವಕಾಶ ಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾನು ಚಿರ ಋಣಿ. ಅಲ್ಲಿಂದಲೇ ನನಗೆ ರಾಷ್ಟ್ರೀಯ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದು," ಎಂದು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
'ಗ್ರೀನ್ ಪಿಚ್ ಕೊಟ್ಟಾಗ ಭಾರತ ದೂರಲಿಲ್ಲ', ಸ್ಪಿನ್ ಪಿಚ್ನ ಸಮರ್ಥಿಸಿಕೊಂಡ ಸ್ವಾನ್!
ಭಾರತ ತಂಡದ ಪರ ಟೆಸ್ಟ್, ಒಡಿಐ ಮತ್ತು ಟಿ20-ಐ ಮೂರೂ ಮಾದರಿಯ ಕ್ರಿಕೆಟ್ ಆಡಿರುವ ವಿನಯ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ಗೆ ಹೆಚ್ಚು ಹೆಸರುವಾಸಿ. ಟೀಮ್ ಇಂಡಿಯಾ ಪರ ಏಕೈಕ ಟೆಸ್ಟ್, 31 ಏಕದಿನ ಕ್ರಿಕೆಟ್ ಮತ್ತು 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಕೀರ್ತಿ ಅವರದ್ದು. ಎಲ್ಲಾ ಮಾದರಿಗಳಿಂದ ಒಟ್ಟು 49 ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಸಂಪಾದಿಸಿದ್ದಾರೆ.
2011ರಲ್ಲಿ ದಿಲ್ಲಿಯಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದ ವಿನಯ್ 30ಕ್ಕೆ 4 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
'ಪಿಚ್ ಸಮಸ್ಯೆ ಅಲ್ಲ, ಬ್ಯಾಟ್ಸ್ಮನ್ಗಳ ತಪ್ಪೇ ಹೆಚ್ಚು': ರೋಹಿತ್ ಶರ್ಮಾ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಹಲವು ವರ್ಷಗಳ ಕಾಲ ಮಿಂಚಿದ್ದ ವಿನಯ್, ಕೋಲ್ಕತಾ ನೈಟ್ ರೈಡರ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಆಡಿದ್ದಾರೆ. ಅವರ ವೃತ್ತಿ ಬದುಕಿನ ಬಹುದೊಡ್ಡ ಸಾಧನೆ ಎಂಬಂತೆ ನಾಯಕನಾಗಿ 2013-14 ಮತ್ತು 2014-15ರ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
2018ರ ನವೆಂಬರ್ನಲ್ಲಿ ಅವರು ತಮ್ಮ ವೃತ್ತಿ ಬದುಕಿನ 100ನೇ ರಣಜಿ ಟ್ರೋಫಿ ಪಂದ್ಯವನ್ನಾಡಿದ್ದರು. 2019ರಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ತಂಡ ತೊರೆದು ಪಾಂಡಿಚರಿ ತಂಡ ಸೇರಿಕೊಂಡಿದ್ದರು.
ತಮ್ಮ ನಿವೃತ್ತಿ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ವಿನಯ್ ಕುಮಾರ್, "ಕ್ರಿಕೆಟ್ ಜೀವನದಲ್ಲಿ ಹಲವು ನಿಲ್ದಾಣಗಳನ್ನು ತಲುಪಿದ ಬಳಿಕ 'ದಾವಣಗೆರೆ ಎಕ್ಸ್ಪ್ರೆಸ್' ಕೊನೆಗೂ ನಿವೃತ್ತಿಯ ನಿಲ್ದಾಣ ತಲುಪಿದೆ. ಈ ಸಂದರ್ಭದಲ್ಲಿ ಭಾವನೆಗಳು ನನ್ನನ್ನು ಆವರಿಸಿದೆ. ನಾನು ಆರ್ ವಿನಯ್ ಕುಮಾರ್, ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ," ಎಂದು ಹೇಳಿಕೊಂಡಿದ್ದಾರೆ.
ಮೊಟೆರಾ ಪಿಚ್ ಕಳಪೆಯೋ ಅಲ್ಲವೋ ಎಂದು ಐಸಿಸಿ ನಿರ್ಧರಿಸಲಿ: ರೂಟ್
"ಈ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಆದರೆ ಪ್ರತಿಯೊಬ್ಬ ಕ್ರೀಡಾಪಟುವಿನ ವೃತ್ತಿಬದುಕಿನಲ್ಲಿ ಈ ಸಮಯ ಬಂದೇ ಬರುತ್ತದೆ. ಅಂದು ನಿವೃತ್ತಿ ಘೋಷಿಸಬೇಕಾಗುತ್ತದೆ," ಎಂದು ವಿನಯ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನನ್ನ ವೃತ್ತಿ ಬದುಕಿನುದ್ದಕ್ಕೂ ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಇಂದು ನನ್ನ ಶೂಗಳಿಗೆ ವಿಶ್ರಾಂತಿ ನೀಡುತ್ತಿದ್ದೇನೆ," ಎಂದು ವಿನಯ್ ಟ್ವೀಟ್ ಮಾಡಿ ತಮ್ಮ ಎರಡು ಪುಟಗಳ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
"ಈ ಅದ್ಭುತ ಆಟದಲ್ಲಿ ದೇಶದ ಪರ ಆಡಿರುವುದು ನನ್ನ ಅದೃಷ್ಟವೇ ಸರಿ. ನನ್ನ ಈ ಪಯಣದಲ್ಲಿ ಹಲವು ಅಮೋಘ ನೆನಪುಗಳಿವೆ. ಇದನ್ನು ನನ್ನ ಜೀವನದುದ್ದಕ್ಕೂ ಸ್ಮರಿಸಲಿದ್ದೇನೆ. ನನ್ನ ಕನಸಿನ ಬೆನ್ನತ್ತಿ ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ. ರಾಜ್ಯದ ತಂಡದ ಪರ ಆಡುವ ಅವಕಾಶ ಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನಾನು ಚಿರ ಋಣಿ. ಅಲ್ಲಿಂದಲೇ ನನಗೆ ರಾಷ್ಟ್ರೀಯ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ಸಿಕ್ಕಿದ್ದು," ಎಂದು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
'ಗ್ರೀನ್ ಪಿಚ್ ಕೊಟ್ಟಾಗ ಭಾರತ ದೂರಲಿಲ್ಲ', ಸ್ಪಿನ್ ಪಿಚ್ನ ಸಮರ್ಥಿಸಿಕೊಂಡ ಸ್ವಾನ್!
ಭಾರತ ತಂಡದ ಪರ ಟೆಸ್ಟ್, ಒಡಿಐ ಮತ್ತು ಟಿ20-ಐ ಮೂರೂ ಮಾದರಿಯ ಕ್ರಿಕೆಟ್ ಆಡಿರುವ ವಿನಯ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ಗೆ ಹೆಚ್ಚು ಹೆಸರುವಾಸಿ. ಟೀಮ್ ಇಂಡಿಯಾ ಪರ ಏಕೈಕ ಟೆಸ್ಟ್, 31 ಏಕದಿನ ಕ್ರಿಕೆಟ್ ಮತ್ತು 9 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಕೀರ್ತಿ ಅವರದ್ದು. ಎಲ್ಲಾ ಮಾದರಿಗಳಿಂದ ಒಟ್ಟು 49 ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಸಂಪಾದಿಸಿದ್ದಾರೆ.
2011ರಲ್ಲಿ ದಿಲ್ಲಿಯಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದ ವಿನಯ್ 30ಕ್ಕೆ 4 ವಿಕೆಟ್ಗಳನ್ನು ಪಡೆದು ಮಿಂಚಿದ್ದರು.
'ಪಿಚ್ ಸಮಸ್ಯೆ ಅಲ್ಲ, ಬ್ಯಾಟ್ಸ್ಮನ್ಗಳ ತಪ್ಪೇ ಹೆಚ್ಚು': ರೋಹಿತ್ ಶರ್ಮಾ!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಹಲವು ವರ್ಷಗಳ ಕಾಲ ಮಿಂಚಿದ್ದ ವಿನಯ್, ಕೋಲ್ಕತಾ ನೈಟ್ ರೈಡರ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ ಆಡಿದ್ದಾರೆ. ಅವರ ವೃತ್ತಿ ಬದುಕಿನ ಬಹುದೊಡ್ಡ ಸಾಧನೆ ಎಂಬಂತೆ ನಾಯಕನಾಗಿ 2013-14 ಮತ್ತು 2014-15ರ ಸಾಲಿನಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
2018ರ ನವೆಂಬರ್ನಲ್ಲಿ ಅವರು ತಮ್ಮ ವೃತ್ತಿ ಬದುಕಿನ 100ನೇ ರಣಜಿ ಟ್ರೋಫಿ ಪಂದ್ಯವನ್ನಾಡಿದ್ದರು. 2019ರಲ್ಲಿ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಕರ್ನಾಟಕ ತಂಡ ತೊರೆದು ಪಾಂಡಿಚರಿ ತಂಡ ಸೇರಿಕೊಂಡಿದ್ದರು.