ಆ್ಯಪ್ನಗರ

ಪಾಕಿಸ್ತಾನದಲ್ಲಿ ಹಿಂದೂ ವಿದ್ಯಾರ್ಥಿನಿಯ ಕೊಲೆ; ಶೋಯಿಬ್ ಅಖ್ತರ್ ಮಿಡಿದ ಹೃದಯ!

ಪಾಕಿಸ್ತಾನದಲ್ಲಿ ಹಿಂದೂ ವಿದ್ಯಾರ್ಥಿನಿ ನಿಮೃತ ಕುಮಾರಿ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ವ್ಯಾಪಕ ಪ್ರತಿಭಟನೆ ಕಂಡುಬಂದಿದೆ. ಪ್ರಸ್ತುತ ನಿಮೃತ ಸಾವಿನ ಅಪರಾಧಿಗಳನ್ನು ಕಂಡು ಹಿಡಿಯಲು ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಬೇಡಿಕೆ ಮುಂದಿರಿಸಿದ್ದಾರೆ.

Vijaya Karnataka Web 18 Sep 2019, 12:06 pm
ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಬಲವಂತದ ಮತಾಂತರ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೊಂದು ಸೇರ್ಪಡಯೆಂಬಂತೆ ಹಿಂದೂ ದಂತ ವಿದ್ಯಾರ್ಥಿನಿಯಾಗಿರುವ ನಿಮೃತ ಕುಮಾರಿ (ನಮೃತ ಚಂದಾನಿ) ಹೋಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Vijaya Karnataka Web shoiab-akhtar


ಲಾರ್ಕಾನಾದಲ್ಲಿ ಶಾಹೀದ್ ಮೊಹತರ್ಮ ಬೆನಜಿರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದ (SMBBMU) ಚಂದಕ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯಾಗಿರುವ ನಿಮೃತ ಅವರ ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಹಾಸ್ಟೆಲ್ ಕೊಠಡಿಯಲ್ಲಿ ಪತ್ತೆಯಾಗಿದೆ. ಶವ ಪತ್ತೆಯಾಗುವ ವೇಳೆಯಲ್ಲಿ ಕುತ್ತಿಗೆ ಹಗ್ಗ ಬಿಗಿಯಲಾಗಿತ್ತಲ್ಲದೆ ಒಳಗಡೆಯಿಂದ ಕೋಣೆಯನ್ನು ಮುಚ್ಚಲಾಗಿತ್ತು. ಇದರಿಂದಾಗಿ ಆತ್ಮಹತ್ಯೆ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಫಿಕ್ಸಿಂಗ್ ಗಾಳಕ್ಕೆ ಧೋನಿ, ಕೊಹ್ಲಿ ಬೀಳಲು ಸಾಧ್ಯವೇ ಇಲ್ಲವಂತೆ; ಏಕೆ ಗೊತ್ತಾ?

ನಿಮೃತ ಕುಮಾರಿ ಅನುಮಾನಾಸ್ಪದ ಸಾವು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಇದಕ್ಕೀಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಕೈಜೋಡಿಸಿದ್ದಾರೆ.

ಅಮಾಯಕ ಬಾಲಕಿ ನಿಮೃತ ಕುಮಾರಿ ಅನುಮಾನಾಸ್ಪದ ಸಾವಿನ ಸುದ್ದಿಯನ್ನು ಓದಲು ಅತ್ಯಂತ ದುಃಖವಾಗುತ್ತಿದೆ. ನಿಜವಾದ ಅಪರಾಧಿಗಳನ್ನು ಕಂಡು ಹುಡುಕಿ ನ್ಯಾಯ ಒದಗಿಸಲಾಗುವುದು ಎಂದು ನಿರೀಕ್ಷಿಸುತ್ತೇನೆ. ಆಕೆ ಯಾವ ನಂಬಿಕೆಗೂ ಸೇರಿದವರಾಗಿರಲಿ. ಎಲ್ಲ ಪಾಕಿಸ್ತಾನಿಯರಂತೆ ನನ್ನ ಹೃದಯವು ಮಿಡಿಯುತ್ತಿದೆ. ಆಕೆಯ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಶೋಯಿಬ್ ಅಖ್ತರ್ ಟ್ವಿಟರ್‌ನಲ್ಲಿ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಮೊಹಾಲಿಯಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಪಂದ್ಯ; ಮಳೆರಾಯ ಅಡ್ಡಿಯಾದಿತೇ

ಪ್ರಸ್ತುತ ಸಿಂಧೂ ಪ್ರಾಂತ್ಯದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌