ಆ್ಯಪ್ನಗರ

ಗಂಗೂಲಿ ಭಾರತೀಯ ಕ್ರಿಕೆಟ್‌ನ ಸರದಾರ

ಸೌರವ್‌ ಗಂಗೂಲಿ ಭಾರತೀಯ ಕ್ರಿಕೆಟ್‌ನ ದಿಸೆಯನ್ನೇ ಬದಲಿಸಿದವರು ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್‌ ಹುಸೇನ್‌ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka 4 Jun 2019, 5:00 am
ಐಎಎನ್‌ಎಸ್‌ ಲಂಡನ್‌
Vijaya Karnataka Web A3E5E821-6468-4FC7-A877-96D35AB4B424


ಸೌರವ್‌ ಗಂಗೂಲಿ ಭಾರತೀಯ ಕ್ರಿಕೆಟ್‌ನ ದಿಸೆಯನ್ನೇ ಬದಲಿಸಿದವರು ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ನಾಸಿರ್‌ ಹುಸೇನ್‌ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ ಹಿನ್ನೆಲೆಯಲ್ಲಿ ಸೋಮವಾರ ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಗಂಗೂಲಿ ಬೇರೆಲ್ಲ ಸಂಗತಿಗಳನ್ನು ಬದಿಗಿರಿಸಿ ಕ್ರಿಕೆಟ್‌ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದರು. ಈ ಮೂಲಕ ಭಾರತವನ್ನು ದೊಡ್ಡ ಕ್ರಿಕೆಟ್‌ ಪ್ರೇಮಿ ರಾಷ್ಟ್ರವನ್ನಾಗಿ ಮಾರ್ಪಡಿಸಿದರು,'' ಎಂದರು.

2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್‌ ತಂಡ ಮ್ಯಾಚ್‌ ಫಿಕ್ಸಿಂಗ್‌ ಬಲೆಯಲ್ಲಿ ಸಿಲುಕಿಕೊಂಡ ಬಳಿಕ ಸೌರವ್‌ ಗಂಗೂಲಿ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲಿಂದ ಭಾರತ ತಂಡ ಹಲವಾರು ಸರಣಿಗಳನ್ನು ಗೆಲ್ಲುವ ಜತೆಗೆ 2003ರ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು.

ಹಾಲಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕ್ರಿಕೆಟ್‌ ಐಕಾನ್‌ ಸಚಿನ್‌ ತೆಂಡೂಲ್ಕರ್‌ ಕೂಡ ನಾಸಿರ್‌ ಹೊಸೇನ್‌ ಪ್ರಶಂಸೆಗೆ ಭಾಜನರಾದರು. ''ವಿರಾಟ್‌ ಪಂದ್ಯ ಗೆಲ್ಲುವುದನ್ನು ಬಿಟ್ಟು ಬೇರೇನೂ ಚಿಂತೆ ಮಾಡುವುದಿಲ್ಲ. ಇದು ಅವರ ನಾಯಕತ್ವಕ್ಕೆ ದೊರೆತ ದೊಡ್ಡ ಲಾಭ. ಅದೇ ರೀತಿ ಸಚಿನ್‌ ಅವರಿಗೆ ಸಾಟಿಯಾಗುವ ಕ್ರಿಕೆಟಿಗ ಇನ್ನೊಬ್ಬ ಇಲ್ಲ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌