ಆ್ಯಪ್ನಗರ

ಟೀಮ್‌ ಇಂಡಿಯಾದ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಾಗಿ ಇಬ್ಬರನ್ನು ಹೆಸರಿಸಿದ ದಾದಾ!

ನಾಲ್ಕನೇ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸಮರ್ಥ ಬ್ಯಾಟ್ಸ್‌ಮನ್‌ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇ ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸುವಂತಾಯಿತು ಎಂಬುದು ಹಲವರ ವಾದ. ಇದೀಗ ಮಾಜಿ ನಾಯಕ ಸೌರವ್‌ ಗಂಗೂಲಿ ತಂಡದ ಈ ಗೊಂದಲಕ್ಕೆ ಪರಿಹಾರವಾಗಬಲ್ಲ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.

Vijaya Karnataka Web 19 Sep 2019, 5:23 pm
ಹೊಸದಿಲ್ಲಿ: ಟೀಮ್‌ ಇಂಡಿಯಾ ಕಳೆದ ಎರಡು ವರ್ಷಗಳಿಂದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸಲುವಾಗಿ ಹತ್ತು ಹಲವಾರು ಆಟಗಾರರನ್ನು ಪ್ರಯೋಗ ಮಾಡಿದೆ. ಆದರೂ, ನಂ.4ನಲ್ಲಿ ಆಡುವ ಖಾಯಂ ಆಟಗಾರನನ್ನು ಕಂಡುಕೊಳ್ಳಲು ಈವರೆಗೆ ಸಾಧ್ಯವಾಗಲಿಲ್ಲ.
Vijaya Karnataka Web Sourav Ganguly on no 4 batsman for india


ಕಳೆದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದ್ದ ಏಕಮಾತ್ರ ದೌರ್ಬಲ್ಯವೇ ನಂ.4 ಬ್ಯಾಟ್ಸ್‌ಮನ್‌ನ ಕೊರತೆ. ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ ನಾಲ್ಕನೇ ಕ್ರಮಾಂಕ ತಮ್ಮದಾಗಿಸಿಕೊಳ್ಳುವ ಉತ್ತಮ ಅವಕಾಶಗಳಿತ್ತಾದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.

ಗೋಲ್‌ಗಿಂತಲೂ ಪ್ರೇಯಸಿ ಜತೆಗಿನ ಪ್ರಣಯವೇ ಅಚ್ಚುಮೆಚ್ಚು ಎಂದ ಕ್ರಿಸ್ಟಿಯಾನೊ ರೊನಾಲ್ಡೊ!

ಇದೀಗ ತಂಡದ ಈ ಕೊರತೆಯನ್ನು ಶ್ರೇಯಸ್‌ ಅಯ್ಯರ್‌ ಅಥವಾ ಮನೀಶ್‌ ಪಾಂಡೆ ನೀಗಿಸಬಲ್ಲರು ಎಂದು ಮಾಜಿ ನಾಯಕ ಸೌರವ್‌ ಗಂಗೂಲಿ ಸಲಹೆ ನೀಡಿದ್ದಾರೆ. ಕೆ.ಎಲ್‌ ರಾಹುಲ್‌ ತಮ್ಮ ಕಳೆಪ ಫಾರ್ಮ್‌ನಿಂದಾಗಿ ಇತ್ತೀಚೆಗೆ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಟಿ20 ತಂಡದಲ್ಲಿ ಇದ್ದಾರಾದರೂ ಆಡುವ ಹನ್ನೊಂದರ ಬಳಗದಿಂದಲೂ ಹೊರಬಿದ್ದಿದ್ದಾರೆ.

ಮೊಹಾಲಿಯಲ್ಲಿ ಅಫ್ರಿದಿ ದಾಖಲೆ ಸರಿಗಟ್ಟಿದ ಕೊಹ್ಲಿ!

"ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್‌ ಮತ್ತು ಶಿಖರ್‌ ಧವನ್‌ ಭರ್ಜರಿ ಪ್ರದರ್ಶನ ನೀಡುತ್ತಿದ್ದು ತಮ್ಮ ಸ್ಥಾನಗಳನ್ನು ಭದ್ರ ಪಡಿಸಿಕೊಂಡಿದ್ದಾರೆ. ಹೀಗಾಗಿ ರಾಹುಲ್‌ಗೆ ಕೆಳ ಕ್ರಮಾಂಕದಲ್ಲಿ ಆಡದೆ ಅತ್ಯ ಮಾರ್ಗವಿಲ್ಲ. ಇನ್ನು ಕಳಪೆ ಫಾರ್ಮ್‌ನಿಂದಾಗಿ ಟೆಸ್ಟ್‌ ತಂಡದಿಂದಲೂ ಹೊರಬಿದ್ದಿದ್ದಾರೆ. ಹೀಗಿರುವಾಗ ಶ್ರೇಯಸ್‌ ಅಯ್ಯರ್‌ ಮತ್ತು ಮನೀಶ್‌ ಪಾಂಡೆ ಟೀಮ್‌ ಇಂಡಿಯಾದ 4ನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ," ಎಂದು ಗಂಗೂಲಿ ಹೇಳಿದ್ದಾರೆ.

ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಸಾಕ್ಷಿ ಮಲಿಕ್‌

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ರಾಹುಲ್‌ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಶ್ರೇಯಸ್‌ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇದರಿಂದಾಗಿ ಭಾರತ ಟಿ20 ತಂಡದಲ್ಲೂ ಮುಂಬಯಿ ಆಟಗಾರನಿಗೆ ಅವಕಾಶ ಲಭ್ಯವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದ ಶ್ರೇಯಸ್‌ ನಾಯಕ ವಿರಾಟ್‌ ಜೊತೆ ಉತ್ತಮ ಜೊತೆಯಾಟವಾಡಿದರಲ್ಲೇ ಅಜೇಯ 16 ರನ್‌ಗಳಿಸಿ ತಂಡವನ್ನು ಗುರಿ ಮುಟ್ಟಿಸಲು ನೆರವಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌