ಆ್ಯಪ್ನಗರ

ಮತ್ತೆ ತಾಳ್ಮೆ ಕಳೆದುಕೊಂಡ ಗೌತಮ್ ಗಂಭೀರ್ ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ‌್‌ನಲ್ಲಿ ಬುಧವಾರ ನಡೆದ ಮಹತ್ವದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್‌ಗಳ ಅಂತರದ ಜಯ ದಾಖಲಿಸಿತ್ತು.

ಏಜೆನ್ಸೀಸ್ 27 Apr 2017, 3:27 pm
ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ‌್‌ನಲ್ಲಿ ಬುಧವಾರ ನಡೆದ ಮಹತ್ವದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್‌ಗಳ ಅಂತರದ ಜಯ ದಾಖಲಿಸಿತ್ತು.
Vijaya Karnataka Web gautam gambhir argument with manoj tiwary
ಮತ್ತೆ ತಾಳ್ಮೆ ಕಳೆದುಕೊಂಡ ಗೌತಮ್ ಗಂಭೀರ್ ?


ರಾಬಿನ್ ಉತ್ತಪ್ಪ ಹಾಗೂ ನಾಯಕ ಗೌತಮ್ ಗಂಭೀರ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪುಣೆ ಮೇಲೆ ಸವಾರಿ ಮಾಡಿದ್ದ ಕೆಕೆಆರ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ಅತ್ತ ತಮ್ಮ ಆಕ್ರಮಣಕಾರಿ ನಿಲುವಿನಿಂದಲೇ ಪರ ಹಾಗೂ ವಿರೋಧಿಗಳನ್ನು ಕಟ್ಟಿಕೊಂಡಿರುವ ಗೌತಮ್ ಗಂಭೀರ್, ಮಗದೊಮ್ಮೆ ತಾಳ್ಮೆ ಕಳೆದುಕೊಂಡರೇ ಎಂಬುದು ಪ್ರಶ್ನೆಗೆ ಕಾರಣವಾಗಿದೆ.

pic.twitter.com/uEUPtlUoDP — cricket (@cricketfreak19) April 26, 2017 ಪಂದ್ಯದ ನಡುವೆ ಕೆಕೆಆರ್ ಕ್ಷೇತ್ರರಕ್ಷಕ ಮನೋಜ್ ತಿವಾರಿ ಜೊತೆ ಗಂಭೀರ್ ಗುರುಗುಟ್ಟುವ ದೃಶ್ಯಗಳ ತುಣುಕುಗಳು ಹೊರಬಿದ್ದಿವೆ.

ಪುಣೆ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಎದುರುಗಡೆಯೇ ಈ ಪ್ರಸಂಗ ಎದುರಾಗಿರುವುದು ಮತ್ತಷ್ಟು ಕುತೂಹಲವನ್ನುಂಟು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌